India ಆರ್ಥಿಕತೆ ಬುಡಮೇಲು ಮಾಡಿ: ಉಗ್ರ ಪನ್ನು ಬೆದರಿಕೆ
Team Udayavani, Jan 2, 2024, 6:02 AM IST
ಹೊಸದಿಲ್ಲಿ: ಭಾರತದ ವಿರುದ್ಧ ಒಂದಿಲ್ಲೊಂದು ಪಿತೂರಿ ನಡೆಸುತ್ತಲೇ ಇರುವ ಸಿಕ್ಖ್ ಪ್ರತ್ಯೇಕ ವಾದಿ, ಖಲಿಸ್ಥಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಇದೀಗ ಮುಂಬಯಿ ದಾಳಿ (1993 ಮಾರ್ಚ್ 12)ಯ 31ನೇ ವರ್ಷದ ಕರಾಳ ದಿನದಂದೇ ಭಾರತದ ಆರ್ಥಿಕತೆಯನ್ನು ಗುರಿಯಾಗಿಸಲು ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾನೆ. ಇದಕ್ಕಾಗಿ ಮುಂಬಯಿ ಷೇರು ಪೇಟೆ (ಬಿಎಸ್ಇ) ಮತ್ತು ಭಾರತೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ)ಗಳನ್ನು ಗುರಿಯಾಗಿಸಿ ಎಂದಿದ್ದಾನೆ.
ಭಾರತೀಯ ಗುಪ್ತಚರ ಸಂಸ್ಥೆಯ ವರದಿಗಳ ಪ್ರಕಾರ, ಇದೇ ಮಾರ್ಚ್ 12ಕ್ಕೆ ಮುಂಬಯಿ ಸರಣಿ ದಾಳಿ ನಡೆದು 31 ವರ್ಷವಾಗಲಿದೆ. ಈ ಹಿನ್ನೆಲೆ ಯಲ್ಲಿ ಈ ಹಿಂದಿನಂತೆ ಸರಣಿ ದಾಳಿ ನಡೆಸಿ ಕಟ್ಟಡ ಗಳನ್ನು ಧ್ವಂಸಗೊಳಿಸುವ ಬದಲು ಆರ್ಥಿಕತೆ ಯನ್ನೇ ಬುಡಮೇಲು ಮಾಡಲು ಪನ್ನು ಯೋಜಿ ಸಿದ್ದಾನೆ. ಇದರ ಭಾಗವಾಗಿ ಮಾ.12ಕ್ಕೂ ಮುಂಚೆ ಯೇ ಭಾರತೀಯ ಷೇರುಗಳನ್ನು ಮಾರಾಟ ಮಾಡಿ, ಅಮೆರಿಕದ ಷೇರುಗಳನ್ನು ಖರೀದಿಸುವಂತೆ ಕರೆ ನೀಡಿದ್ದಾನೆ ಎನ್ನಲಾಗಿದೆ.