ಮಕ್ಕಳಿಗೆ ಚಿತ್ರಹಿಂಸೆ: ದಂಪತಿ ಸೆರೆ
Team Udayavani, Jun 24, 2021, 7:00 AM IST
ಬೆಂಗಳೂರು: ಎರಡನೇ ಪತ್ನಿ ಜತೆ ಸೇರಿಕೊಂಡು ತನ್ನ ಮೂವರು ಮಕ್ಕಳ ಮೇಲೆ ತಂದೆಯೇ ಪೈಶಾಚಿಕ ಕೃತ್ಯ ಎಸಗಿದ್ದು, ಈ ಸಂಬಂಧ ದಂಪತಿಯನ್ನು ಬಂಧಿಸಲಾಗಿದೆ.
ರಾಗಿಗುಡ್ಡ ನಿವಾಸಿ ತಮಿಳು ಸೆಲ್ವನ್ (45) ಮತ್ತು ಆತನ 2ನೇ ಪತ್ನಿ ಸತ್ಯಾ (35)ಬಂಧಿತರು. ಗಾಯಗೊಂಡಿರುವ ಸೌಮ್ಯಾ(3), ರಾಘವನ್ (4) ಹಾಗೂ ನಿತೇಶ್(6) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೂಸರ್ ವಾಹನ ಚಾಲಕನಾಗಿ ರುವ ತಮಿಳುನಾಡು ಮೂಲದ ತಮಿಳುಸೆಲ್ವನ್ 8 ವರ್ಷಗಳ ಹಿಂದೆ ಅಂಜಲಿ ಎಂಬವರನ್ನು ವಿವಾಹ ವಾಗಿದ್ದು, ದಂಪತಿಗೆ ಮೂರು ಮಕ್ಕಳಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಅಂಜಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಮಿಳುಸ್ವೆಲ್ವನ್ ಸತ್ಯಾ ಜತೆ 3 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಆಕೆಯೊಂದಿಗೆ ಬೇರೆಡೆ ಸಂಸಾರ ನಡೆಸುತ್ತಿದ್ದ. ಈಕೆಗೂ ಇಬ್ಬರು ಮಕ್ಕಳಿದ್ದು, ಈ ವಿಚಾರ ಅಂಜಲಿಗೆ ಗೊತ್ತಿರಲಿಲ್ಲ. ಅಂಜಲಿ ಮೃತಪಟ್ಟ ಬಳಿಕ ಸತ್ಯಾಳನ್ನು ಮನೆಗೆ ಕರೆ ತಂದಿದ್ದ. ಸತ್ಯಾ ತನ್ನ ಇಬ್ಬರು ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟಿದ್ದಳು ಎಂದು ಪೊಲೀಸರು ಹೇಳಿದರು.
ಬಳಿಕ ಸತ್ಯಾಳ ಮಾತು ಕೇಳಿ ತನ್ನ ಮೂವರು ಮಕ್ಕಳಿಗೆ ತಮಿಳುಸೆಲ್ವನ್ ಚಿತ್ರಹಿಂಸೆ ನೀಡುತ್ತಿದ್ದ. ದಂಪತಿಯು ಮಕ್ಕಳ ಬಾಯಿಗೆ ಬಟ್ಟೆ ಕಟ್ಟಿ, ಚಾಕುವನ್ನು ಕಾಯಿಸಿ ಭುಜ, ಮೊಣಕೈ, ಪಾದಗಳಿಗೆ ಸುಟ್ಟಿದ್ದಾರೆ. ಎಕ್ಸಾ ಬ್ಲೇಡ್ನಿಂದ ಚರ್ಮ ಕೊಯ್ದು, ಸೂðಡ್ರೈವರ್ನಿಂದ ಚುಚ್ಚುತ್ತಿದ್ದರು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದರು.
ಸ್ಥಳೀಯರಿಂದ ಪ್ರಕರಣ ಬೆಳಕಿಗೆ : ಮಕ್ಕಳು ಸ್ವೆಟರ್ ಹಾಕಿಕೊಂಡು ಓಡಾಡುತ್ತಿದ್ದರು. ಅನುಮಾನಗೊಂಡು ಸ್ಥಳೀಯರು ಸ್ವೆಟರ್ ಬಿಚ್ಚಿದಾಗ ಸುಟ್ಟ ಗಾಯಗಳಿದ್ದವು. ಈ ನಡುವೆ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮೂವರು ಮಕ್ಕಳಿಗೆ ಬರೆ ಎಳೆದು ಕ್ರೌರ್ಯ ಮೆರೆದಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ