ಅಡಿಕೆ, ಮಾವಿಗೆ ಅಮೆರಿಕ ತೆರಿಗೆ ಬರೆ


Team Udayavani, Nov 2, 2018, 4:00 AM IST

donald-trump-5-600.jpg

ವಾಷಿಂಗ್ಟನ್‌: ಭಾರತದಿಂದ ತೆರಿಗೆಯ ಹಂಗಿಲ್ಲದೆ ಅಮೆರಿಕ ಪ್ರವೇಶಿಸುತ್ತಿದ್ದ ಸುಮಾರು 50 ಸಾಮಗ್ರಿಗಳ ಮೇಲೆ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರ ತೆರಿಗೆ ವಿಧಿಸಲು ನಿರ್ಧರಿಸಿದ್ದು, ನ. 1ರಿಂದಲೇ ಈ ಹೊಸ ನಿಯಮ ಜಾರಿಯಾಗಿದೆ.

ಯಾವ ಸರಕುಗಳಿಗೆ ತೆರಿಗೆ ಬಿಸಿ?
ಅಡಿಕೆ (ತಾಜಾ, ಒಣಗಿದ, ಸಿಪ್ಪೆ ಸುಲಿಯದ), ಮಾವಿನ ಹಣ್ಣು  , ಮರಳುಗಲ್ಲು, ಲವಣಗಳು, ಎಮ್ಮೆ ಚರ್ಮ, ಶೇ. 85ಕ್ಕೂ ಹೆಚ್ಚು ಭಾಗ ಹತ್ತಿಯ ಅಂಶ ಅಥವಾ ತೂಕವಿರುವ ನೇಯ್ದ ಬಟ್ಟೆಗಳು, ಕೈಮಗ್ಗದ ನೆಲಹಾಸು, ನೆಲದ ಮೇಲೆ ಹಾಕಲಾಗುವ ಯಾವುದೇ ಕೈಮಗ್ಗದ ನೇಯ್ಗೆ, ಕಸೂತಿ ಕಲಾ ವಸ್ತುಗಳು, ಹಾರ್ಮೋನಿಯಂ ಮಾದರಿಯ ಎಲ್ಲ ಸಂಗೀತ ವಾದ್ಯಗಳು, ಚಿನ್ನದ ಲೇಪನವಿರುವ ಆಲಂಕಾರಿಕ ವಸ್ತುಗಳು ಸಹಿತ ಸುಮಾರು 50 ಸಾಮಗ್ರಿಗಳು ತೆರಿಗೆ ವ್ಯಾಪ್ತಿಗೆ ಬಂದಿವೆ.

ಪರಿಣಾಮವೇನು?
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಸ್ಥಿತಿ ಬಲಗೊಳಿಸಲು ಅಮೆರಿಕ ನೀಡುವ ಸಹಾಯ ಹಸ್ತಗಳಲ್ಲಿ ಆದ್ಯತೆ ಆಧಾರಿತ ಸಾಮಾನ್ಯ ವ್ಯವಸ್ಥೆ (ಜಿಎಸ್‌ಪಿ)ಯೂ ಒಂದು. ಇದು ಅಮೆರಿಕದ ಅತೀ ಹಳೆಯ, ಅತೀ ದೊಡ್ಡ “ವಾಣಿಜ್ಯ ಸಹಕಾರ’. ಈ ಯೋಜನೆ ವ್ಯಾಪ್ತಿಯಲ್ಲಿರುವ ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಇದರ ಲಾಭ ಹೆಚ್ಚು ಪಡೆದಿರುವುದು ಭಾರತ. ಜಿಎಸ್‌ಪಿ ಅಡಿ 2017ರಲ್ಲಿ ಭಾರತ ಅಂದಾಜು 41,000 ಕೋಟಿ ರೂ.ಗಳಷ್ಟು ತೆರಿಗೆ ರಹಿತ ವ್ಯವಹಾರ ನಡೆಸಿತ್ತು. ಆದರೆ ಈಗ 50 ವಸ್ತುಗಳಿಗೆ ವಿಧಿಸಲಾಗುವ ತೆರಿಗೆಯಿಂದಾಗಿ ಭಾರತದ ಮಧ್ಯಮ, ಸಣ್ಣ ಉದ್ದಿಮೆಗಳ ಮೇಲೆ, ಕೈಮಗ್ಗ ಹಾಗೂ ಕೃಷಿ ಉತ್ಪನ್ನಗಳ ತಯಾರಕರು, ರಫ್ತುದಾರರ ಮೇಲೆ ಬರೆ ಎಳೆದಂತಾಗುತ್ತದೆ.

ಅಮೆರಿಕ ಸಮರ್ಥನೆ
ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ, “ಆದ್ಯತೆ ಆಧಾರಿತ ಸಾಮಾನ್ಯ ವ್ಯವಸ್ಥೆ ಯಡಿ (ಜಿಎಸ್‌ಪಿ) ಅಮೆರಿಕಕ್ಕೆ ವಿವಿಧ ದೇಶಗಳಿಂದ ಆಮದಾಗುತ್ತಿದ್ದ ಕೆಲವು ವಸ್ತುಗಳನ್ನು ತೆರಿಗೆ ರಹಿತ ವ್ಯಾಪ್ತಿಯಿಂದ ಹೊರಗಿಡಲಾಗಿದೆಯಷ್ಟೇ. ಯಾವುದೇ ದೇಶವನ್ನು ಗುರಿಯಾಗಿಸುವ ನಿರ್ಧಾರವಿಲ್ಲ’ ಎಂದಿದೆ. ಅಂತೆಯೇ, ಅರ್ಜೆಂಟೀನ, ಥಾಯ್ಲೆಂಡ್‌, ಸುರಿನಾಮ್‌, ಪಾಕಿಸ್ಥಾನ, ಟರ್ಕಿ, ಫಿಲಿಪ್ಪೆ„ನ್ಸ್‌, ಈಕ್ವೆಡಾರ್‌, ಇಂಡೋನೇಷ್ಯಾ ದೇಶಗಳಿಂದ ಆಮದಾಗುತ್ತಿದ್ದ ಕೆಲ ಸಾಮಗ್ರಿಗಳ ಮೇಲೂ ತೆರಿಗೆ ವಿಧಿಸಲಾಗಿದೆ. ಇಂತಹ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕಾರಣವೇನು ಎಂಬುದನ್ನು ಅಮೆರಿಕ ನೀಡಿಲ್ಲ. ಭಾರತ ಸಹಿತ ಕೆಲವು ದೇಶಗಳೊಂದಿಗಿನ ಅಮೆರಿಕ ಸಂಬಂಧ ಈಗ ಹಿಂದಿನಿಂತಿಲ್ಲ.

ಟಾಪ್ ನ್ಯೂಸ್

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

imran-khan

Oxford ವಿವಿ ಕುಲಪತಿ: ಇಮ್ರಾನ್‌ ಜೈಲಿಂದ ಸ್ಪರ್ಧೆ!

1-musk

Gender change ಬಗ್ಗೆ ವಿರೋಧ: ಮಸ್ಕ್ ಗೆ ಪುತ್ರಿ ತಿರುಗೇಟು!

1-obamma-aaa

US; ಅದ್ಭುತ ಅಧ್ಯಕ್ಷೆಯಾಗುತ್ತಾರೆ: ಕಮಲಾ ಹ್ಯಾರಿಸ್‌ಗೆ ಒಬಾಮಾ ಸಂಪೂರ್ಣ ಬೆಂಬಲ

kamala-haris

US; ಕಮಲಾ ಹ್ಯಾರಿಸ್‌ಗೆ ಕೊನೆಗೂ ಮಾಜಿ ಅಧ್ಯಕ್ಷ ಒಬಾಮಾ ಬೆಂಬಲ?

Bangladesh: ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಿದ ಬಾಂಗ್ಲಾದೇಶ್ ಸರ್ಕಾರ!

Bangladesh: ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಿದ ಬಾಂಗ್ಲಾದೇಶ್ ಸರ್ಕಾರ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.