ಗುತ್ತಿಗೆದಾರರೇ ಗುರಿ; ಎರಡನೇ ದಿನವೂ ಐಟಿ ದಾಳಿ ಮುಂದುವರಿಕೆ
Team Udayavani, Oct 9, 2021, 5:40 AM IST
ಬೆಂಗಳೂರು: ನೀರಾವರಿ ಇಲಾಖೆ ಸೇರಿದಂತೆ ಸರಕಾರಿ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರ, ಆದಾಯ ತೆರಿಗೆ ವಂಚನೆ ಆರೋಪ ಸಂಬಂಧ ಶುಕ್ರವಾರ ತಡರಾತ್ರಿಯವರೆಗೂ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರಿಯಿತು.
ಮಾಜಿ ಸಿಎಂ ಬಿಎಸ್ವೈ ಅವರ ಆಪ್ತ ಉಮೇಶ್, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆಪ್ತ ಅರವಿಂದ್, ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ಲೆಕ್ಕಪರಿಶೋಧಕರ ಮನೆ, ಕಚೇರಿಗಳು ಸೇರಿ 50ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಶುಕ್ರವಾರವೂ ಬೆಂಗಳೂರು, ತುಮಕೂರು, ಕೊಪ್ಪಳ ಮತ್ತು ಇತರೆಡೆ ದಾಳಿ ಮುಂದುವರಿಸಿದ್ದು, ಸುಮಾರು 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.
ಈ ವೇಳೆ ಕೆಲವೆಡೆ ದಾಖಲೆಗಳು ಮತ್ತು ಲಕ್ಷಾಂತರ ರೂ. ನಗದು, ನೀರಾವರಿ ಇಲಾಖೆಗೆ ಸಂಬಂಧಿಸಿದ ಗುತ್ತಿಗೆ ಕಡತಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕ್, ಪೆನ್ಡ್ರೈವ್ಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಬಿಎಸ್ವೈ ಆಪ್ತ ಉಮೇಶ್ ಮನೆ ಮತ್ತು ಕಚೇರಿ ಸೇರಿ ನಾಲ್ಕು ಕಡೆ, ಸದಾಶಿವನಗರದಪ್ರಥಮ ದರ್ಜೆ ಗುತ್ತಿಗೆದಾರ ಡಿ.ವೈ.ಉಪ್ಪಾರ ಅವರ ಮನೆ, ಸಹಕಾರ ನಗರದರಾಹುಲ್ ಎಂಟರ್ಪ್ರೈಸಸ್, ಕಂಪೆನಿಗೆ ಕಬ್ಬಿಣ ಮತ್ತು ಸಿಮೆಂಟ್ ಸರಬರಾಜು ಮಾಡುತ್ತಿದ್ದ ಮಳಿಗೆಗಳು, ಉತ್ತರಹಳ್ಳಿಯಲ್ಲಿರುವ ಬಿ.ವೈ.ವಿಜಯೇಂದ್ರ ಅವರ ಆಪ್ತ, ಸಹಪಾಠಿ ಅರವಿಂದ್ ಮನೆ, ಕಚೇರಿ, ಹೆಗಡೆ ನಗರದಲೆಕ್ಕಪರಿಶೋಧಕಿ ಅಮಲಾ ಅವರ ಫ್ಲ್ಯಾಟ್, ವಿದ್ಯಾರಣ್ಯಪುರದನೀರಾವರಿ ಇಲಾಖೆ ಗುತ್ತಿಗೆದಾರ ಲಕ್ಷ್ಮೀಕಾಂತ್ ಮನೆ ಮತ್ತು ಉಮೇಶ್ ಒಡನಾಡಿ ಗುತ್ತಿಗೆದಾರ, ಬಸವೇಶ್ವರನಗರ ನಿವಾಸಿ ಸೋಮಶೇಖರ್ ಎಂಬವರ ಮನೆ ಮೇಲೂ ದಾಳಿ ನಡೆಸಲಾಗಿದೆ.
ಇದನ್ನೂ ಓದಿ:ಬದಲಿ ಇಂಧನ ಬಳಕೆ ಮಾಡಿದರೆ ದೇಶ ಐದು ವರ್ಷಗಳಲ್ಲಿ ನಂ1
ಉಮೇಶ್ ಮತ್ತು ಸೋಮಶೇಖರ್ ನಡುವೆ ಕೋಟ್ಯಂತರ ರೂ. ಅವ್ಯವಹಾರ ನಗದು ಮತ್ತು ಬ್ಯಾಂಕ್ ಖಾತೆಗಳ ಮೂಲಕ ನಡೆದಿದೆ. ಹೀಗಾಗಿ ಸೋಮಶೇಖರ್ ಮನೆಯಲ್ಲಿ ಶೋಧ ನಡೆಸಲಾಗಿದೆ. ಉಮೇಶ್ ಮನೆಯಲ್ಲಿ ಲಭಿಸಿರುವ ಪೆನ್ಡ್ರೈವ್ ಮತ್ತು ನೀರಾವರಿ ಇಲಾಖೆಗೆ ಸೇರಿದ ಕಡತಗಳು, ಬ್ಯಾಂಕ್ ಖಾತೆಗಳ ವಿವರಗಳು ಮತ್ತು ನಿಗದಿತ ಠೇವಣಿಗಳ ಮಾಹಿತಿ ಸಂಗ್ರಹಿಸಲಾಗಿದೆ. ಈ ಆಧಾರದ ಮೇಲೆಯೂ ಸೋಮಶೇಖರ್ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗುತ್ತಿಗೆದಾರ ಶ್ರೀನಿವಾಸ್ ಅವರ ಮನೆಮತ್ತು ಎತ್ತಿನಹೊಳೆ ಯೋಜನೆಯ ಅಂದಾಜು 245 ಕೋಟಿ ರೂ. ಮೌಲ್ಯದ ಟೆಂಡರ್ ಪಡೆದಿತ್ತು ಎನ್ನಲಾದ ತುಮಕೂರಿನ ಕೊರಟಗೆರೆ ತಾಲೂಕಿನ ಸಿಂಗರೇಹಳ್ಳಿಯಲ್ಲಿರುವ ಎಸ್ಎನ್ಸಿ ಕಂಪೆನಿ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಕಂಪೆನಿ ಆವರಣದಲ್ಲಿ ದಾಸ್ತಾನು ಮಾಡಲಾಗಿದ್ದ ಕಬ್ಬಿಣ ಮತ್ತು ಸಿಮೆಂಟ್ನ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಉಮೇಶ್ ಆದಾಯದಲ್ಲಿ ಶೇ. 300ರಷ್ಟು ಏರಿಕೆ?
ಬಿಎಸ್ವೈ ಆಪ್ತ ಉಮೇಶ್ ಅವರ ಆದಾಯದಲ್ಲಿ ಶೇ. 300ರಷ್ಟು ಏರಿಕೆಯಾಗಿರುವುದು ಎರಡು ದಿನಗಳ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಕಾವೇರಿ ನೀರಾವರಿ ನಿಗಮ, ಕೃಷ್ಣಾ ಮೇಲ್ದಂಡೆ ಯೋಜನೆಯ ಅವ್ಯವಹಾರಗಳಲ್ಲಿ ಉಮೇಶ್ ಪಾತ್ರ ಇದೆ ಎನ್ನಲಾಗಿದೆ.
ಬಾಡಿಗೆ ಮನೆವಾಸ!
ಕೋಟ್ಯಂತರ ರೂ. ಅವ್ಯ ವಹಾರದಲ್ಲಿ ಭಾಗಿಯಾಗಿ, ಲಕ್ಷಾಂತರ ರೂ. ವ್ಯಯಿಸಿ ಹೊಸ ಮನೆ ನಿರ್ಮಿಸಿದ್ದರೂ ಉಮೇಶ್ ಬಾಡಿಗೆ ಮನೆಯಲ್ಲಿದ್ದರು. ಈ ಮನೆತನಗೆ ಅದೃಷ್ಟದಾಯಕ ಎಂದು ಭಾವಿಸಿದ್ದೇ ಇದಕ್ಕೆ ಕಾರಣ. ಈ ಮನೆಯಲ್ಲಿ ಹಿಂದೆ ಕೃಷ್ಣಯ್ಯ ಶೆಟ್ಟಿ ಎಂಬವರಿದ್ದರು. ಅವರು ಇಲ್ಲಿದ್ದೇ ಹಣ ಗಳಿಸಿದ್ದರಿಂದ ಉಮೇಶ್ ವಾಸಮುಂದುವರಿಸಿದ್ದರು ಎನ್ನಲಾಗಿದೆ. ವಿಪರ್ಯಾಸವೆಂದರೆ ರಾಜ್ಯ ಗೃಹ ಮಂಡಳಿ ಅವ್ಯವಹಾರದಲ್ಲಿ ಕೃಷ್ಣಯ್ಯ ಶೆಟ್ಟಿ ಬಂಧನವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ