ಭಾರತ ಅವಕಾಶ ವ್ಯರ್ಥ ಮಾಡಿತು!;ಪಾಕ್ಗೆ ತೀವ್ರ ನಿರಾಶೆಯಾಗಿದೆಯಂತೆ
Team Udayavani, Sep 22, 2018, 9:34 AM IST
ಇಸ್ಲಮಾಬಾದ್: ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ನಡೆಯಬೇಕಿದ್ದ ಮಾತುಕತೆಯನ್ನು 24 ಗಂಟೆಗಳೊಳಗೆ ರದ್ದು ಮಾಡಿರುವುದು ತೀವ್ರ ನಿರಾಶೆ ತಂದಿಟ್ಟಿದೆ ಎಂದು ಪಾಕಿಸ್ಥಾನ ಹೇಳಿದೆ, ಮಾತ್ರವಲ್ಲದೆ ಮಾತುಕತೆಗೆ ಮನಸ್ಸಿಲ್ಲದ ಭಾರತ ಉತ್ತಮ ಅವಕಾಶ ವ್ಯರ್ಥ ಮಾಡಿಕೊಂಡಿದೆ ಎಂದಿದೆ.
ಬಿಎಸ್ಎಫ್ ಯೋಧನ ಹತ್ಯೆಯಲ್ಲಿ ನಮ್ಮ ಸೈನಿಕರ ಪಾತ್ರ ಇಲ್ಲ ಎಂದೂ ಪಾಕ್ ಇಸ್ಲಮಾಬಾದ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.
ಮುಂದಿನ ವಾರ ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆ ಮಹಾಧಿ ವೇಶ ನದ ವೇಳೆ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಶಿ ಹಾಗೂ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿಯಾಗಿ ಮಾತುಕತೆ ನಡೆಸುವ ಪಾಕಿಸ್ತಾನದ ವಿನಂತಿಗೆ ಭಾರತ ಗುರುವಾರ ಸಮ್ಮತಿ ನೀಡಿತ್ತು. ಆದರೆ ಸಮ್ಮತಿ ನೀಡಿದ ಮರುದಿನ ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಅಪಹರಿಸಿದ ಹಿಜ್ಬುಲ್ ಮುಜಾಹಿದೀನ್ ಉಗ್ರರು ಬರ್ಬರವಾಗಿ ಹತ್ಯೆಗೈದಿದ್ದು, ಕಾಶ್ಮೀರಿ ಉಗ್ರ ಬುರ್ಹಾನ್ ವಾನಿಯನ್ನು ವೈಭವೀಕರಿಸಿ ಪಾಕಿಸ್ತಾನವು ಅಂಚೆಚೀಟಿಯೊಂದನ್ನು ಬಿಡುಗಡೆ ಮಾಡಿತ್ತು. ಇಂಥ ವಾತಾವರಣದಲ್ಲಿ ಮಾತುಕತೆ ರದ್ದು ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ