ಸಚಿವ ಪಾಟೀಲ್ನ ನಿರ್ಲಕ್ಷ್ಯ ಮಾಡಲು ನಿರ್ಧರಿಸಿದ್ದೇವೆ
Team Udayavani, Jan 15, 2019, 6:58 AM IST
ಧಾರವಾಡ: ‘ಎಂ.ಬಿ.ಪಾಟೀಲನಿಗೆ ಕೆಲ ವಿಚಾರ ಗೊತ್ತಿಲ್ಲ. ಅದಕ್ಕೆ ಹೀಗೆಲ್ಲ ಮಾತನಾಡಿದ್ದಾನೆ. ಆತನನ್ನು ನಿರ್ಲಕ್ಷ್ಯ ಮಾಡಿ ಬಿಡಬೇಕು ಅಂತ ನಾವೆಲ್ಲ ನಿರ್ಧರಿಸಿದ್ದೇವೆಂದು’ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಿರಿಯನಾಗಿ ಕೆಲವು ಮಾತುಗಳನ್ನು ಹೇಳಿದಾಗ ಅವರು ಸುಧಾರಿಸಿಕೊಳ್ಳಬೇಕಿತ್ತು. ಈ ಹಿಂದೆ ಅವರೇನಿದ್ದರು ಗೊತ್ತಾ? ಪ್ರಭಾಕರ ಕೋರೆ ಮತ್ತು ನಾನು ಎಂಬಿಗೆ ತುಂಬಾ ಸಹಾಯ ಮಾಡಿದ್ದೇವೆ. ಅದನ್ನೆಲ್ಲ ಆತ ಈಗ ಮರೆತು ಬಿಟ್ಟಿದ್ದಾನೆ. ನಾನು ಈ ಬಗ್ಗೆ ಮಾತನಾಡಬಾರದು ಅಂತ ವಿಷಯ ಮುಗಿಸಿದ್ದೇನೆ ಎಂದರು.
ನನಗೆ ಸಚಿವ ಸ್ಥಾನ ಏನೂ ಬೇಕಾಗಿಲ್ಲ. ಬಿಜೆಪಿ ಪಕ್ಷದವರಿಂದ ಏನೂ ಆಗಲ್ಲ. ಸುಮ್ಮನೆ ಅವರು ಸರ್ಕಾರ ಬೀಳಿಸುವ ಮಾತುಗಳನ್ನು ಹೇಳುತ್ತ ಇರುತ್ತಾರಷ್ಟೇ. ನಮ್ಮ ಪಕ್ಷದಿಂದ ಯಾರೂ ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.