ಗಂಡನಿಂದ ಜೀವಂತ ಸಮಾಧಿ ಆದಾಕೆ ಆ್ಯಪಲ್ ವಾಚ್‌ ನಿಂದ ಬದುಕಿ ಬಂದಳು.!


Team Udayavani, Oct 25, 2022, 2:44 PM IST

tdy-2

ವಾಷಿಂಗ್ಟನ್: ಆ್ಯಪಲ್ ವಾಚ್‌ ಬರೀ ಸಮಯ ನೋಡುವುದಕ್ಕಲ್ಲ. ಆ್ಯಪಲ್ ವಾಚ್‌ ಬಾಲಕಿಯೊಬ್ಬಳಿಗೆ ಕ್ಯಾನ್ಸರ್‌ ಇದೆಯೆನ್ನವುದನ್ನು ಅವಳ ಹೃದಯ ಬಡಿತದ ಹೆಚ್ಚಳದಿಂದ  ಪತ್ತೆ ಹಚ್ಚಿತ್ತು. ಆ್ಯಪಲ್ ವಾಚ್‌ ನ ಕೆಲಸ, ಉಪಯೋಗ ಒಂದೆರೆಡಲ್ಲ. ಮಹಿಳೆಯೊಬ್ಬಳು ಸಾವಿನ ದವಡೆಯಿಂದ ಬದುಕಿ ಬರಲು ಆ್ಯಪಲ್ ವಾಚ್‌ ನಿಂದ ಸಹಾಯವಾಗಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಡೈಲಿ ಮೇಲ್‌ ವರದಿಯ ಪ್ರಕಾರ, ಯಂಗ್ ಸೂಕ್ -ಚೇ ಕ್ಯಾಂಗ್  ಮದುವೆಯಾಗಿ ಹಲವು ವರ್ಷಗಳು ಕಳೆದರೂ ಇಬ್ಬರ ನಡುವೆ ಅನೇಕ ಬಾರಿ ಮನಸ್ತಾಪಗಳು ಉಂಟಾಗಿತ್ತು. ಇದೇ ಕಾರಣಕ್ಕಾಗಿ ಇಬ್ಬರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅ.16 ರ ಮಧ್ಯಾಹ್ನ ಗಂಡ ಮನೆಗೆ ಬಂದು ಹಣಕಾಸಿನ ವಿಷಯಕ್ಕೆ ತಕರಾರು ತೆಗೆದು ಪತ್ನಿ ಯಂಗ್ ಸೂಕ್ ಮೇಲೆ ಹಲ್ಲೆ ಮಾಡಿ, ಆಕೆಯ ಬಾಯಿ, ಕಣ್ಣಿಗೆ, ಕೈಗೆ ಟೇಪ್‌ ನಿಂದ ಕಟ್ಟಿದ್ದಾನೆ. ಆ ಬಳಿಕ ಕಾರಿನಲ್ಲಿ ಹಾಕಿಕೊಂಡು ಹೋಗಿದ್ದು, ಈ ವೇಳೆ ಅದ್ಯಾಗೋ ಯಂಗ್ ಸೂಕ್ ತನ್ನ ಕೈಯಲ್ಲಿದ್ದ ಆ್ಯಪಲ್ ವಾಚ್‌ ನಿಂದ 911 ( ಎಮರ್ಜೆನ್ಸಿ ನಂಬರ್) ನಂಬರ್‌ ಗೆ ಡಯಲ್‌ ಮಾಡಿದ್ದಾರೆ.  ಆ್ಯಪಲ್ ವಾಚ್‌ ಕೂಡಲೇ ಮಗಳು ಹಾಗೂ ಯಂಗ್ ಸೂಕ್ – ಅವರ ಗೆಳತಿಗೆ ಅಪಾಯದ ನೋಟಿಫಿಕೇಷನ್‌ ಕಳುಹಿಸಿದೆ ಎಂದು ವರದಿ ತಿಳಿಸಿದೆ.

ಏತನ್ಮಧ್ಯೆ ಯಂಗ್ ಸೂಕ್ ಕೈಯಲ್ಲಿದ್ದ ಆ್ಯಪಲ್ ವಾಚ್ ಬಗ್ಗೆ ತಿಳಿದಿದ್ದ ಪತಿ, ವಾಚ್ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ್ದ. ಆದರೆ ವಾಚ್ ಆ ವೇಳೆಗಾಗಲೇ ಅಪಾಯದ ಸೂಚನೆ ರವಾನಿಸಿ ಬಿಟ್ಟಿತ್ತು.!

ಕಾರು ಒಂದು ಕಡೆ ನಿಲ್ಲಿಸಿ, ಯಂಗ್‌ ಸೂಕ್‌ ಳನ್ನು ಜೀವಂತವಾಗಿ ಹೂಳಲು ಚೇ ಕ್ಯಾಂಗ್  ಗುಂಡಿ ತೋಡಿ, ಅದರೊಳಗೆ ಯಂಗ್‌ ಸೂಕ್‌ ರನ್ನು ಹಾಕಿ, ಸಮಾಧಿಯ ಮೇಲೆ ಮರದ ತುಂಡುಗಳನ್ನು ಹಾಕಿ  ಮುಚ್ಚಿದ್ದ. ಕೆಲವು ಗಂಟೆಗಳ ಬಳಿಕ ಯಂಗ್ ಸೂಕ್ ಕಟ್ಟಿದ್ದ ಟೇಪ್‌ ನ್ನು ಕಷ್ಟಪಟ್ಟು ತೆಗೆದು, ಸಮಾಧಿಯಿಂದ ಹೊರ ಬಂದು ದೂರ ಓಡಿದ್ದಾರೆ ಎಂದು ವರದಿ ತಿಳಿಸಿದೆ.

ನ್ಯಾಯಾಲಯದ ದಾಖಲೆಯ ಪ್ರಕಾರ, ಯಂಗ್‌ ಸೂಕ್‌ ಸಮಾಧಿಯಿಂದ ಹೊರಬಂದು , ( ಅ.17 ರಂದು) ಮನೆಯೊಂದರ ಶೆಡ್‌ ನಲ್ಲಿ ಅವಿತುಕೊಂಡಿದ್ದಾರೆ. ಅಲ್ಲಿ ಸ್ಥಳೀಯರು 911 ಕರೆ ಮಾಡಿ ಸ್ಥಳದ ಬಗ್ಗೆ ಹೇಳಿದ್ದಾರೆ. ವಾಚ್‌ ಕಳುಹಿಸಿದ ನೋಟಿಫಿಕೇಷನ್‌  ಆಧರಿಸಿ ಪೊಲೀಸರು ಯಂಗ್‌ ಸೂಕ್‌ ಕಿಡ್ನ್ಯಾಪ್‌ ಆದ ಸ್ಥಳಕ್ಕೆ ಬಂದಿದ್ದಾರೆ. ಕಾರಿನಲ್ಲಿ ಕರೆದುಕೊಂಡು ಹೋಗಿರುವ ದೃಶ್ಯವನ್ನು ಪಕ್ಕದ ಮನೆಯ ಸಿಸಿ ಟಿವಿಯಲ್ಲಿ ಪೊಲೀಸರು ಪರಿಶೀಲಿಸಿದ್ದರು.

ಪೊಲೀಸರು ಸ್ಥಳಕ್ಕೆ ಬಂದ ಮೇಲೆ ಯಂಗ್‌ ಸೂಕ್‌ ತನ್ನ ಗಂಡ ಕೊಲ್ಲಲು ಬಂದಿದ್ದಾನೆ ಎಂದು ಹೇಳಿದ್ದಾರೆ. ಯಂಗ್‌ ಸೂಕ್‌ ಪತ್ತೆಯಾದ ಬಳಿಕ ಅವರ ಸ್ಥಿತಿ ಅತ್ಯಂತ ದುಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೊನೆಗೆ ಪೊಲೀಸರು ಕೊಲೆ ಯತ್ನ, ಕಿಡ್ನ್ಯಾಪ್‌ ಪ್ರಕರಣದಲ್ಲಿ ಚೇ ಕ್ಯಾಂಗ್ ನನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.