ವಾರ್ ರೂಮ್ ನಲ್ಲಿ ಬಿಜೆಪಿ ಗೂಂಡಾಗಳನ್ನು ನೇಮಿಸಲು ನಾಟಕ: ಕೃಷ್ಣ ಭೈರೇಗೌಡ
Team Udayavani, May 8, 2021, 5:00 PM IST
ಬೆಂಗಳೂರು: ಬೆಡ್ ಬುಕಿಂಗ್ ಹಗರಣದ ಹಿಂದೆ ಕಳೆದ ವರ್ಷ ತಬ್ಲಿಗಿ ಮೇಲೆ ಗೂಬೆ ಕೂರಿಸಿದಂತೆ ಈಗಲೂ ಮಾಡಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಹಾಕಿತ್ತು. 17 ಮಂದಿಯನ್ನ ಕಿತ್ತು ಹಾಕಿ ಬಿಜೆಪಿ ಗೂಂಡಾಗಳನ್ನು ವಾರ್ ರೂಮ್ ಗೆ ನೇಮಿಸಲು ಯತ್ನಿಸಲಾಯಿತು. ಹಾಗಾಗಿ ಫೇಕ್ ಬೆಡ್ ಸ್ಕ್ಯಾಮ್ ಅನ್ನ ಸೃಷ್ಠಿಸಲಾಯಿತು ಎಂದು ಕಾಂಗ್ರೆಸ್ ನ ಕೃಷ್ಣ ಭೈರೇಗೌಡ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ತಮಗೆ ಬೇಕಾದವರಿಗೆ ಬೆಡ್ ಕೊಡಿಸಲು ಯತ್ನಿಸಿದರು. ಬಿಜೆಪಿಯವರು ಅಧಿಕಾರಿಗಳನ್ನು ಹೈಜಾಕ್ ಮಾಡಲು ಯತ್ನಿಸಿದರು. ಇದನ್ನ ಪಾಲಿಕೆ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದ್ದಾರೆ. ದಿಟ್ಟ ಅಧಿಕಾರಿ ಯಶವಂತ್ ಹಾಗೂ ಬಿಜೆಪಿ ನಾಯಕರ ಆಟಕ್ಕೆ ತಡೆ ಹಾಕಿದ್ದಾರೆ. ಬೊಮ್ಮನಹಳ್ಳಿಯಲ್ಲಿ ನಡೆದ ಘಟನೆಯೇ ಬೆಂಗಳೂರು ದಕ್ಷಿಣ ಸಂಸದರ ವ್ಯಾಪ್ತಿಯಯಾಗಿದೆ ಎಂದರು.
ಸಂಸದರ ಹಿಂಬಾಲಕರೇ ಬೆಡ್ ಹಂಚಿಕೆ ಮಾಡುತ್ತಿದ್ದರು. ಆಗ ಐಎಎಸ್ ಅಧಿಕಾರಿ ತುಳಸಿ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿದ್ದರು .ವಾರ್ ರೂಮ್ ನಲ್ಲಿರುವ ಮುಸ್ಲಿಂ ಸಿಬ್ಬಂದಿಯನ್ನು ತೆಗೆದು ಹಾಕಬೇಕು ಎಂದು ಬೊಮ್ಮನಹಳ್ಳಿ ಶಾಸಕರು ಒತ್ತಡ ಹಾಕಿದರು. ಆದರೆ ಮುಸ್ಲಿಂ ಸಮುದಾಯದ ನೌಕರರ ತಪ್ಪಿರಲಿಲ್ಲ ಇದಕ್ಕೆ ಅಧಿಕಾರಿಗಳು ಏಕಾಏಕಿ ಮಾಡಲು ಸಾಧ್ಯವಿಲ್ಲ ಎಂದರು. ಆಗ ಇವರ ಸಿಟ್ಟು ಅಧಿಕಾರಿಗಳ ಮೇಲೆ ತಿರುಗಿದೆ ಎಂದುಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್