ಸ್ವತಂತ್ರ ಪ್ಯಾಲೇಸ್ತೀನ್ ಬೇಗನೆ ಕಾಣುವಂತಾಗಲಿ: ಮೋದಿ ಹಾರೈಕೆ
Team Udayavani, Feb 10, 2018, 7:18 PM IST
ರಮಲ್ಲ : ಸ್ವತಂತ್ರ ಪ್ಯಾಲೇಸ್ತೀನ್ ರಾಷ್ಟ್ರವನ್ನು ಕಾಣುವ ದಿನಗಳು ಬೇಗನೆ ಬರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.
ಪ್ರಕೃತ ಪಶ್ಚಿಮ ಏಶ್ಯ ಭೇಟಿಯಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಶನಿವಾರ ಸ್ವತಂತ್ರ, ಸಾರ್ವಭೌಮ ಪ್ಯಾಲೇಸ್ತೀನ್ ದೇಶಕ್ಕಾಗಿ, ಅಲ್ಲಿಗೆ ನೀಡಿರುವ ತಮ್ಮ ಚೊಚ್ಚಲ ಭೇಟಿಯಲ್ಲಿ ಹೇಳಿದರು.
“ಪ್ಯಾಲೇಸ್ತೀನ್ ಜನರ ಹಿತಾಸಕ್ತಿಯನ್ನು ಭಾರತ ರಕ್ಷಿಸುವುದೆಂಬ ಭರವಸೆಯನ್ನು ನಾನು ಅಧ್ಯಕ್ಷ ಅಬ್ಟಾಸ್ ಅವರಿಗೆ ನೀಡಿದ್ದೇನೆ. ಪ್ಯಾಲೇಸ್ತೀನ್ ಬೇಗನೆ ಶಾಂತಿಯುತವಾಗಿ ಒಂದು ಸ್ವತಂತ್ರ, ಸಾರ್ವಭೌಮ ದೇಶವಾಗಿ ಮೂಡಿ ಬರಲೆಂದು ಭಾರತ ಹಾರೈಸುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಪಶ್ಚಿಮ ಏಶ್ಯಕ್ಕೆ ಶಾಂತಿ ಬೇಗನೆ ಮರಳಲೆಂದು ಭಾರತ ಹಾರೈಸುತ್ತದೆ ಎಂದು ತಮ್ಮ ಭಾಷಣದಲ್ಲಿ ಮೋದಿ ಹೇಳುವ ಮೂಲಕ ತಮ್ಮ ಪ್ಯಾಲೇಸ್ತೀನ್ ಐತಿಹಾಸಿಕ ಭೇಟಿಯನ್ನು ಮುಗಿಸಿದರು. ಪ್ಯಾಲೇಸ್ತೀನ್ಗೆ ಭೇಟಿ ಕೊಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
“ನಮಗೆ ಗೊತ್ತಿದ್ದು; ಇದು ಹೇಳಿದಷ್ಟು ಸುಲಭ ಅಲ್ಲ ಅಂತ; ಆದರೆ ಇದರಲ್ಲಿ ನಮ್ಮ ಹಿತಾಸಕ್ತಿಗಳು ಅಡಕವಾಗಿರುವುದರಿಂದ ನಾವು ಅದಕ್ಕಾಗಿ ಸಾಕಷ್ಟು ಶ್ರಮಿಸಬೇಕಾಗತ್ತದೆ’ ಎಂದು ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಉಭಯತರು 50 ದಶಲಕ್ಷ ಡಾಲರ್ ನೆರವಿನ ಒಪ್ಪಂದಕ್ಕೆ ಸಹಿ ಹಾಕಿದರು. ಇದರಲ್ಲಿ 30 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯೂ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…