ಖಶೋಗ್ಗಿ ದೇಹ ಆ್ಯಸಿಡ್ನಲ್ಲಿ ಲೀನ
Team Udayavani, Nov 11, 2018, 6:00 AM IST
ಅಂಕಾರ/ವಾಷಿಂಗ್ಟನ್: ಕಳೆದ ತಿಂಗಳ 2ರಂದು ಇಸ್ತಾನುºಲ್ನಲ್ಲಿನ ಸೌದಿ ರಾಜತಾಂತ್ರಿಕ ಕಚೇರಿಯಲ್ಲಿ ನಿಗೂಢವಾಗಿ ಹತ್ಯೆಯಾದ ಸೌದಿ ಮೂಲದ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಮೃತದೇಹವನ್ನು ಆ್ಯಸಿಡ್ನಲ್ಲಿ ಮುಳುಗಿಸಿ ಕರಗಿಸಿ ಚರಂಡಿಗೆ ಹರಿದುಬಿಡಲಾಗಿದೆ ಎಂಬ ಭೀಭತ್ಸ ವರದಿಯೊಂದನ್ನು ಟರ್ಕಿಯ ದಿನಪತ್ರಿಕೆ “ಸುಬಾ’ ಪ್ರಕಟಿಸಿದೆ. ಸೌದಿಯ ರಾಜತಾಂತ್ರಿಕ ಕಚೇರಿಯಿಂದ ಬರುವ ಚರಂಡಿಯ ನೀರಿನಲ್ಲಿ ಆ್ಯಸಿಡ್ ಅಂಶ ಪತ್ತೆಯಾಗಿದ್ದು, ಇದು ಕೊಲೆಯಾಗಿ ವಾರಗಳೇ ಕಳೆದಿದ್ದರೂ ಖಶೋಗ್ಗಿಯ ದೇಹ ಸಿಗದೇ ಇರುವುದರ ಹಿಂದಿನ ಕಾರಣವನ್ನು ದೃಢೀಕರಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗಾಗಿ, ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಸದ್ಯಕ್ಕೆ ಈ ವರದಿಯನ್ನು ಒಪ್ಪುವ ಸಾಧ್ಯತೆಯಿದೆ.
“ಒಪ್ಪಿಗೆ’ಯಿಂದ ಸೌದಿ ವಿಮಾನಗಳಿಗೆ
ಅಮೆರಿಕ ಇಂಧನ ಪೂರೈಕೆಯಿಲ್ಲ: ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಬಳಿಕದ ಪ್ರಮುಖ ಬೆಳವಣಿಗೆಯಲ್ಲಿ ಯೆಮೆನ್ ವಿರುದ್ಧ ಸೌದಿ ಅರೇಬಿಯಾ ನೇತೃತ್ವದ ಕಾಳಗಕ್ಕೆ ಬೆಂಬಲ ನೀಡಲು ಅಮೆರಿಕ ನಿರಾಕರಿಸಿದೆ. ಅದಕ್ಕೆ ಪೂರಕವಾಗಿ ಸೌದಿ ಅರೇಬಿಯಾದ ವಿಮಾನಗಳಿಗೆ ಇಂಧನ ಪೂರೈಕೆ ಮಾಡುವುದನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದೆ. ಕುತೂಹಲಕಾರಿ ವಿಚಾರವೆಂದರೆ 2 ರಾಷ್ಟ್ರಗಳೂ ಪರಸ್ಪರ ಒಪ್ಪಿಗೆಯಿಂದಲೇ ಈ ನಿರ್ಧಾರಕ್ಕೆ ಬಂದಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ “ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ವರದಿಯೂ ಪ್ರಕಟವಾಗಿತ್ತು. ಯಮೆನ್ನಲ್ಲಿ ರಿಯಾದ್ ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಆಕ್ಷೇಪ ವ್ಯಕ್ತವಾಗಿದೆ. ಇದೇ ವೇಳೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಮಾರ್ಟಿನ್ ಗ್ರಿಫ್ ಮುಗ್ಧರ ಹತ್ಯೆ ತಪ್ಪಿಸಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ