ಟ್ರಂಪ್ ಗಾಗಿ ಸಿಂಗಾಪುರ ಹೊಟೇಲ್ ನಲ್ಲಿ ಭಾರತೀಯ ಠಿಕಾಣಿ, ಮುಂದೇನಾಯ್ತು


Team Udayavani, Jun 12, 2018, 5:17 PM IST

donald-trump2-700.jpg

ಸಿಂಗಾಪುರ : ಉತ್ತರ ಕೊರಿಯ ನಾಯಕ ಕಿಮ್‌ ಜಾಂಗ್‌ ಉನ್‌ ಅವರೊಂದಿಗಿನ ಐತಿಹಾಸಿಕ ಶೃಂಗಕ್ಕಾಗಿ ಸಿಂಗಾಪುರಕ್ಕೆ ಬಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು  ಭೇಟಿಯಾಗುವ ಮಹದಾಸೆಯೊಂದಿಗೆ ಮಲೇಶ್ಯದ ಭಾರತ ಸಂಜಾತ 25ರ ಹರೆಯದ ಮಹಾರಾಜ್‌ ಮೋಹನ್‌ ಎಂಬಾತ 573 ಡಾಲರ್‌ ಖರ್ಚು ಮಾಡಿ ಒಂದು ದಿನ ಮೊದಲೇ ಸಿಂಗಾಪುರಕ್ಕೆ ಬಂದು ಟ್ರಂಪ್‌ ಉಳಿಯಲಿದ್ದ  ಶಾಂಗ್ರಿಲಾ ಹೊಟೇಲ್‌ನಲ್ಲಿ ರೂಮ್‌ ಪಡೆದುಕೊಂಡು  ಟ್ರಂಪ್‌ ಗಾಗಿ ಹೊಟೇಲ್‌ ಲಾಬಿಯಲ್ಲಿ ತಾಸುಗಟ್ಟಲೆ ಕಾದು ಪ್ರಯೋಜನವಾಗದೆ ಕೊನೆಗೆ ಟ್ರಂಪ್‌ ಬಳಸುವ ಎಂಟು ಟನ್‌ ತೂಕದ ಬುಲೆಟ್‌ಪ್ರೂಫ್ ಲಿಮೋಸಿನ್‌ “ದ ಬೀಸ್ಟ್‌’ ಕಾರಿನೊಂದಿಗೆ ಸೆಲ್ಫಿ ತೆಗೆದುಕೊಂಡು ಅಷ್ಟಕ್ಕೇ ಅನಿವಾರ್ಯವಾಗಿ ತೃಪ್ತಿಪಟ್ಟ  ವಿಲಕ್ಷಣಕಾರಿ ಘಟನೆ ವರದಿಯಾಗಿದೆ. 

“ಟ್ರಂಪ್‌ ಅವರನ್ನು ಭೇಟಿಯಾಗುವ ಸಾಧ್ಯತೆ ಶೇ.1ರಷ್ಟು  ಕೂಡ ಇಲ್ಲವೆಂದು ನನಗೆ ಮೊದಲೇ ಗೊತ್ತಿತ್ತು. ಆದರೆ ಅಕಸ್ಮಾತ್‌ ಅದೃಷ್ಟ ಖುಲಾಯಿಸಿದರೆ ಟ್ರಂಪ್‌ ಭೇಟಿ ಸಾಧ್ಯವಾದೀತು ಎಂಬ ಒಂದು ಸಣ್ಣ ಆಸೆ ಮನದಾಳದಲ್ಲಿ  ಇತ್ತು. ಅದಕ್ಕಾಗಿ 765 ಸಿಂಗಾಪುರ ಡಾಲರ್‌ (573 ರೂ. ಅಮೆರಿಕನ್‌ ಡಾಲರ್‌ ಅಥವಾ 38,600 ರೂ. ಅಥವಾ 2,000 ರಿಂಗಿಟ್‌ ಗಿಂತ ಹೆಚ್ಚು ) ಖರ್ಚು ಮಾಡಿದೆ. ಇದು ನನ್ನ ಮಟ್ಟಿಗೆ ದೊಡ್ಡ ಖರ್ಚೇ ಆದರೂ ಟ್ರಂಪ್‌ ಭೇಟಿ ಅದು ತೀರ ಸಣ್ಣ ಮೊತ್ತವೆಂದು ನನಗೆ ಕೊನೆಗೆ ಅನ್ನಿಸಿತು’ ಎಂದು ಮಹಾರಾಜ್‌ ಮೋಹನ್‌ ಹೇಳಿದರು. 

ಟ್ರಂಪ್‌ ಉಳಿದುಕೊಳ್ಳುವ ಹೊಟೇಲ್‌ಗೆ ತಾಗಿಕೊಂಡೇ ಇರುವ ವಿಭಾಗದಲ್ಲಿ ಮೋಹನ್‌ ಕೋಣೆ ಹಿಡಿದಿದ್ದರು. ಬೆಳಗ್ಗೆ 6.30ಕ್ಕೆ ಹೊಟೇಲ್‌ ಲಾಬಿ ಗೆ ಬಂದು ಟ್ರಂಪ್‌ ಬರುವಿಕೆಯನ್ನು ಕಾದರು. ಟ್ರಂಪ್‌ ಅವರ ಬೆಸ್ಟ್‌ ಸೆಲ್ಲರ್‌ “ಟ್ರಂಪ್‌ : ದಿ ಆರ್ಟ್‌ ಆಫ್ ದಿ ಡೀಲ್‌’ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಅದಕ್ಕೆ ಟ್ರಂಪ್‌ ಹಸ್ತಾಕ್ಷರ ಪಡೆಯುವುದು ಮೋಹನ್‌ ಅವರ ಅಭಿಲಾಷೆಯಾಗಿತ್ತು. ಆದರೆ 8 ಗಂಟೆಯಾದರೂ ಟ್ರಂಪ್‌ ಸುಳಿವಿಲ್ಲದೆ ಮೋಹನ್‌ಗೆ ನಿರಾಶೆಯಾಗಿತ್ತು. ಆ ಹೊತ್ತಿಗಾಗಲೇ ಟ್ರಂಪ್‌ ಅವರು ಸೆಂಟೋಸಾ ದ್ವೀಪದಲ್ಲಿನ ಕ್ಯಾಪೆಲಾ ಹೊಟೇಲ್‌ ನಲ್ಲಿ ನಡೆಯಲಿದ್ದ ಐತಿಹಾಸಿಕ ಶೃಂಗಕ್ಕೆ ನಿರ್ಗಮಿಸಿಯಾಗಿತ್ತು.

“ಎಲ್ಲರೂ ನನಗೆ ಹೇಳಿದ್ದರು : 20 ಕಿ.ಮೀ. ಫಾಸಲೆಯಲ್ಲಿ ಕೂಡ ಟ್ರಂಪ್‌ ಅವರನ್ನು ಕಾಣುವುದಾಗಲೀ ಅವರ ಸನಿಹಕ್ಕೆ ಹೋಗುವುದಾಗಲೀ ಅಸಾಧ್ಯ ಎಂದು. ಆದರೆ ಕೆಲವೊಮ್ಮೆ ಅಸಾಧ್ಯವಾದದ್ದು ಸಾಧ್ಯವಾಗುವುದಿದೆಯಲ್ಲ – ಅಂತಹ ಒಂದು ಕ್ಷಣಕ್ಕಾಗಿ ನಾನು ಆಸೆ ಪಡುತ್ತಿದ್ದೆ’ ಎಂದು ಮೋಹನ್‌ ನಿರಾಶೆಯಿಂದ ಹೇಳಿದರು.  ಮೋಹನ್‌ ಅವರು ತನ್ನ ತಂದೆ ನಡೆಸುತ್ತಿರುವ ಕನ್ಸಲ್ಟೆನ್ಸಿ ಸಂಸ್ಥೆಯಲ್ಲಿ ಕನ್ಸಲ್ಟೆಂಟ್‌ ಆಗಿ ದುಡಿಯುತ್ತಿದ್ದಾರೆ. 

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.