ಲಾರಿ ಡಿಕ್ಕಿ: ಮೂವರು ತೀರ್ಥಯಾತ್ರಿ ಗಳ ಸಾವು
Team Udayavani, Mar 28, 2019, 6:51 AM IST
ಬಳ್ಳಾರಿ: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಕೋಡ್ಮೂರು ಸಮೀಪದ ಗದ್ರಾಳು ಕ್ರಾಸ್ ಬಳಿ ಬುಧವಾರ ಬೆಳಗಿನ ಜಾವ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಶ್ರೀಶೈಲಕ್ಕೆ ತೆರಳಿದ್ದ ತಾಲೂಕಿನ ಯರಗುಡಿ ಗ್ರಾಮದ ಮೂವರು ಪಾದಯಾತ್ರಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಡ್ಡಂ ಹುಲುಗಯ್ಯ (29), ಜಿ.ಪೋತಲಿಂಗ (22), ಜಿ.ಶೇಖಪ್ಪ (18) ಮೃತರು. ಯುಗಾದಿ ಹಬ್ಬದಂದು ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದರ್ಶನಕ್ಕಾಗಿ ಪ್ರತಿವರ್ಷದಂತೆ ಈ ವರ್ಷವೂ ತಾಲೂಕಿನ ಯರಗುಡಿ ಗ್ರಾಮದ 41 ಜನರ ತಂಡ ಪಾದಯಾತ್ರೆಯಲ್ಲಿ ತೆರಳಿತ್ತು. ಗದ್ರಾಳು ಕ್ರಾಸ್ನಲ್ಲಿ ಬುಧವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸಂಚರಿಸುತ್ತಿದ್ದ ಪಾದಯಾತ್ರಿಗಳ ಮೇಲೆ ಲಾರಿಯೊಂದು ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ