ಭಾಶಿ-ಗುಡ್ನಾಪುರದಲ್ಲಿ ಮಳೆ: ಭತ್ತ, ಅಡಕೆಗೆ ಹಾನಿ
Team Udayavani, Jan 1, 2020, 3:00 AM IST
ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ ಒಂದೆಡೆಗೆ ಚಳಿ ಹೆಚ್ಚಾಗಿ ಇಬ್ಬನಿ ಹನಿಗಳು ಬಿದ್ದಿದ್ದರೆ, ಇನ್ನೊಂದೆಡೆ ಕೆಲವು ಹಳ್ಳಿಗಳಲ್ಲಿ ಅಕಾಲಿಕ ಮಳೆ ಬಿದ್ದಿದೆ. ಸೋಮವಾರ ಸಂಜೆ ಭಾಶಿ ಹಾಗೂ ಗುಡ್ನಾಪುರ ಭಾಗದಲ್ಲಿ ಮಳೆಯಾಗಿದ್ದು ಕಟಾವು ಮಾಡಿದ ಭತ್ತದ ಬೆಳೆ, ಕೊಯ್ದ ಅಡಕೆಗೆ ಭಾರೀ ನಷ್ಟವನ್ನುಂಟು ಮಾಡಿದೆ. ವಾರದ ಹಿಂದೆ ತಾಲೂಕಿನ ಜಾನ್ಮನೆ ಹೋಬಳಿಯಲ್ಲಿ ಮಳೆಯಾಗಿತ್ತು. ಇದರಿಂದ ಭತ್ತದ ಗದ್ದೆಗಳು ತೊಯ್ದು ತೊಪ್ಪೆಯಾಗಿದ್ದವು.
ಇದೀಗ ಭಾಶಿ, ಗುಡ್ನಾಪುರ ಗ್ರಾಪಂ ಭಾಗದಲ್ಲೂ ಮಳೆಯಾಗಿದ್ದು, ರೈತರನ್ನು ಆತಂಕಕ್ಕೆ ಸಿಲುಕಿಸಿದೆ. ಭಾಶಿಯಲ್ಲಿ ಸೋಮವಾರ 18 ಮಿ.ಮೀ. ಮಳೆಯಾಗಿದ್ದರೆ, ಗುಡ್ನಾಪುರದಲ್ಲಿ 23ಮಿ.ಮೀ. ಮಳೆ ಬಿದ್ದಿದೆ. ವರದಾ ನದಿ ಉಕ್ಕಿ ಮಳೆಗಾಲದಲ್ಲಿ ಸಮಸ್ಯೆ ಮಾಡಿದ್ದರೆ, ಈಗ ಮಶಿನ್ನಲ್ಲಿ ಕೊಯ್ಲು ಮಾಡಬೇಕೆಂದುಕೊಂಡಿದ್ದ ರೈತರಿಗೆ ಸಕಾಲಕ್ಕೆ ದೊರೆಯದೆ ಕೊಯ್ಲು ಸ್ವಲ್ಪ ವಿಳಂಬವಾಗಿದೆ. ಇದೀಗ ಅವರೇ ಸ್ವತಃ ಕೊಯ್ಲಿಗೆ ಮುಂದಾಗಿದ್ದು, ಮಳೆಯಲ್ಲಿ ನೆನೆಯುವಂತಾಗಿದೆ ಎನ್ನುತ್ತಾರೆ ಭಾಶಿ ರೈತ ಕಿರಣ ನಾಯ್ಕ ಹಾಗೂ ಇತರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ