ಚಂದ್ರು ಕೊಲೆ ಸಂದರ್ಭ ಭಾಷೆ ಜಟಾಪಟಿ: “ಕನ್ನಡ ಬರುವುದಿಲ್ಲ, ಉರ್ದುವಿನಲ್ಲಿ ಹೇಳು”

ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಭಾಷೆ ವಿಷಯ ಉಲ್ಲೇಖ

Team Udayavani, Jul 16, 2022, 9:47 AM IST

1chandru

ಬೆಂಗಳೂರು: ರಾಜ್ಯಾದ್ಯಂತ ಸಂಚಲನಕ್ಕೆ ಎಡೆಮಾಡಿಕೊಟ್ಟಿದ್ದ ಚಂದ್ರು ಕೊಲೆ ಪ್ರಕರಣದ ತನಿಖೆ ಮುಕ್ತಾಯಗೊಳಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ(ಚಾರ್ಜ್‌ಶೀಟ್‌) ಸಲ್ಲಿಸಿದ್ದು ತನಿಖೆ ವೇಳೆ ಆರೋಪಿ ಶಾಹಿದ್‌ ಪಾಷಾ “ಕನ್ನಡ ಬರುವುದಿಲ್ಲ, ಉರ್ದುವಿನಲ್ಲಿ ಹೇಳು’ ಎಂದು ಚಂದ್ರುವಿಗೆ ಜೋರು ಧ್ವನಿಯಲ್ಲಿ ಹೇಳಿರುವ ಅಂಶ ಉಲ್ಲೇಖೀಸಲಾಗಿದೆ.

ಆದರೆ, ಈ ಹಿಂದಿನ ಕಮೀಷನರ್‌ ಕಮಲ್‌ ಪಂತ್‌ ಅವರು “ಕನ್ನಡ ಬರುವುದಿಲ್ಲ’ ಎಂಬ ಮಾತು ಘಟನೆಗೆ ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಜೈ ಭೀಮ್‌ ನಗರದ ನಿವಾಸಿಗಳಾದ ಚಂದ್ರು ಹಾಗೂ ಸೈಮನ್‌ ರಾಜ್‌ ಸ್ನೇಹಿತರಾಗಿದ್ದು, ಏ.4ರಂದು ರಾತ್ರಿ 12.30ಕ್ಕೆ ಸೈಮನ್‌ ರಾಜ್‌ ತನ್ನ ಹುಟ್ಟುಹಬ್ಬದ ಅಂಗವಾಗಿ ಚಂದ್ರುವಿಗೆ ಚಿಕನ್‌ ರೋಲ್‌ ಕೊಡಿಸಲು ಸ್ಕೂಟರ್‌ನಲ್ಲಿ ತಡರಾತ್ರಿ 2.15ಕ್ಕೆ ಹಳೆಗುಡ್ಡದಹಳ್ಳಿ 9ನೇ ಮುಖ್ಯರಸ್ತೆಗೆ ಹೋಗಿದ್ದರು. ಅಲ್ಲಿ ಚಿಕನ್‌ ರೋಲ್‌ ಅಂಗಡಿ ಮುಚ್ಚಿದ್ದರಿಂದ 200 ಮೀಟರ್‌ ದೂರದಲ್ಲಿದ್ದ ಬೇಕರಿ ಬಳಿ ಸ್ಕೂಟರ್‌ ನಿಲುಗಡೆ ಮಾಡಿದ್ದರು.

ಆ ವೇಳೆ ಅದೇ ರಸ್ತೆ ಯಲ್ಲಿ ನಡೆದುಕೊಂಡು ಹೋಗುತ್ತಿದ್ದ 1ನೇ ಆರೋಪಿ ಶಾಹಿದ್‌ ಪಾಷಾ, “ನನಗೆ ಏಕೆ ಬೈಯುತ್ತೀಯಾ’ ಎಂದು ಹೇಳಿ ಸೈಮನ್‌ ರಾಜ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಿನ್ನನ್ನು ಬೈದಿಲ್ಲ ಹೋಗು ಎಂದು ಸೈಮನ್‌ ರಾಜ್‌ ಆತನಿಗೆ ಹೇಳಿ ಚಂದ್ರು ಜತೆ ಬೇಕರಿಗೆ ಹೋಗಿದ್ದ. ಇಷ್ಟಾದರೂ ಸುಮ್ಮನಾಗದ ಶಾಹಿದ್‌, ಸೈಮನ್‌ ರಾಜ್‌ಗೆ ಬೈಯುತ್ತಲೇಯಿದ್ದ. ಇದರಿಂದ ಆಕ್ರೋಶಗೊಂಡ ಸೈಮನ್‌ ರಾಜ್‌, ಬೇಕರಿಯಿಂದ ಹೊರಗೆ ಬಂದು ಶಾಹಿದ್‌ನನ್ನು ತಳ್ಳಿದ್ದಾನೆ. ಆ ವೇಳೆ ಶಾಹಿದ್‌ ಯಾರನ್ನು ಬೇಕಾದರೂ ಕರೆಯಿರಿ ಎಂದು ಉರ್ದುವಿನಲ್ಲಿ ಹೇಳಿದ್ದ. ಆಗ ಸೈಮನ್‌ ರಾಜ್‌ ಸಹ ನೀನು ಕೂಡ ಯಾರನ್ನು ಬೇಕಾದರೂ ಕರಿ ಎಂದು ಹೇಳಿದ್ದ. ಆ ವೇಳೆ ಆರೋಪಿಯು “ಕನ್ನಡ ನಹಿ ಆತಾ, ಉರ್ದು ಮೆ ಬೋಲೊ’ ಎಂದು ಹೇಳಿ ಜಗಳಕ್ಕೆ ಬಂದಿದ್ದ. ಚಂದ್ರು ಆರೋಪಿಯನ್ನು ತಡೆಯಲು ಪ್ರಯತ್ನಿಸಿದಾಗ, ಶಾಹಿದ್‌ ತನ್ನ ಬಳಿಯಿದ್ದ ಚಾಕು ತೆಗೆದು ಹಲ್ಲೆಗೆ ಮುಂದಾಗಿದ್ದ. ಆ ವೇಳೆ ಸೈಮನ್‌ ರಾಜ್‌ ಆತನ ಕೈಗಳನ್ನು ಹಿಡಿದುಕೊಂಡಿದ್ದ. ಶಾಹಿದ್‌ ಇತರ ಆರೋಪಿಗಳನ್ನು ಕೂಗಿ ಕರೆದಿದ್ದ. ಇತರ ಆರೋಪಿಗಳು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಶಾಹಿದ್‌ ತನ್ನ ಬಳಿಯಿದ್ದ ಚಾಕುವಿನಿಂದ ಚಂದ್ರು ಬಲ ತೊಡೆಗೆ ಚುಚ್ಚಿದ್ದ. 2ನೇ ಆರೋಪಿ ಶಾಹಿದ್‌ ಪಾಷಾ ಸೈಮನ್‌ ರಾಜ್‌ ಮೇಲೆ ಲಾಂಗ್‌ ಬೀಸಿ ಕೊಲೆಗೆ ಯತ್ನಿಸಿದ್ದ. ನಂತರ ಆರೋಪಿಗಳು ಕೃತ್ಯ ನಡೆದ ಸ್ಥಳದಿಂದ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣ ದ ಬಳಿ ಇರುವ ಲಾಡ್ಜ್ನಲ್ಲಿ ರೂಂ ಮಾಡಿಕೊಂಡಿದ್ದರು. ಚಂದ್ರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಿಸದೇ ಮೃತಪಟ್ಟಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಸಿಐಡಿ ಉಲ್ಲೇಖೀಸಿದೆ.

ಇದನ್ನೂ ಓದಿ: ಮಂಗಳೂರು: ಎಂಟು ತಿಂಗಳ ಹೆಣ್ಣುಮಗುವನ್ನು ರಕ್ಷಿಸಿದ ಚೈಲ್ಡ್ ಲೈನ್ ತಂಡ

ಶಾಹಿದ್‌ ಪಾಷಾ (21), ಶಾಹಿದ್‌ ಪಾಷಾ (24), ಮೊಹಮದ್‌ ನಬಿಲ್‌ (20) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ವಿರುದ್ಧ ಸಿಐಡಿ ನ್ಯಾಯಾಲಯಕ್ಕೆ 171 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದೆ. ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 49 ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ.

ಬಿಜೆಪಿ ನಾಯಕರುಕಮಲ್ಪಂತ್ಮಧ್ಯೆ ವಾಗ್ವಾದ ನಡೆದಿತ್ತು

ಚಂದ್ರು ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ಹಾಗೂ ಅಂದಿನ ಪೊಲೀಸ್‌ ಕಮೀಷನರ್‌ ಕಮಲ್‌ ಪಂತ್‌ ನಡುವೆ ಭಾಷೆ ವಿಚಾರವಾಗಿ ಜಟಾಪಟಿ ನಡೆದಿತ್ತು. “ಕನ್ನಡ ಬರುವುದಿಲ್ಲ, ಉರ್ದುವಿನಲ್ಲಿ ಹೇಳು’ ಎಂದು ಆರೋಪಿಗಳು ಬೆದರಿಸಿದ್ದರು. ಇದೇ ವಿಷಯಕ್ಕೆ ಕೊಲೆ ನಡೆದಿದೆ ಎಂಬ ಅರ್ಥದಲ್ಲಿ ಬಿಜೆಪಿ ನಾಯಕರು ಪ್ರತಿಪಾದಿಸಿದ್ದರು. ಆದರೆ, ಇನ್ನು ತಳ್ಳಿ ಹಾಕಿದ್ದ ಕಮಲ್‌ ಪಂತ್‌ ಅವರು, ಭಾಷೆ ವಿಚಾರಕ್ಕೆ ಕೊಲೆ ನಡೆದಿಲ್ಲ. ಬೈಕ್‌ಗಳು ತಾಗಿದ್ದರಿಂದ ಘರ್ಷಣೆ ಉಂಟಾಗಿ ಕೊಲೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಕೋರ್ಟ್‌ಗೆ 171 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಲಾಗಿದ್ದು, ಅದರಲ್ಲಿ ಕೊಲೆ ಸಂದರ್ಭದಲ್ಲಿ ಆರೋಪಿಯೋರ್ವ “ಕನ್ನಡ ಬರುವುದಿಲ್ಲ, ಉರ್ದುವಿನಲ್ಲಿ ಹೇಳು’ ಎಂದು ಬೆದರಿಸಿದ್ದಾರೆ ಎಂಬುದಾಗಿ ಉಲ್ಲೇಖೀಸಲಾಗಿದೆ.

ಟಾಪ್ ನ್ಯೂಸ್

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

6-time Madhya Pradesh MLA Ramniwas Rawat quits Congress, joins BJP

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

6-time Madhya Pradesh MLA Ramniwas Rawat quits Congress, joins BJP

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.