ಬಿಹಾರದಲ್ಲಿ ರಾಜ್ಯದ ಯೋಧ ಮೃತ
Team Udayavani, May 7, 2019, 3:00 AM IST
ಔರಂಗಾಬಾದ್: ಕರ್ನಾಟಕ ಮೂಲದ ಸಿಆರ್ಪಿಎಫ್ ಯೋಧ ಸುನೀಲ್ ಬೆಳಗಾಂ(33) ಬಿಹಾರದ ಔರಂಗಾಬಾದ್ನಲ್ಲಿ ಮೃತಪಟ್ಟಿದ್ದಾರೆ. ಔರಂಗಾಬಾದ್ ಜಿಲ್ಲೆಗೆ ತೆರಳುವಾಗ ಸುನೀಲ್ ಇದ್ದ ಎಸ್ಯುವಿಗೆ ಟ್ರಕ್ವೊಂದು ಡಿಕ್ಕಿ ಹೊಡೆದಿದೆ.
ಎಸ್ಯುವಿಯಲ್ಲಿ ಯೋಧರು ಪ್ರಯಾಣಿಸುತ್ತಿದ್ದರು. ಅಪಘಾತ ತೀವ್ರತೆ ಹೇಗಿತ್ತೆಂದರೆ, ಲಾರಿ ಗುದ್ದಿದ ರಭಸಕ್ಕೆ ಎಸ್ಯುವಿ ರಸ್ತೆ ಬದಿಯ ಹೊಂಡಕ್ಕೆ ಉರುಳಿದೆ.
ಕೂಡಲೇ ಯೋಧರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ನಂತರ ಜಮುಹಾರ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಐವರು ಯೋಧರಿಗೆ ಗಾಯವಾಗಿದ್ದು, ಯೋಧರೊಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.