ಬುರ್ಜ್ ಖಲೀಫಾದ ಒಂದು ದೀಪ ಖರೀದಿಸಿ ಬಡವರಿಗೆ ಊಟ ಒದಗಿಸಲು ನೆರವಾಗಿ!
Team Udayavani, May 5, 2020, 7:47 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಿಶ್ವದ ಅತಿ ಎತ್ತರದ ಕಟ್ಟಡ ‘ಬುರ್ಜ್ ಖಲೀಫಾ’ ಕೋವಿಡ್ 19 ಸೋಂಕು ಬಾಧಿತರಿಗೆ ನೆರವು ನೀಡಲು ಇದೀಗ ಮುಂದೆ ಬಂದಿದೆ.
ಸುಮಾರು ಒಂದು ಕೋಟಿ ಮಂದಿ ಬಡವರಿಗೆ ಊಟ ಪೂರೈಸುವ ಅಭಿಯಾನವನ್ನು ಇದು ಪ್ರಾರಂಭಿಸಿದ್ದು ಬುರ್ಜ್ ಖಲೀಫಾ ಕೈಗೊಂಡಿರುವ ಈ ಅಭಿಯಾನ ವಿನೂತನವಾಗಿದ್ದು, ನಾವು, ನೀವೂ ಸಹ ಇದರಲ್ಲಿ ಭಾಗಿಗಳಾಗಬಹುದಾಗಿದೆ.
ಅದು ಹೇಗೆಂದರೆ, ತನ್ನ ಕಟ್ಟಡದಲ್ಲಿರುವ ಅಷ್ಟೂ ಲೈಟ್ಗಳನ್ನು ಆನ್ ಲೈನ್ ಮೂಲಕ ಹರಾಜು ಹಾಕಲಿರುವ ಬುರ್ಜ್ ಖಲೀಪಾ, ಈ ಲೈಟ್ ಗಳನ್ನು ಖರೀದಿಸಿ ದೇಣಿಗೆ ನೀಡುವಂತೆ ಜನರಲ್ಲಿ ಮನವಿಯನ್ನು ಮಾಡಿಕೊಂಡಿದೆ. ಈ ಕಟ್ಟಡದಲ್ಲಿ ಒಟ್ಟು 1.2 ಮಿಲಿಯನ್ ದೀಪಗಳಿವೆ.
ಒಂದು ಲೈಟ್ಗೆ 10 ದಿರ್ ಹಮ್ (206 ರೂ.) ನಿಗದಿಪಡಿಸಲಾಗಿದ್ದು, ಈ ಮೂಲಕ ಸಂಗ್ರಹವಾಗುವ ಒಟ್ಟು ಮೊತ್ತದಲ್ಲಿ 1 ಕೋಟಿ ಮಂದಿಗೆ ಊಟ ಒದಗಿಸುವ ಯೋಜನೆ ಇದಾಗಿದೆ. 24 ಗಂಟೆಗಳ ಅವಧಿಯಲ್ಲಿ ಸಂಗ್ರಹವಾದ ಹಣದಲ್ಲಿ ಒಟ್ಟು 1.76 ಲಕ್ಷ ಮಂದಿಗೆ ಆಹಾರ ಪೂರೈಸಲಾಗಿದೆ.
ಆದರೆ, ಇಲ್ಲೊಂದು ವಿಶೇಷತೆಯಿದ್ದು ಇದು ಸಾಂಕೇತಿಕ ಹರಾಜು ಮಾತ್ರವೇ ಆಗಿರುತ್ತದೆ. ನೀವು ಆನ್ ಲೈನ್ ಮೂಲಕ ಲೈಟ್ ಖರೀದಿಸಿದ ತಕ್ಷಣ ನಿಮಗೇನೂ ಬುರ್ಜ್ ಖಲೀಫಾದ ಲೈಟ್ ಗಳನ್ನು ಕಳುಹಿಸಿ ಕೊಡಲಾಗುವುದಿಲ್ಲ.
ಆದರೆ ತನ್ನಲ್ಲಿರುವ ಅಷ್ಟೂ ಲೈಟ್ ಗಳನ್ನು ಸಾಂಕೇತಿಕವಾಗಿ ಹರಾಜು ಹಾಕುವ ಮೂಲಕ ಮತ್ತು ಆ ಮೂಲಕ ಸಂಗ್ರಹವಾಗುವ ದೇಣಿಗೆ ಮೊತ್ತವನ್ನು ಕೋಟಿ ಹೊಟ್ಟೆಗಳ ಹಸಿವನ್ನು ನೀಗಿಸಲು ವಿನಿಯೋಗಿಸುತ್ತಿರುವ ವಿಧಾನ ಮಾತ್ರ ವಿನೂತನವೂ ಪ್ರಶಂಸನೀಯವೂ ಆಗಿದೆ.
ಹಾಗಾಗಿ ನಾವೂ ಬುರ್ಜ್ ಖಲೀಫಾದ ದೀಪಗಳನ್ನು ಸಾಂಕೇತಿಕವಾಗಿ ಖರೀದಿಸಿದರೆ ಈ ಅಭಿಯಾನಕ್ಕೆ ಬೆಂಬಲ ನೀಡಿದಂತಾಗುತ್ತದೆ ಮತ್ತು ನೀವು ಒಂದು ದೀಪವನ್ನು ಸಾಂಕೇತಿಕವಾಗಿ ಖರೀದಿಸಿದಲ್ಲಿ ಆ ಹಣದಿಂದ ಒಬ್ಬರ ಹಸಿವು ನೀಗಿಸಿದ ಪುಣ್ಯ ನಮ್ಮದಾಗುವುದು.
ಈ ಅಭಿಯಾನ ಪ್ರಾರಂಭಗೊಂಡಿರುವ ಕೇವಲ 24 ಗಂಟೆಗಳೊಗಾಗಿ 18 ಮಹಡಿಗಳಿರುವ ಈ ವಿಶ್ವ ವಿಖ್ಯಾತ ಕಟ್ಟಡದ 18 ಸಾವಿರ ದೀಪಗಳ ಸಾಂಕೇತಿಕ ಖರೀದಿ ಪ್ರಕ್ರಿಯೆ ನಡೆದಿದೆ. ರವಿವಾರ ಸಂಗ್ರಹವಾದ ದೇಣಿಗೆ ಮೊತ್ತವನ್ನು ಯು.ಎ.ಇ.ಯಲ್ಲಿ ಕೋವಿಡ್ 19 ವೈರಸ್ ಬಾಧಿತರಿಗೆ ಒಟ್ಟು 180,000 ಊಟಗಳನ್ನು ನೀಡಲು ವಿನಿಯೋಗಿಸಲಾಗುವುದು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್