ಸಿದ್ದರಾಮಯ್ಯಗೆ ಹಿಂದು ಎನ್ನುವುದು ಗೊತ್ತಾಗಿದೆ:ಯೋಗಿ
Team Udayavani, Jan 7, 2018, 2:17 PM IST
ಬೆಂಗಳೂರು: ‘ನಿಮ್ಮ ಒಗ್ಗಟ್ಟು ರಾಹುಲ್ ಗಾಂಧಿ ಅವರು ಗುಜರಾತ್ನಲ್ಲಿ ಹೇಗೆ ದೇಗುಲಗಳ ದರ್ಶನ ಮಾಡಿಸಿತೋ ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದು ಎನ್ನುವುದನ್ನು ಗೊತ್ತಾಗಿಸಿದೆ’ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಟಾಂಗ್ ನೀಡಿದರು.
ವಿಜಯನಗರದ ಎಂ.ಸಿ.ಬಡಾವಣೆಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಪ್ರಮುಖ ಭಾಷಣ ಮಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.
‘ನಾನು ನಿನ್ನೆಯೆ ಇಲ್ಲಿಗೆ ಬಂದಿದ್ದೆ ಪತ್ರಿಕೆಯೊಂದರಲ್ಲಿ ನೋಡಿದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನಾನು ಹಿಂದು ಎಂದು ಹೇಳಿಕೊಂಡಿರುವುದು. ನಿಮ್ಮ ಒಗ್ಗಟ್ಟು ಎನ್ನುವುದು ಅವರಿಂದ ಈ ಹೇಳಿಕೆ ಹೊರ ಬರುವಂತೆ ಮಾಡಿದೆ’ ಎಂದರು.
‘ಹಿಂದುತ್ವ ಭಾರತದ ಜೀವನ ಪದ್ಧತಿ. ಇದು ಜಾತಿ ಮತ ಅಲ್ಲ, ಭಾರತದ ಅನುಸಾರ ಜೀವನ ಮಾಡುವ ವಿಶ್ವದ ಉತ್ಕೃಷ್ಟ ಜೀವನ ಪದ್ಧತಿ . ಹಿಂದು ಧರ್ಮದಲ್ಲಿ ಗೋಮಾಂಸ ತಿನ್ನುವುದನ್ನು ಒಪ್ಪುವುದಿಲ್ಲ. ನೀವು ಗೋಮಾಂಸ ತಿನ್ನುವುದನ್ನು ನಾವು ಒಪ್ಪುತ್ತೇವಾ’ ಎಂದು ಪ್ರಶ್ನಿಸಿದರು.
‘ಬಿಜೆಪಿ ಅಧಿಕಾರದಲ್ಲಿದ ವೇಳೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಿದ್ದೇವು.ಆದರೆ ಕಾಂಗ್ರೆಸ್ ಅದನ್ನು ತೆಗೆದುಹಾಕಿತು. ತುಷ್ಟೀಕರಣ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ’ ಎಂದು ಕಿಡಿ ಕಾರಿದರು.
‘ಮುಂದಿನ ದಿನಗಳಲ್ಲಿ ಕರ್ನಾಟಕದ ಅಭಿವೃದ್ದಿಗೆ ಬಿಜೆಪಿಗೆ ಮತ ನೀಡಿ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾಡುತ್ತಿರುವ ಸಮಗೃ ಭಾರತದ ಅಭಿವೃದ್ಧಿಗೆ ಕೈಜೋಡಿಸಿ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್