ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

ಸರಕಾರಕ್ಕೆ ಸಲ್ಲಿಸಿದ್ದರೂ ಸಿಗದ ಸ್ಪಂದನೆ

Team Udayavani, Dec 1, 2020, 6:55 AM IST

ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

ಸಾಂದರ್ಭಿಕ ಚಿತ್ರ

ವಿಜಯಪುರ: ದೇಶದ ಎಚ್‌ಐವಿ ಸೋಂಕಿತರು ಹಾಗೂ ಏಡ್ಸ್‌ ರೋಗಿಗಳ ಆರೋಗ್ಯ ಸುರಕ್ಷೆಗಾಗಿ ಇಲ್ಲಿನ ಯುವಕರಿಬ್ಬರು ಆ್ಯಪ್‌ ಹಾಗೂ ಸ್ಮಾರ್ಟ್‌ ಕಾರ್ಡ್‌ ಸಿದ್ಧಪಡಿಸಿದ್ದು, ಅನುಮತಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ.

ಮುದ್ದೇಬಿಹಾಳ ತಾಲೂಕಿನ ಜಗದೀಶ ಗಂಜ್ಯಾಳ, ಚಡಚಣದ ಜುಲಿಧೀಕರ ನೇಗಿನಾಳ ಅವರ 5 ವರ್ಷಗಳ ಪ್ರಯತ್ನದ ಫ‌ಲ ಇದಾಗಿದ್ದು, ಸುಮಾರು 5 ಲ. ರೂ. ಖರ್ಚಾಗಿದೆ.

ಆ್ಯಪ್‌ನಲ್ಲಿ ಸೋಂಕಿತರ ಸಮಗ್ರ ದಾಖಲೆ ಇರಲಿದ್ದು, ಸೋಂಕಿತರಿಗೆ ಸಂಕೇತ ದಾಖಲೆ ಇರುವ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತದೆ. ಇದರಿಂದ ರೋಗಿಗಳು ಮೂಲ ಸ್ಥಳದಿಂದ ರಾಜ್ಯದ ಯಾವುದೇ ಮೂಲೆಗೆ ಹೋದರೂ ಔಷಧ ಪಡೆಯಲು ಸುಲಭವಾಗಲಿದೆ. ರೋಗಿಯ ಸ್ಥಿತಿಗತಿ ಅರಿಯಲು ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಚಿಕಿತ್ಸೆ ನೀಡುವ ವೈದ್ಯರು ಹಾಗೂ ರೋಗಿಗೆ ಮಾತ್ರ ಮಾಹಿತಿ ಕಾಣುವಂತೆ ಸ್ಮಾರ್ಟ್‌ ಕಾರ್ಡ್‌ದಾರರ ಸುರಕ್ಷೆಗೆ ಆದ್ಯತೆ ನೀಡಲಾಗಿದೆ. ಇದರಿಂದ ಸರಕಾರ ಮತ್ತು ರಾಜ್ಯದ ಸುಮಾರು 4.74 ಲಕ್ಷ ಎಚ್‌ಐವಿ-ಏಡ್ಸ್‌ ಸೋಂಕಿತರಿಗೂ ಪ್ರಯೋಜನ ಸಿಗಲಿದೆ ಎಂದು ಹೇಳುತ್ತಿದ್ದಾರೆ ಜಗದೀಶ ಹಾಗೂ ಜುಲಿಧೀಕರ್‌ ಅವರು.

ಮಹಾರಾಷ್ಟ್ರ, ತೆಲಂಗಾಣ, ಆಂಧ್ರದಲ್ಲೂ ಮೆಚ್ಚುಗೆ
ರಾಜ್ಯದ ಏಡ್ಸ್‌ ಪ್ರಿವೆನ್ಸ್ ನ್‌ ಸೊಸೈಟಿ ಹಾಗೂ ಎಆರ್‌ಟಿ ಕೇಂದ್ರದ ಸಿಬಂದಿಯೂ ಆ್ಯಪ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಆರೋಗ್ಯ ಸಚಿವರಿಗೂ ಸಲ್ಲಿಸಲಾಗಿದ್ದು, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಜತೆಗೆ ಆ್ಯಪ್‌ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಸರಕಾರಗಳಿಗೂ ತಲುಪಿದ್ದು, ಅನುಷ್ಠಾನದ ಮಾತುಕತೆ ನಡೆದಿದೆ.

ನನ್ನ ತಂದೆ ಅಬ್ದುಲ್‌ ಗಫೂರ್‌ ಅವರು ಆರೋಗ್ಯ ಇಲಾಖೆಯಲ್ಲಿದ್ದ ಸೇವೆಯ ಲ್ಲಿದ್ದು, ಅಲ್ಲಿಗೆ ಔಷಧಕ್ಕಾಗಿ ಬರುವ ಎಚ್‌ಐವಿ ಸೋಂಕಿತರ ಪರದಾಟ ನೋಡಿದ್ದೆ. ಇದನ್ನು ಸರಳೀ ಕರಿಸಿ ರೋಗಿಗಳಿಗೆ ನೆಲೆಸಿದ ಸ್ಥಳದಲ್ಲೇ ಸುರಕ್ಷಿತವಾಗಿ ಮಾತ್ರೆ ಸಿಗುವಂತೆ ಹಾಗೂ ಸರಕಾರಕ್ಕೆ ಪೇಪರ್‌ಲೆಸ್‌, ಆರ್ಥಿಕ ವೆಚ್ಚ ಕಡಿತ ಮಾಡುವ ಸದಾಶಯದಿಂದ ಆ್ಯಪ್‌-ಸ್ಮಾರ್ಟ್‌ ಕಾರ್ಡ್‌ ರೂಪಿಸಿದ್ದೇವೆ.
-ಜುಲಿಧೀಕರ ನೇಗಿನಾಳ, ಮುಖ್ಯಸ್ಥ, ಸಿ.ವಿ. ರಾಮನ್‌ ಟೆಕ್ನಾಲಜಿಸ್‌, ವಿಜಯಪುರ

ಆರ್ಥಿಕವಾಗಿ ನಾವೇನೂ ಸಬಲರಲ್ಲ. ಆದರೆ ನಮ್ಮಲ್ಲಿರುವ ಜ್ಞಾನದ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಹಾಗೂ ಎಚ್‌ಐವಿ-ಏಡ್ಸ್‌ ಸೋಂಕಿತರ ಹಿತದೃಷ್ಟಿಯಿಂದ ಆ್ಯಪ್‌-ಸ್ಮಾರ್ಟ್‌ ಕಾರ್ಡ್‌ ರೂಪಿಸಿದ್ದೇವೆ. ಸರಕಾರ ಒಪ್ಪಿಕೊಂಡರೆ ನಮ್ಮ ಪರಿಶ್ರಮ ಸಾರ್ಥಕವಾಗುತ್ತದೆ.
-ಜಗದೀಶ ಗಂಜ್ಯಾಳ, ಎಚ್‌ಐವಿ ಸೋಂಕಿತರ ಸಾಫ್ಟ್‌ವೇರ್‌ ಶೋಧಕ, ವಿಜಯಪುರ

– ಜಿ.ಎಸ್‌. ಕಮತರ

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.