ಪಠ್ಯ ಪರಿಷ್ಕರಣೆ ವಿವಾದ: ಶಿಕ್ಷಣ ಸಚಿವರಿಂದ ಸಿಎಂಗೆ ವರದಿ ಸಲ್ಲಿಕೆ
Team Udayavani, Jun 3, 2022, 11:39 PM IST
ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಕುರಿತ ವಿವಾದಕ್ಕೆ ಸಂಬಂಧಿಸಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಕ್ರವಾರ ವರದಿ ಸಲ್ಲಿಸಿದ್ದಾರೆ.
ಭಗತ್ಸಿಂಗ್, ನಾರಾಯಣ ಗುರು, ಬಸವಣ್ಣ ಪಠ್ಯ ಕುರಿತ ಆರೋಪಕ್ಕೆ ಸಂಬಂಧಿಸಿದಂತೆ ವಾಸ್ತವಾಂಶದ ವಿವರ ಹಾಗೂ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧದ ಆರೋಪ, ಬರಗೂರು ರಾಮಚಂದ್ರಪ್ಪ ಅವರ ಸಮಿತಿಯಲ್ಲಿದ್ದ ಪಠ್ಯದ ವಿವರ, ಪ್ರಸ್ತುತ ಪಠ್ಯದಲ್ಲಿನ ವಿವರ ನೀಡಿದ್ದಾರೆ.
ಕುವೆಂಪು ಅವರ ಬಗ್ಗೆ ಅಪಮಾನಕರ ಅಂಶ ಗಳಿಲ್ಲ ಎನ್ನುವುದನ್ನೂ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.