Karnataka; ಮೇ ಕೊನೇ ವಾರ ಮಕ್ಕಳ ಕೈಗೆ ಪಠ್ಯಪುಸ್ತಕ

ಕಳೆದ ವರ್ಷ ಎಪ್ರಿಲ್‌ ತಿಂಗಳಿನಲ್ಲಿ ವಿತರಿಸಿದ್ದರಿಂದ ಸಮಸ್ಯೆಯಾಗಿತ್ತು

Team Udayavani, Feb 11, 2024, 7:00 AM IST

Karnataka; ಮೇ ಕೊನೇ ವಾರ ಮಕ್ಕಳ ಕೈಗೆ ಪಠ್ಯಪುಸ್ತಕ

ಬೆಂಗಳೂರು: ಕಳೆದ ವರ್ಷ ಎಪ್ರಿಲ್‌ನಲ್ಲೇ ಶಾಲಾ ಮಕ್ಕಳ ಕೈಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳು ಸೇರಿದ್ದವು. ಆದರೆ ಈ ವರ್ಷ ಮೇ ತಿಂಗಳ ಕೊನೆಯ ವಾರ ಅಂದರೆ ಶಾಲೆ ಆರಂಭದ ಹಿಂದಿನ ವಾರವಷ್ಟೇ ಪಠ್ಯ ಪುಸ್ತಕಗಳು ಮಕ್ಕಳ ಕೈ ಸೇರಲಿವೆ.

ಜನವರಿ 2ನೇ ವಾರದಲ್ಲಿ ಸರಕಾರದ ಕೈ ಸೇರಬೇಕಾಗಿದ್ದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕನ್ನಡ ಮತ್ತು 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಗಳ ಪಠ್ಯಗಳ ಪರಿಷ್ಕರಣೆಯ ವರದಿ ಇನ್ನೂ ಅಧಿಕೃತವಾಗಿ ಸರಕಾರಕ್ಕೆ ಸೇರಿಲ್ಲ. ಸಮಿತಿಯ ನೀಡಿದ ವರದಿಯ ಆಧಾರದಲ್ಲಿ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ ಕರಡು ತಿದ್ದುಪಡಿ ಮಾಡಿ ಮುದ್ರಣಕ್ಕೆ ಕಳುಹಿಸಲು ಸಾಕಷ್ಟು ಸಮಯದ ಅಗತ್ಯ ಇರುವುದರಿಂದ ಪಠ್ಯ ಪುಸ್ತಕ ವಿತರಣೆ ಈ ವರ್ಷ ವಿಳಂಬವಾಗಲಿದೆ.

2023-24ರ ಸಾಲಿನಲ್ಲಿ ಪಠ್ಯ ಪುಸ್ತಕದ ಮುದ್ರಣದ ಟೆಂಡರ್‌ 2022ರ ಡಿಸೆಂಬರ್‌ ಹೊತ್ತಿಗೆ ಅಖೈರುಗೊಂಡಿತ್ತು. ಎಪ್ರಿಲ್‌ ಮೊದಲ ವಾರದಲ್ಲೇ ಪಠ್ಯ ಪುಸ್ತಕಗಳ ವಿತರಣೆ ಆರಂಭಗೊಂಡು ಆ ತಿಂಗಳ ಕೊನೆಯ ಹೊತ್ತಿಗೆ ಶೇ. 95ಕ್ಕಿಂತ ಹೆಚ್ಚು ಪಠ್ಯ ಪುಸ್ತಕಗಳು ಶಾಲೆ ಅಥವಾ ಮಕ್ಕಳ ಕೈ ಸೇರಿದ್ದವು. ಆದರೆ 2024-25ರ ಸಾಲಿನ ಟೆಂಡರ್‌ನ ಬಿಡ್ಡಿಂಗ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಈ ವಿಳಂಬವನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘದ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ. ಕಳೆದ ವರ್ಷ ನಾವು ಎಪ್ರಿಲ್‌ ಮೊದಲ ವಾರದಲ್ಲೇ ಪಠ್ಯ ಪುಸ್ತಕ ವಿತರಿಸಿದ್ದೇವು. ಆದರೆ ಶಾಲೆ ಆರಂಭಗೊಂಡಾಗ ಹಲವು ಮಕ್ಕಳು ಪುಸ್ತಕವನ್ನು ಹರಿದುಕೊಂಡು, ಕಳೆದುಕೊಂಡು ಶಾಲೆಗೆ ಬಂದಿದ್ದರು. ಆದ್ದರಿಂದ ಈ ವರ್ಷ ಶಾಲೆ ಆರಂಭಕ್ಕೆ ಕೆಲವು ದಿನ ಮುಂಚಿತವಾಗಿ ಪಠ್ಯ ಪುಸ್ತಕ ಹಂಚಿಕೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳುತ್ತಾರೆ.

ದಾಸ್ತಾನಿಗೆ ಸಮಸ್ಯೆ ಆಗಿತ್ತು
ಹಾಗೆಯೇ ಕಳೆದ ವರ್ಷ ವಿಧಾನಸಭಾ ಚುನಾವಣೆಯಿದ್ದ ಹಿನ್ನೆಲೆಯಲ್ಲಿ ಬಹುತೇಕ ಶಾಲೆಗಳು ಮತಕೇಂದ್ರಗಳಾಗಿ ಕಾರ್ಯನಿರ್ವಹಿಸಿದಾಗ ಅಲ್ಲಿ ಪಠ್ಯಪುಸ್ತಕಗಳ ದಾಸ್ತಾನಿಗೆ ಸಮಸ್ಯೆ ಆಗಿತ್ತು. ಈ ವರ್ಷವೂ ಲೋಕಸಭೆ ಚುನಾವಣೆಯಿದ್ದು ಮತ್ತೆ ಶಾಲೆಗಳು ಮತದಾನ ಕೇಂದ್ರಗಳಾಗಿ ಪರಿವರ್ತನೆ ಆಗಲಿವೆ. ಆಗ ಮತ್ತೆ ಪಠ್ಯ ಪುಸ್ತಕಗಳ ದಾಸ್ತಾನಿಗೆ ತೊಂದರೆ ಆಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬಳಿಕವೇ ಪಠ್ಯ ಪುಸ್ತಕ ವಿತರಿಸಿದರೆ ಸೂಕ್ತ ಎಂಬ ನಿರ್ಧರಿಸಲಾಗಿದೆ ಎಂದು ಸಂಘದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಎಲ್ಲ ಪುಸ್ತಕಗಳೂ ಒಟ್ಟಿಗೆ ಮುದ್ರಣ
ಈ ವರ್ಷ ಶಾಲಾ ಮಕ್ಕಳ ಬ್ಯಾಗ್‌ ಹೊರೆಯನ್ನು ಕಡಿಮೆ ಮಾಡಲು ಪ್ರತಿ ವಿಷಯದ ಪಠ್ಯವನ್ನು ಎರಡು ಪ್ರತ್ಯೇಕ ಪುಸ್ತಕಗಳನ್ನಾಗಿ ವಿಭಾಗಿಸಲಾಗಿದ್ದರೂ ಎಲ್ಲ ಪುಸ್ತಕಗಳು ಒಟ್ಟಿಗೆ ಮುದ್ರಣಗೊಳ್ಳಲಿವೆ. ಶೈಕ್ಷಣಿಕ ವರ್ಷದ ಎರಡನೇ ಭಾಗದ ಪಠ್ಯ ಪುಸ್ತಕವನ್ನು ಮತ್ತೂಮ್ಮೆ ಮುದ್ರಿಸಲು ಮುಂದಾದರೆ ಮುದ್ರಣ ವೆಚ್ಚದ ಜತೆಗೆ ಸಾಗಣೆೆ ವೆಚ್ಚವೂ ಹೆಚ್ಚಳವಾಗಲಿದೆ. ಆದ್ದರಿಂದ ಎಲ್ಲ ಪುಸ್ತಕಗಳೂ ಒಟ್ಟಿಗೆ ಮುದ್ರಣಗೊಳ್ಳಲಿವೆ. ಕಳೆದ ವರ್ಷ ಶೈಕ್ಷಣಿಕ ಚಟುವಟಿಕೆಯ ಆರಂಭದಲ್ಲೇ ಮಕ್ಕಳ ಕೈಯಲ್ಲಿ ಪಠ್ಯ ಪುಸ್ತಕ ಇದ್ದಿದ್ದರಿಂದ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ಸಾಗಿತ್ತು. ಈ ವರ್ಷ ಮೇ ಅಂತ್ಯದೊಳಗೆ ಸರಕಾರ ಪಠ್ಯ ಪುಸ್ತಕ ವಿತರಿಸಲು ವಿಫ‌ಲವಾದರೆ ಶೈಕ್ಷಣಿಕ ಚಟುವಟಿಕೆ ಆರಂಭದಲ್ಲೇ ಹಳಿ ತಪ್ಪುವ ಸಾಧ್ಯತೆಯಿದೆ.

ಮಕ್ಕಳಿಗೆ ಡೈರಿ ವಿತರಣೆ
ಕರ್ನಾಟಕ ಪಠ್ಯಪುಸ್ತಕ ಸಂಘ 2024-25ನೇ ಸಾಲಿನ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, 4 ರಿಂದ 9ನೇ ತರಗತಿ ವರ್ಕ್‌ ಬುಕ್‌ ಮತ್ತು 1 ರಿಂದ 12ನೇ ತರಗತಿವರೆಗೆ ರಾಜ್ಯ ಪಠ್ಯಕ್ರಮ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಡೈರಿ ವಿತರಿಸುವ ಟೆಂಡರ್‌ ಕರೆದಿದೆ. ಪಠ್ಯಪುಸ್ತಕಗಳ 861 ಶೀರ್ಷಿಕೆ, 34 ವರ್ಕ್‌ಬುಕ್‌ ಮತ್ತು 2 ಡೈರಿ ಶೀರ್ಷಿಕೆ ಒಳಗೊಂಡಂತೆ ಸುಮಾರು 12.80 ಕೋಟಿ ಪುಸ್ತಕ ಮುದ್ರಣಕ್ಕೆ ಟೆಂಡರ್‌ ಕರೆದಿದೆ. 331 ಕೋಟಿ ರೂ.ಗಳ ಅಂದಾಜು ವೆಚ್ಚದ ಟೆಂಡರ್‌ಗೆ ಇದಾಗಿರಲಿದೆ. ಸದ್ಯ ತಾಂತ್ರಿಕ ಬಿಡ್‌ ಮುಕ್ತಾಯಗೊಂಡಿದ್ದು, ಹಣಕಾಸು ಬಿಡ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಸದ್ಯ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಮೇ ಕೊನೆಯ ವಾರದಲ್ಲಿ ಪಠ್ಯ ಪುಸ್ತಕ ವಿತರಿಸುತ್ತೇವೆ. ಶಾಲೆ ಪ್ರಾರಂಭದ ಹೊತ್ತಿಗೆ ಮಕ್ಕಳ ಕೈಯಲ್ಲಿ ಪಠ್ಯ ಪುಸ್ತಕ ಇರಲಿದೆ.
– ಎನ್‌. ಮಂಜುಶ್ರೀ, ಪಠ್ಯ ಪುಸ್ತಕ ಸಂಘದ ಮುಖ್ಯಸ್ಥೆ

-ರಾಕೇಶ್‌ ಎನ್‌.ಎಸ್‌.

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.