ಶಿರಾಡಿ ಬಳಿ ಶಂಕಿತ ನಕ್ಸಲರು ?
Team Udayavani, Jan 15, 2018, 9:47 PM IST
ಉಪ್ಪಿನಂಗಡಿ: ಶಸ್ತ್ರಸಜ್ಜಿತ ಶಂಕಿತ ನಕ್ಸಲರ ತಂಡವೊಂದರ ಚಲನವಲನ ಪತ್ತೆಯಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಶಿರಾಡಿ ಸಮೀಪದ ಅಡ್ಡಹೊಳೆ ಕಾಡಿನಲ್ಲಿ ಕಂಡುಬಂದಿದೆ.
ಶಸ್ತ್ರಸಜ್ಜಿತರಲ್ಲಿ ಓರ್ವ ಯುವತಿ ಸಹಿತ ಮೂವರ ತಂಡವನ್ನು ಸ್ಥಳೀಯರು ಕಂಡಿದ್ದು ಶಂಕಿತ ನಕ್ಸಲರೆಂದು ತಿಳಿದುಬಂದಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಶಂಕಿತ ನಕ್ಸಲರು ಉಪಯೋಗಿಸಿದ ಆಹಾರ ವಸ್ತುಗಳ ಸಂಗ್ರಹ ಪತ್ತೆಯಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.