ವಿದ್ಯಾರ್ಥಿನಿ ಸಾವು ಸಿಐಡಿ ತನಿಖೆ ಚುರುಕು
Team Udayavani, Apr 27, 2019, 4:30 AM IST
ರಾಯಚೂರು: ನಗರದ ನವೋದಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಸಿಐಡಿ ಪೊಲೀಸರು, ಶುಕ್ರವಾರ ಆರೋಪಿ ಸುದರ್ಶನ ಯಾದವ್ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿ ಹಾಗೂ ಸುದರ್ಶನ್ ಸ್ನೇಹಿತರಿಂದ ಮತ್ತಷ್ಟು ಮಾಹಿತಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಗುರುವಾರ ಆರೋಪಿ ಹಾಗೂ ಯುವತಿ ಮನೆಗಳಿಗೆ ತೆರಳಿದ್ದ ಸಿಐಡಿ ಪೊಲೀಸರು, ಅವರ ಪಾಲಕರಿಂದ ಅಗತ್ಯ ಮಾಹಿತಿ ಪಡೆದಿದ್ದರು.