“ಸೇವ್ ಉತ್ತರ ಕರ್ನಾಟಕ’ ಅಭಿಯಾನ ಆರಂಭ
Team Udayavani, Sep 28, 2019, 3:00 AM IST
ಬೆಂಗಳೂರು: ಭೀಕರ ಪ್ರವಾಹದಿಂದ ನಲುಗಿ ಹೋಗಿರುವ ಉತ್ತರ ಕರ್ನಾಟಕಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ತ ಪರಿಹಾರ ನೀಡದೇ ಇರುವುದಕ್ಕೆ ಎಚ್ಚೆತ್ತುಕೊಂಡಿರುವ ಆ ಭಾಗದ ಯುವ ಸಮೂಹ, ಅಂತರ್ಜಾಲದ ಮೂಲಕ “ಉತ್ತರ ಕರ್ನಾಟಕ ಉಳಿಸಿ’ ಅಭಿಯಾನ ಆರಂಭಿಸಿವೆ.
ಸಿಎಂ ಆಫ್ ಕರ್ನಾಟಕ ಹಾಗೂ ಪಿಎಂ ಆಫ್ ಇಂಡಿಯಾ ಟ್ವೀಟ್ ಖಾತೆಗೆ ಸರಣಿ ಟ್ವೀಟ್ಗಳನ್ನು ಟ್ಯಾಗ್ ಮಾಡುವ ಮೂಲ ಅಭಿಯಾನ ಆರಂಭಿಸಿವೆ. ಫೇಸ್ಬುಕ್ಗಳಲ್ಲೂ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕಾಗಿ ವಾಟ್ಸ್ಆಪ್ ಚಾಟ್ಗ್ರೂಪ್ ಕೂಡ ಸಿದ್ಧಪಡಿಸಿದ್ದಾರೆ. ನಾವ್ ನಮ್ಮ ಹಕ್ಕನ್ನ ಕೇಳ್ತಿದಿವಿ ಸಾಮೇ, ನಿಮ್ಮ ಭಿಕ್ಷೆನಲ್ಲ….ನಾವು ಉತ್ತರ ಕರ್ನಾಟಕದವ್ರು,
ತಲೆ ಮೇಲೆ ಹೊತ್ಕೊಂಡು ಮೆರವಣಿಗೆ ಮಾಡೊದು ಗೊತ್ತು, ಕಾಲ್ಕೆಳ್ಗೆ ಹಾಕೊಂಡು ಮಣ್ಣು ಮಾಡೊದು ಗೊತ್ತು… ಕಾವೇರಿ ಕೂಗು ಬೇಗ ಕೇಳುತ್ತೆ, ಉತ್ತರ ಕರ್ನಾಟಕದ ಕೂಗು ಕೇಳಿದರೂ ಕಿವುಡರಂತೆ ವರ್ತಿಸ್ತಾರೆ…ಮಾತಿನಂತೆ ಕೃತಿ ಇರಲಿ, ಆಶ್ವಾಸನೆ ಕೊಟ್ಟು, ಆಮೇಲೆ ಅದು ಹಾಗಲ್ಲ, ಹೀಗಲ್ಲ ಅನ್ನೊದಲ್ಲ. ನಮ್ಮಿಂದ ನೀವು-ನಿಮ್ಮಿಂದ ನಾವಲ್ಲ…ಹೀಗೆ ನೂರಾರು ಯುವ ಸಮೂಹ ಸರಣಿ ಟ್ವೀಟ್ಗಳನ್ನು ಟ್ಯಾಗ್ ಮಾಡುವ ಮೂಲಕ ಅಭಿಯಾನ ಆರಂಭಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ