ಸಚಿವರು ನಮ್ಮನ್ನು ಪರಿಣಿಸುತ್ತಿಲ್ಲ: ಬಿಜೆಪಿ ಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳ ದೂರು
ಮಂತ್ರಿಗಳು ನಮ್ಮ ವಿರೋಧಿಗಳ ಮನೆಯಲ್ಲೇ ಊಟ ಮಾಡಿಕೊಂಡು ಹೋಗುತ್ತಾರೆ...
Team Udayavani, Aug 20, 2022, 5:35 PM IST
ಬೆಂಗಳೂರು: ಆಡಳಿತ ಪಕ್ಷದ ಶಾಸಕರ ಬಳಿಕ ಈಗ ಪರಾಜಿತ ಅಭ್ಯರ್ಥಿಗಳು ಸಚಿವರ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎದುರು ದೂರು ನೀಡಲಾಗಿದೆ.
ಸಚಿವರು ನಮ್ಮನ್ನು ಪರಿಣಿಸುತ್ತಿಲ್ಲ ಎಂದು ದೂರು 2018ರ ವಿಧಾನಸಭಾ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿಗಳು ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವರು ನಮ್ಮನ್ನು ಪರಿಗಣಿಸುವುದೇ ಇಲ್ಲ, ಕಾರ್ಯಕರ್ತರು ನಮ್ಮ ಬಳಿಯೂ ಬಂದು ಸಮಸ್ಯೆ ಹೇಳುತ್ತಾರೆ. ಅದಕ್ಕೆ ನಾವು ಏನು ಅಂತಾ ಸ್ಪಂದಿಸಬೇಕು? ಮಂತ್ರಿಗಳು ಬಂದು ನಮ್ಮ ವಿರೋಧಿಗಳ ಮನೆಯಲ್ಲೇ ಊಟ ಮಾಡಿಕೊಂಡು ಹೋಗುತ್ತಾರೆ. ಹೀಗಾದರೆ ನಾವು ಏನು ಮಾಡಬೇಕು? ಕಾಂಗ್ರೆಸ್ ಒಳಜಗಳದ ಲಾಭವನ್ನುನಾವು ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿಗಳು ಹೇಳಿದ್ದಾರೆ.