ಜೋಳದ ಗದ್ದೆ ನಡುವೆ ತುರ್ತಾಗಿ ವಿಮಾನ ಇಳಿಸಿ 233 ಜನರ ಜೀವ ಕಾಪಾಡಿ ಹೀರೋ ಆದ ಪೈಲಟ್!
Team Udayavani, Aug 15, 2019, 4:10 PM IST
ಮಾಸ್ಕೋ: 233 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಹಕ್ಕಿಗಳ ಹಿಂಡು ಎಡಭಾಗದ ಇಂಜಿನ್ ಗೆ ಬಡಿದು ಬಿಟ್ಟಿತ್ತು. ಇದರಿಂದ ಇಂಜಿನ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಈ ಸಂದರ್ಭದಲ್ಲಿ ಮತ್ತೊಂದು ಇಂಜಿನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಆದರೂ ಧೈರ್ಯಗೆಡದ ಪೈಲಟ್ ವಿಮಾನವನ್ನು ಮುಸುಕಿನ ಜೋಳದ ಗದ್ದೆ ನಡುವೆ ತುರ್ತಾಗಿ ಲ್ಯಾಂಡ್ ಮಾಡಿಸುವ ಮೂಲಕ 233 ಪ್ರಯಾಣಕರ ಜೀವ ಉಳಿಸಿರುವ ಘಟನೆ ಮಾಸ್ಕೋದ ಹೊರವಲಯದಲ್ಲಿ ಗುರುವಾರ ನಡೆದಿದೆ.
ವಿಮಾನವನ್ನು ಮುಸುಕಿನ ಜೋಳದ ಗದ್ದೆ ನಡುವೆ ತುರ್ತಾಗಿ ಭೂಸ್ಪರ್ಶ ಮಾಡಿದ್ದರಿಂದ 23 ಪ್ರಯಾಣಿಕರು ಗಾಯಗೊಂಡಿದ್ದರು. ಆದರೆ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಯೂರಾಲ್ ಏರ್ ಲೈನ್ಸ್ ಏರ್ ಬಸ್ 321 ಟೇಕ್ ಆಫ್ ಆಗುತ್ತಿದ್ದಂತೆಯೇ ಹಕ್ಕಿಗಳ ಹಿಂಡು ಇಂಜಿನ್ ಗೆ ಬಡಿದಿತ್ತು. ಈ ಹಿನ್ನೆಲೆಯಲ್ಲಿ ಮುಸುಕಿನ ಜೋಳದ ಗದ್ದೆಯಲ್ಲಿ ತುರ್ತಾಗಿ ಲ್ಯಾಂಡ್ ಮಾಡಿರುವುದಾಗಿ ವಿವರಿಸಿದೆ.
ಎರಡೂ ಇಂಜಿನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರಿಂದ ಪೈಲಟ್ ಡ್ಯಾಮಿರ್ ಯೂಸೂಪೋವ್ ವಿಮಾನವನ್ನು ಮಾಸ್ಕೋದ ಜುಕೋವಸ್ಕಿ ಅಂತರಾಷ್ಟ್ರೀಯ ವಿಮಾನದಲ್ಲಿ ತುರ್ತಾಗಿ ಲ್ಯಾಂಡ್ ಮಾಡಲು ನಿರ್ಧರಿಸಿದ್ದರು. ಆದರೆ ಇದರಿಂದ ತೊಂದರೆ ಎಂದು ಮನಗಂಡ ಡ್ಯಾಮಿರ್ ರಾಮೆನ್ಸ್ ಕೋಯ್ ಸಮೀಪದ ಮುಸುಕಿನ ಜೋಳದ ಗದ್ದೆ ನಡುವೆಯೇ ಇಂಜಿನ್ ಸಹಾಯವಿಲ್ಲದೆ ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಿರುವುದಾಗಿ ವರದಿ ತಿಳಿಸಿದೆ.
233 ಪ್ರಯಾಣಿಕರ ಜೀವ ಉಳಿಸಿರುವ ಪೈಲಟ್ ಡ್ಯಾಮಿರ್ ಹೀರೋ ಎಂದು ಮಾಸ್ಕೋದ ಟ್ಯಾಬೋಲಾಯ್ಡ್ ಪತ್ರಿಕೆ ಕೋಸೋಮೋಲಾಸ್ಕಿ ವರದಿ ಮಾಡಿದೆ. ಲ್ಯಾಂಡಿಂಗ್ ಗಿಯರ್ ಇಲ್ಲದೆ ಪೈಲಟ್ ಡ್ಯಾಮಿರ್ ತುಂಬಾ ಜಾಣ್ಮೆಯಿಂದ ಮುಸುಕಿನ ಜೋಳದ ಗದ್ದೆಯಲ್ಲಿ ಇಳಿಸಿದ್ದಾರೆ ಎಂದು ವರದಿ ಶ್ಲಾಘಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ