ಭಗವದ್ಗೀತೆ ಪಾರ್ಕ್ ಧ್ವಂಸಕ್ಕೆ ಭಾರತದ ರಾಯಭಾರ ಕಚೇರಿ ಖಂಡನೆ
ಸೆ.28ರಂದು ಲೋಕಾರ್ಪಣೆ ಗೊಂಡಿದ್ದ ಉದ್ಯಾನ;ಬಿಲ್ಡರ್ನಿಂದಲೇ ತಾತ್ಕಾಲಿಕ ಬೋರ್ಡ್: ಬ್ರಾಂಪ್ಟನ್ ಮೇಯರ್ ಸ್ಪಷ್ಟನೆ
Team Udayavani, Oct 4, 2022, 12:14 AM IST
ಟೊರೊಂಟೊ: ಕೆನಡಾದ ಒಂಟಾರಿಯೊ ಪ್ರಾಂತದ ಬ್ರಾಂಪ್ಟನ್ ನಗರದಲ್ಲಿ ಇತ್ತೀಚಿಗಷ್ಟೇ ಲೋಕಾರ್ಪಣೆ ಮಾಡಿದ್ದ “ಶ್ರೀ ಭಗವದ್ಗೀತಾ ಉದ್ಯಾನ’ವನ್ನು ಕಿಡಿಗೇಡಿಗಳು ವಿಧ್ವಂಸಗೊಳಿಸಿರುವುದನ್ನು ಕೆನಡಾದ ಭಾರತೀಯ ರಾಯಭಾರ ಕಚೇರಿ ತೀವ್ರವಾಗಿ ಖಂಡಿಸಿದೆ.
ಈ ಹೇಯ ಘಟನೆ ಪೀಲ್ ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಈ ಹಿಂದೆ ಟ್ರಾಯರ್ ಪಾರ್ಕ್ ಎಂದು ಕರೆಯುತ್ತಿದ್ದ ಉದ್ಯಾನವನಕ್ಕೆ ಸೆ.28ರಂದು “ಶ್ರೀ ಭಗವದ್ಗೀತಾ ಉದ್ಯಾನ’ ಎಂದು ಮರುನಾಮಕರಣಗೊಳಿಸಲಾಗಿತ್ತು.
ಅಂಥ ಘಟನೆ ನಡೆದಿಲ್ಲ: ಅಚ್ಚರಿಯ ವಿಚಾರವೆಂದರೆ, ಉದ್ಯಾನವನ್ನು ಧ್ವಂಸ ಮಾಡಲಾಗಿದೆ ಎಂದು ಖಚಿತಪಡಿಸಿದ್ದ ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಉಲ್ಟಾ ಹೊಡೆದಿದ್ದಾರೆ.
“ಭಗವದ್ಗೀತಾ ಪಾರ್ಕ್ ಅನ್ನು ಧ್ವಂಸ ಮಾಡಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಖಾಲಿ ಇರುವ ಬೋರ್ಡ್ ಅನ್ನು ಬಿಲ್ಡರ್ ಅವರೇ ತಾತ್ಕಾಲಿಕವಾಗಿ ಹಾಕಿದ್ದು ಎಂದು ಗೊತ್ತಾಗಿದೆ. ಅಲ್ಲಿ ಶೀಘ್ರವೇ ಭಗವದ್ಗೀತಾ ಪಾರ್ಕ್ ಎಂದು ಹೊಸ ಬೋರ್ಡ್ ಅನ್ನು ಶೀಘ್ರವೇ ಹಾಕಲಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ