ಮಾಲ್ದೀವ್ಸ್ನಲ್ಲಿ ತುರ್ತುಪರಿಸ್ಥಿತಿ ಜಾರಿ
Team Udayavani, Feb 6, 2018, 9:15 AM IST
ಮಾಲೆ: ಮಾಲ್ದೀವ್ಸ್ನಲ್ಲಿ 15 ದಿನಗಳ ಕಾಲ ತುರ್ತುಪರಿಸ್ಥಿತಿ ಜಾರಿಗೊಳಿಸಲಾಗಿದೆ. ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಬಂಧನವನ್ನು ಮಾಡಲಾಗಿದೆ. ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ ಇಲ್ಲವೇ ವಾಗ್ಧಂಡನೆ ಎದುರಿಸಿ ಎಂದು ಸುಪ್ರೀಂಕೋರ್ಟಿಂದ ತರಾಟೆಗೆ ಒಳಗಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲ ಯಮೀನ್ ಈ ಘೋಷಣೆ ಮಾಡಿದ್ದಾರೆ. ಅಗತ್ಯವಿದ್ದರೆ ಮಾತ್ರ ಮಾಲ್ದೀವ್ಸ್ಗೆ ಹೋಗಿ ಎಂದು ಕೇಂದ್ರ ತಿಳಿಸಿದೆ.