ತುಮಕೂರಿನಲ್ಲಿ ಶಂಕಿತ ಉಗ್ರ ವಶಕ್ಕೆ
Team Udayavani, Jul 31, 2022, 5:20 PM IST
ತುಮಕೂರು: ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಶಂಕಿತ ಉಗ್ರ ಮಹಾರಾಷ್ಟ್ರ ಮೂಲದ ಸಾಜಿದ್ ಮಕ್ರಾನಿ ಎಂದು ತಿಳಿದು ಬಂದಿದೆ. ತಮಕೂರಿನ ಕಾಲೇಜೊಂದರ ವಿದ್ಯಾರ್ಥಿ.
ಐಸಿಸ್ ಜೊತೆ ನಂಟು ಹೊಂದಿದ್ದಾನೆ ಎಂಬ ಶಂಕೆ ಮೇಲೆ ತುಮಕೂರಿನಲ್ಲಿ ಸಾಜಿದ್ ನನ್ನು ಎನ್ ಐ ಎ ತಂಡ ವಶಕ್ಕೆ ಪಡೆದಿದೆ. ಈತ ಸದಾಶಿವ ನಗರದ 9ನೇ ತಿರುವಿನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸ ಇದ್ದ. ಒಟ್ಟು ನಾಲ್ಕು ಜನ ಸ್ನೇಹಿತರು ಜೊತೆಯಲ್ಲಿ ಇದ್ದರು.
ಇದನ್ನೂ ಓದಿ: ಸಾಗರ: ಬೇಳೂರಿನಲ್ಲಿ ಆರು ಶತಮಾನಗಳ ಹಿಂದಿನ ದೇವಾಲಯ ಸಮುಚ್ಛಯ ಬೆಳಕಿಗೆ
ಭಾನುವಾರ ಬೆಳಗಿನ ಜಾವ 4 ಗಂಟೆಗೆ ಬಂದ 20 ಜನ ಎನ್ ಐ ಎ ತಂಡ ಸತತ 6 ಗಂಟೆಗಳ ಕಾಲ ವಿಚಾರಣೆ ಮಾಡಿದೆ. ಆತನ ಬಳಿಯಿದ್ದ ಲ್ಯಾಪ್ ಟಾಪ್, ಮೊಬೈಲ್ ,ಎಲೆಕ್ಟ್ರಾನಿಕ್ ವಸ್ತುಗಳನ್ನು ಸೀಜ್ ಮಾಡಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.
ಮನೆ ಮಾಲೀಕ ಹೇಳುವಂತೆ, ಸಾಜಿದ್ ಮಕ್ರಾನಿ ಸೇರಿ ಒಟ್ಟು ನಾಲ್ಕು ಜನ ಬಾಡಿಗೆ ಪಡೆದಿದ್ದರು. ಕಳೆದ 6 ತಿಂಗಳಿಂದ ಬಾಡಿಗೆ ಇದ್ದರು. ಅವರ ಪೂರ್ವಾಪರ ನಾವು ತಿಳಿದುಕೊಂಡಿರಲಿಲ್ಲ. ಇಂದು ಬೆಳಗ್ಗೆ 20 ಜನ ಅಧಿಕಾರಿಗಳ ತಂಡ ಬಂದಿತ್ತು. ಬೆಳಗಿನ ಜಾವ 4 ಗಂಟೆಯಿಂದ 10 ಗಂಟೆವರೆಗೆ ವಿಚಾರಣೆ ಮಾಡಿದ್ದಾರೆ ಲ್ಯಾಪ್ ಟಾಪ್, ಪಾಸ್ ಪೋರ್ಟ್ ಎಲ್ಲವನ್ನೂ ಸೀಜ್ ಮಾಡಿದ್ದಾರೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್