ಮಂಗನ ಕಾಯಿಲೆ : ಮತ್ತೆ ಆರು ಮಂದಿಗೆ ಜ್ವರ
Team Udayavani, Jan 17, 2019, 12:45 AM IST
ಕಾರ್ಕಳ/ಸಾಗರ: ಜನರಲ್ಲಿ ಆತಂಕ ಸೃಷ್ಟಿಸಿದ ಮಂಗನ ಕಾಯಿಲೆ ಇದೀಗ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿವಿಧೆಡೆಗೂ ವ್ಯಾಪಿಸಿರುವುದು ದೃಢಪಟ್ಟಿದೆ. ಬುಧವಾರ ಮತ್ತೆ ಆರು ಮಂದಿಗೆ ಜ್ವರ ಕಾಣಿಸಿಕೊಂಡಿದೆ.
ಅಲ್ಲದೆ, ಸಾಗರ ತಾಲೂಕಿನ ಅರಲಗೋಡು ಗ್ರಾಪಂನಿಂದ ಆರಂಭವಾಗಿ ರಾಜ್ಯದ ಮಲೆನಾಡು, ಕರಾವಳಿಯ ವಿವಿಧ ತಾಲೂಕುಗಳಲ್ಲಿ ಕಳೆದ ವಾರ ಮೃತಪಟ್ಟ ಮಂಗಗಳ ಪೋಸ್ಟ್ ಮಾರ್ಟ್ಂ ವರದಿ ಬುಧವಾರ ಲಭ್ಯವಾಗಿದೆ.
ಪರೀಕ್ಷೆಗೊಳಗಾದ ಎಲ್ಲಾ 18 ಪ್ರಕರಣಗಳಲ್ಲಿ ಮಂಗನ ಕಾಯಿಲೆಯ ವೈರಸ್ ಇರುವುದು ದೃಢಪಟ್ಟಿದೆ. ಸಾಗರ ತಾಲೂಕಿನ ಮೂರು ಪ್ರಕರಣಗಳು ಸೇರಿದಂತೆ ಕುಂದಾಪುರ, ಸಿದ್ದಾಪುರ, ಉಡುಪಿ, ಹೊಸನಗರ, ಶಿಕಾರಿಪುರ, ಸೊರಬ, ಕಾರ್ಕಳ ಮೊದಲಾದೆಡೆ ಸಾವನ್ನಪ್ಪಿದ ಮಂಗಗಳಲ್ಲೂ ಪುಣೆಯ ರಾಷ್ಟ್ರೀಯ ಸೂûಾಣುಜೀವಿ ಸಂಶೋಧನಾಲಯ ನಡೆಸಿದ ಪರೀಕ್ಷೆಯಲ್ಲಿ ಕೆಎಫ್ಡಿ ವೈರಸ್ ಇರೋದು ದೃಢಪಟ್ಟಿದೆ.
ಸಾಗರ ತಾಲೂಕು ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬುಧವಾರ ಆರು ಮಂದಿಗೆ ಜ್ವರ ಕಾಣಿಸಿಕೊಂಡಿದ್ದು, ಅವರೆಲ್ಲರನ್ನೂ ಮಣಿಪಾಲ್ಗೆ ರವಾನಿಸಲಾಗಿದೆ.
ಈ ಮಧ್ಯೆ, ತಾಲೂಕಿನ ಹೊನ್ನೇಸರದಲ್ಲಿ ಒಂದು ಮಂಗ ಮೃತಪಟ್ಟಿದ್ದು ಪಶು ಇಲಾಖೆ ಪೋಸ್ಟ್ಮಾಟ್ ಮಾಡಿ ಸ್ಯಾಂಪಲ್ನ್ನು ಪುಣೆಗೆ ಕಳುಹಿಸಿದೆ. ಬುಧವಾರ ಪುಣೆಯಿಂದ ಲಭ್ಯವಾದ ಪ್ರಯೋಗಾಲಯದ ವರದಿ ಪ್ರಕಾರ ಬಂದಗದ್ದೆ, ಸಿರಿವಂತೆ ಹಾಗೂ ಎಂಎಲ್ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮೃತಪಟ್ಟ ಮಂಗಗಳ ಪೋಸ್ಟ್ಮಾರ್ಟ್ಂ ಸ್ಯಾಂಪಲ್ಗಳಲ್ಲಿ ಕೆಎಫ್ಡಿ ವೈರಸ್ ಕುರಿತ ಪರೀಕ್ಷೆ ಪಾಸಿಟಿವ್ ಬಂದಿದೆ.
ಇದೇ ವೇಳೆ, ಕಾರ್ಕಳ ತಾಲೂಕಿನ ನಕ್ರೆಯಲ್ಲಿ 1 ಹಾಗೂ ಕುಕ್ಕುಂದೂರು ಅಯ್ಯಪ್ಪನಗರದಲ್ಲಿ 1 ಕೋತಿಯ ಶವ ಬುಧವಾರ ಪತ್ತೆಯಾಗಿದೆ. ಒಂದು ಶವ ಸಂಪೂರ್ಣ ಕೊಳೆತಿದ್ದು, ಮತ್ತೂಂದರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ನಡುವೆ, ಸಾಗರ ಹಾಗೂ ಆಸುಪಾಸಿನ ಸುಮಾರು 83 ಜನರು ಇಲ್ಲಿಯವರೆಗೆ ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಚಿಕಿತ್ಸೆ ಪಡೆಯಲು ಮಣಿಪಾಲದ
ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾ ರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!