ಸಂಪುಟ ವಿಸ್ತರಣೆ ಬಳಿಕ ಸರ್ಕಾರ ಪತನ
Team Udayavani, Dec 17, 2019, 3:00 AM IST
ಬಾಗಲಕೋಟೆ: ಮೂರೂವರೆ ವರ್ಷ ಕಾಯಂ ಸರ್ಕಾರ ನಡೆಸುತ್ತೇವೆಂದು ಬಿಜೆಪಿ ಭಾವಿಸಿದ್ದರೆ ಅದು ಹಗಲುಗನಸು ಮಾತ್ರ. ಸಂಪುಟ ವಿಸ್ತರಣೆ ಬಳಿಕ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಉಪಚುನಾವಣೆ ಫಲಿತಾಂಶ ನಮ್ಮ ನಿರೀಕ್ಷೆಯಂತೆ ಬಂದಿಲ್ಲ.
ಸಿದ್ದರಾಮಯ್ಯ ಹಾಗೂ ದಿನೇಶ ಗುಂಡೂರಾವ್ ರಾಜೀನಾಮೆ ಸ್ವೀಕಾರ ಹೈಕಮಾಂಡ್ಗೆ ಬಿಟ್ಟಿದ್ದು. ಸಿದ್ದರಾಮಯ್ಯ ಹೃದಯ ಚಿಕಿತ್ಸೆಗೆ ಒಳಗಾದಾಗ ರಮೇಶ ಜಾರಕಿಹೊಳಿ ಸಹಿತ ಹಲವು ನಾಯಕರು ಭೇಟಿ ನೀಡಿದ್ದಾರೆ. ಅನಾರೋಗ್ಯ, ಸಾವು-ನೋವು ಸಂಭವಿಸಿ ದಾಗ ರಾಜಕೀಯ ಬದಿಗಿಟ್ಟು ಮಾತನಾಡಿಸುವುದು ಸಂಪ್ರದಾಯ. ರಮೇಶ ಸಿದ್ದರಾಮಯ್ಯ ಭೇಟಿ ಮಾಡಿದ್ದಕ್ಕೂ ರಾಜಕೀಯ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.