ಜಿಹಾದಿತ್ವ ನಿರ್ನಾಮಕ್ಕೆ ಕಠಿನ ಕಾನೂನು, ಲಂಕೆಯ ಮೊದಲ ಆದ್ಯತೆ: ಪ್ರಧಾನಿ ವಿಕ್ರಮಸಿಂಘ
Team Udayavani, Apr 29, 2019, 4:20 PM IST
ಕೊಲಂಬೋ : ದೇಶದಿಂದ ಜಿಹಾದ್ ಮತ್ತು ಉಗ್ರವಾದವನ್ನು ಮೂಲೋತ್ಪಾಟನೆ ಮಾಡುವುದೇ ಶ್ರೀಲಂಕಾ ಸರಕಾರದ ಮೊದಲ ಆದ್ಯತೆಯಾಗಿದೆ ಮತ್ತು ಈ ನಿಟ್ಟಿನಲ್ಲಿ ಅತ್ಯಂತ ಕಠಿನ ಕಾನೂನನ್ನು ಸರಕಾರ ಜಾರಿಗೆ ತರಲಿದೆ ಎಂದು ಪ್ರಧಾನಿ ರಣಿಲ್ ವಿಕ್ರಮಸಿಂಘ ಹೇಳಿದ್ದಾರೆ.
ಕಳೆದ ಈಸ್ಟರ್ ಭಾನುವಾರದಂದು ಕೊಲಂಬೋ ಚರ್ಚುಗಳು ಮತ್ತು ಹೊಟೇಲ್ಗಳಲ್ಲಿ ನಡೆದ ಇಸ್ಲಾಮಿಕ್ ಉಗ್ರರ ಆತ್ಮಾಹುತಿ ಬಾಂಬ್ ದಾಳಿಗೆ 250ಕ್ಕೂ ಹೆಚ್ಚು ಮಂದಿ ಬಲಿಯಾಗಿ 500ಕ್ಕೂ ಅಧಿಕ ಮಂದಿ ಗಾಯಗೊಂಡದ್ದನ್ನು ಅನುಸರಿಸಿ ಲಂಕೆಯ ಪ್ರಧಾನಿ ಈ ಖಡಕ್ ಮಾತನ್ನು ಆಡಿದ್ದಾರೆ.
ಇಸ್ಲಾಮಿಕ್ ಉಗ್ರರ ಆತ್ಮಾಹುತಿ ಬಾಂಬ್ ದಾಳಿ ನಡೆದ ವಾರದ ಬಳಿಕ ಕೊಚ್ಚಿಕಡೆಯಲ್ಲಿ ಸೈಂಟ್ ಅಂಥೋನಿ ಚರ್ಚ್ ನಲ್ಲಿ ನಿನ್ನೆ ಭಾನುವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ರಣಿಲ್ ಅವರು ದೇಶದ ಸಂಸತ್ತು ಇನ್ನು ವಿಳಂಬಿಸಿದೆ ಹೊಸ ಉಗ್ರ ನಿಗ್ರಹ ಮಸೂದೆಯನ್ನು ಪಾಸು ಮಾಡಬೇಕಿದೆ; ಈ ಹೊಸ ಕಾನೂನು ಜಾರಿಗೆ ಬಂದರೆ ಉಗ್ರ ನಿಗ್ರಹಕ್ಕೆ ಭೌಗೋಳಿಕ ವ್ಯಾಪ್ತಿ ಪ್ರಾಪ್ತವಾಗುತ್ತದೆ ಮತ್ತು ಅದರಿಂದ ಭಯೋತ್ಪಾದಕರನ್ನು ಹಾಗೂ ಭಯೋತ್ಪಾದನೆಯನ್ನು ಮಟ್ಟಹಾಕಲು ಸುಲಭವಾಗುತ್ತದೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ