ಮಳೆ ಹಾನಿ; ಜನರನ್ನು ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ: ಸಿಎಂ
Team Udayavani, Jul 8, 2022, 8:13 PM IST
ಬೆಂಗಳೂರು: ಮಲೆನಾಡು, ಕರಾವಳಿಯಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ.13 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ 17 ತಾಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. ಜೂನ್ ನಿಂದ 12 ಜನ ಸಾವಿಗೀಡಾಗಿದ್ದಾರೆ. 65 ಜಾನುವಾರು ಸಾವಿಗೀಡಾಗಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ,ಮಣ್ಣು ಕುಸಿತ ಆಗುವ ಕೆಳಗಿನ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ. ಮನೆ ಹಾನಿಯಾಗಿದ್ದರೆ ತಕ್ಷಣ 10 ಸಾವಿರ ನೀಡಲು ತೀರ್ಮಾನ, ಮಳೆ ನಿಂತ ನಂತರ ಬೆಳೆ ಹಾನಿ ಪರಿಹಾರ ನೀಡಲಾಗುವುದು ಎಂದರು.
ಎಸ್ ಡಿ ಆರ್ ಎಫ್ ತಂಡ ಉತ್ತರ ಕನ್ನಡದಲ್ಲಿದೆ. ಎನ್ ಡಿ ಆರ್ ಎಎಫ್ ತಂಡ ಮಂಗಳೂರು, ಕೊಡಗಿನಲ್ಲಿದೆ. ಎಸ್ಕಾಂ ಎಂಡಿ ಗಳಿಗೆ ವಿದ್ಯುತ್ ಕಂಬ ಸರಿಪಡಿಸಲು ಸೂಚಿಸಲಾಗಿದೆ. ಕಡಲ ಕೊರೆತ ಉಂಟಾದರೆ ತಾತ್ಕಾಲಿಕವಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ನಂತರ ಶಾಶ್ವತ ಕ್ರಮಕ್ಕೆ ಅಂದಾಜು ಮಾಡಲು ಸೂಚನೆ ನೀಡಲಾಗಿದೆ ಎಂದರು.
ಮುಳುಗಡೆಯಾಗುವ ಗ್ರಾಮಗಳಲ್ಲಿ ಎಸ್ ಡಿ ಆರ್ ಎಫ್ ತಂಡ ಕಳಿಸಲು ಸೂಚನೆ ನೀಡಲಾಗಿದ್ದು, 735 ಕೋಟಿ ರೂ. ಜಿಲ್ಲಾಧಿಕಾರಿಗಳ ಬಳಿ ಇದೆ. ಮೂರು ಹಂತದಲ್ಲಿ ಮಳೆಯಾಗುತ್ತಿದೆ. ವ್ಯಾಪಕವಾಗಿ ಮೂರು ನಾಲ್ಕು ದಿನ ಆಗುವ ಸಾಧ್ಯತೆ ಇದೆ. ಎರಡು ಮೂರು ದಿನದಲ್ಲಿ ಪೂರ್ಣ ನಷ್ಟ ಪತ್ತೆ ಹಚ್ಚಲಾಗುವುದು. ಮಹಾರಾಷ್ಟ್ರ ದಿಂದ ಇನ್ನೂ ಕೊಯ್ನಾದಿಂದ ನೀರು ಬಿಟ್ಟಿಲ್ಲ. ಕೊಲ್ಲಾಪುರ, ಸೊಲ್ಲಾಪುರ ಡಿಸಿಗಳ ಜೊತೆ ಸಂಪರ್ಕದಲ್ಲಿ ಇರಬೇಕು ಅಂತ ಹೇಳಿದ್ದೇನೆ, ಕಾರ್ಯದರ್ಶಿಗಳೂ ಸಂಪರ್ಕದಲ್ಲಿ ಇರುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್