ಬಿಎಸ್ವೈಗೆ ಹೆದರಲ್ಲ, ಕಣದಿಂದ ಹಿಂದೆ ಸರಿಯಲ
Team Udayavani, Sep 28, 2017, 3:06 PM IST
ಕಲಬುರಗಿ: “ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೆದರಿ ತೇರದಾಳ ಕ್ಷೇತ್ರದಿಂದ ಕಣಕ್ಕಿಳಿಯುವ
ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಡಿಯೂರಪ್ಪ ಅಗಲಿ, ಇನ್ಯಾರಾದ್ರೂ ಆಗ್ಲಿ. ಬರ್ಲಿ ಬಿಡ್ರಿ… ನಾನು ಅಂಜೋ ಮಗಳಲ್ಲ. ತೇರದಾಳಕ್ಕೆ ಬಂದು ಅವರು ಸ್ಪರ್ಧಿಸಲಿ. ಅವರೆದುರು ಗೆಲ್ಲುವ ವಿಶ್ವಾಸ ನನಗಿದೆ. ನಾನು ಮಹಿಳೆ ಎಂದು ಕಡೆಗಣನೆ ಬೇಡ. ಯಡಿಯೂರಪ್ಪ ಅವರಿಗಿಂತ ದೊಡ್ಡ ನಾಯಕರು ಬಂದು ಸ್ಪರ್ಧಿಸಿದರೂ ನಾನು ಹೆದರಿ ಕಣ ಬಿಟ್ಟು ಕೊಡುವ ಮಾತೇ ಇಲ್ಲ. ನಾನು ಎರಡು ಅವಧಿಗೆ ತೇರದಾಳದಿಂದ ಗೆದ್ದು ಬಂದಿದ್ದೇನೆ. ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರವಿದೆ ಎಂದ ಮೇಲೆ ಸ್ಪರ್ಧೆಗೆ ಯಾರಾದರೂ ಬರ್ತಾರೆ ಬರ್ಲಿ ಬಿಡ್ರಿ’ ಎಂದು ಸ್ಪಷ್ಟಪಡಿಸಿದರು.