ಕೋವಿಡ್ 19 ವೈರಸ್ ವಿರುದ್ಧ ಹೋರಾಟ: ಸಿಂಗಾಪುರದಿಂದ ಪಾಠ ಕಲಿಯಬೇಕಿದೆ


Team Udayavani, Mar 24, 2020, 11:58 AM IST

Covid-Singapore

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಸಿಂಗಾಪುರ: ಚೀನದ ನೆರೆಯ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಸಿಂಗಾಪುರ, ತೈವಾನ್‌ ಹಾಕಾಂಗ್‌ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ಆರಂಭದಲ್ಲೇ ಉಪಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರಿಂದ ಈ ರಾಷ್ಟ್ರಗಳು ಕೋವಿಡ್ 19 ವೈರಸ್ ನ ಆರಂಭಿಕ ಆಘಾತದಿಂದ ತಪ್ಪಿಸಿಕೊಂಡಿದ್ದವು. ಆದರೆ ಏಷ್ಯಾದಲ್ಲಿ ಆರಂಭವಾದ ಈ ಮಾರಣಾಂತಿಕ ವೈರಸನ್ನು ಐರೋಪ್ಯ ರಾಷ್ಟ್ರಗಳು ಲಘವಾಗಿ ಪರಿಗಣಿಸಿದ್ದವು. ಇದರ ಫ‌ಲವಾಗಿ ಇಂದು ಐರೋಪ್ಯ ರಾಷ್ಟ್ರಗಳಲ್ಲೂ ಕೊರೊನಾ ವ್ಯಾಪಕವಾಗುತ್ತಿದೆ.

ಹಾಗೆ ನೋಡಿದರೆ ಸಿಂಗಾಪುರ ಹೆಚ್ಚು ಪ್ರವಾಸಿಗರನ್ನು ಹೊಂದಿರುವ ಮತ್ತು ಮುಖ್ಯ ಏರ್‌ಪೋರ್ಟ್‌ಗಳುಳ್ಳ ಪ್ರದೇಶವಾಗಿದೆ. ಚೀನದ ಪ್ರವಾಸಿಗರು, ಉದ್ಯೋಗಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶ ಅದಾಗಿದೆ. ಚೀನದಲ್ಲಿ ವೈರಸ್‌ ಭೀತಿ ಹೆಚ್ಚಾಗುತ್ತಿದ್ದ ಸಂದರ್ಭದಲ್ಲೇ ಸಾವಿನ ಸಂಖ್ಯೆಯೂ ಏರಿಕೆಯಾಗತೊಡಗಿತು.

ಆ ಸಂದರ್ಭದಿಂದಲೇ ಸಿಂಗಾಪುರದಲ್ಲಿ ಸುಮಾರು 6 ಲಕ್ಷ ಜನರನ್ನು ತನಿಖೆಗೆ ಒಳಪಡಿಸಿತ್ತು. ತತ್‌ಕ್ಷಣ ಕಾರ್ಯಪ್ರವೃತ್ತವಾದ ಸರಕಾರ ಮುಖ್ಯವಾಗಿ ವಿಮಾನಗಳು, ರೈಲು ಸೇವೆಗಳಿಗೆ ಆರಂಭದಲ್ಲೇ ತಡೆ ದೊರೆಯಿತು. ಇದರಿಂದ ಹೊರ ದೇಶದಲ್ಲಿರುವವರು ಮುಖ್ಯವಾಗಿ ಚೀನದಲ್ಲಿರುವವರು ಸಿಂಗಾಪುರ ಪ್ರವೇಶಿಸುವುದಕ್ಕೆ ರೆಡ್‌ ಸಿಗ್ನಲ್‌ ನೀಡಿದಂತಾಯಿತು.

ವೇಗವಾಗಿ ಪತ್ತೆ ಹಚ್ಚಿದ ಸಿಂಗಾಪುರ
ಕೋವಿಡ್ 19 ವೈರ ಸನ್ನು ಅತ್ಯಂತ ತುರ್ತಾಗಿ ಹತ್ತಿಕ್ಕುತ್ತಿರುವ ದೇಶಗಳ ಪೈಕಿ ಸಿಂಗಾಪುರ ಒಂದಾಗಿದೆ. ಸಿಂಗಾಪುರದಲ್ಲಿ ಕೊರೊನಾದಿಂದಾಗಿ ಇದುವರೆಗೂ ಒಂದೇ ಒಂದು ಸಾವು ಸಂಭವಿಸದಿರುವುದು ಕೂಡ ಗಮನ ಸೆಳೆದಿದೆ. ಕೊರೊನಾ ಪೀಡಿತರನ್ನು ಅತ್ಯಂತ ವೇಗವಾಗಿ ಪತ್ತೆ ಹೆಚ್ಚಿರುವುದು ಒಳ್ಳೆಯ ಕ್ರಮವಾಗಿದೆ. ಸೋಂಕು ತಗುಲಿರುವ ಶಂಕೆ ಇರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿತ್ತು. ಯಾರೂ ಕೂಡ ಪರೀಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಸೂಕ್ತ ಕ್ರಮವಹಿಸಿದ ಸಿಂಗಾಪುರ, ಸೋಂಕು ಪೀಡಿತರನ್ನು ಪ್ರತ್ಯೇಕಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿದೆ. ಇದರಲ್ಲಿ ಸಿಂಗಾಪುರ ಆರೋಗ್ಯ ಇಲಾಖೆಯ ಕಾರ್ಯ ಮೆಚ್ಚಲೇಬೇಕು.

ಸೋಂಕು ದೃಢಪಟ್ಟವರನ್ನು ಕೂಡಲೇ ಸಾರ್ವಜನಿಕ ವಲಯದಿಂದ ಪ್ರತ್ಯೇಕಿಸಲಾಗಿತ್ತು. ಅವರನ್ನು ವೈದ್ಯಕೀಯ ಶಿಬಿರಗಳಲ್ಲಿಟ್ಟು ನಿಗಾದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಶಿಬಿರಗಳಲ್ಲಿರುವ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಜತೆಗೆ ಆಧುನಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸೋಂಕಿತರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲೇ ಎಚ್ಚೆತ್ತ ಸಿಂಗಾಪುರ ಸರಕಾರ, ತನ್ನ ಪ್ರಜೆಗಳೊಂದಿಗೆ ಹಾಗೂ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸದಾ ಸಂಪರ್ಕದಲ್ಲೇ ಇತ್ತು.

ಜನರಿಗೆ ಮಾಹಿತಿ
ಸೋಂಕಿನ ಮಾಹಿತಿಯನ್ನು ಜನರಿಗೆ ತಿಳಿಸಿ ಭಯಭೀತರಾಗದಂತೆ ನಿಗಾವಹಿಸಿತ್ತು. ಅಲ್ಲದೇ ಸೋಂಕು ಪೀಡಿತರನ್ನು ಗುರುತಿಸಿ ಅವರನ್ನು ಸಮಾಜದಿಂದ ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಸಿಂಗಾಪುರ ಇಡೀ ದೇಶಕ್ಕೆ ಮಾದರಿಯಾಯಿತು. ಹೊರ ದೇಶಗಳಿಂದ ಜನರು ಬರದಂತೆ ನಿರ್ಬಂಧ ವಿಧಿಸಲಾಗಿದ್ದು, ತನ್ನ ಪ್ರಜೆಗಳಿಗೆ ಯಾವುದೇ ವಿದೇಶ ಪ್ರವಾಸ ಕೈಗೊಳ್ಳದಂತೆಯೂ ಸೂಚಿಸಿದೆ. ಸರಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಪ್ರಜೆಗಳು ನಿಷ್ಠೆಯಿಂದ ಪಾಲಿಸುತ್ತಿದ್ದಾರೆ.

27ರಿಂದ ಹೆಲ್ತ್‌ ಡಿಕ್ಲೆರೇಶನ್‌
ಸಿಂಗಾಪುರಕ್ಕೆ ಮಾರ್ಚ್‌ 27ರ ಬಳಿಕ ಆಗಮಿಸುವ ಎಲ್ಲರೂ ತಮ್ಮ ಆರೋಗ್ಯ ಮಾಹಿತಿಯನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ಅಲ್ಲಿನ ಸರಕಾರ ಸೂಚಿಸಿದೆ. ಇದನ್ನು ವಿದೇಶಿಗರೂ ಮತ್ತು ಸಿಂಗಾಪುರದ ಪ್ರಜೆಗಳೂ ನೀಡಲೇಬೇಕಾಗಿದೆ. ಸಿಂಗಾಪುರದಲ್ಲಿ ಒಟ್ಟು 455 ಪ್ರಕರಣಗಳು ದಾಖಲಾಗಿದ್ದು, 144 ಮಂದಿ ಸುಧಾರಿಸಿದ್ದಾರೆ. 309 ಮಂದಿಯಲ್ಲಿ ಈಗ ಸೋಂಕು ಕಂಡು ಬಂದಿದೆ. ಇಬ್ಬರು ಬಲಿಯಾಗಿದ್ದಾರೆ.

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

imran-khan

Oxford ವಿವಿ ಕುಲಪತಿ: ಇಮ್ರಾನ್‌ ಜೈಲಿಂದ ಸ್ಪರ್ಧೆ!

1-musk

Gender change ಬಗ್ಗೆ ವಿರೋಧ: ಮಸ್ಕ್ ಗೆ ಪುತ್ರಿ ತಿರುಗೇಟು!

1-obamma-aaa

US; ಅದ್ಭುತ ಅಧ್ಯಕ್ಷೆಯಾಗುತ್ತಾರೆ: ಕಮಲಾ ಹ್ಯಾರಿಸ್‌ಗೆ ಒಬಾಮಾ ಸಂಪೂರ್ಣ ಬೆಂಬಲ

kamala-haris

US; ಕಮಲಾ ಹ್ಯಾರಿಸ್‌ಗೆ ಕೊನೆಗೂ ಮಾಜಿ ಅಧ್ಯಕ್ಷ ಒಬಾಮಾ ಬೆಂಬಲ?

Bangladesh: ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಿದ ಬಾಂಗ್ಲಾದೇಶ್ ಸರ್ಕಾರ!

Bangladesh: ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಿದ ಬಾಂಗ್ಲಾದೇಶ್ ಸರ್ಕಾರ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.