ಬೆಂಗಳೂರು ಮೂಲದ ಓಲಾ ಸಂಚಾರಕ್ಕೆ ಲಂಡನ್ ಸ್ಥಳೀಯಾಡಳಿತ ಅಡ್ಡಗಾಲು
ಇಲಾಖೆಯ ತೀರ್ಮಾನದ ವಿರುದ್ಧ ಓಲಾ, ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದೆ.
Team Udayavani, Oct 6, 2020, 10:20 AM IST
ಲಂಡನ್: ಬೆಂಗಳೂರು ಮೂಲದ ಓಲಾ ಟ್ಯಾಕ್ಸಿ ಕಂಪನಿಗೆ ಲಂಡನ್ನಲ್ಲಿ ಸೇವೆಯನ್ನು ಮುಂದುವರಿಸಲು ಅಲ್ಲಿನ ಸ್ಥಳೀಯಾಡಳಿತ ಅಡ್ಡಗಾಲು ಹಾಕಿದೆ. ಓಲಾಕಾರ್ಯವ್ಯವಸ್ಥೆ ಯಲ್ಲಿ ಪ್ರಯಾಣಿಕರ ಸುರಕ್ಷತೆ ಕುರಿತಂತೆ ಕೆಲ ನ್ಯೂನತೆಗಳಿವೆ ಎಂಬ ಕಾರಣ ಹೇಳಿ, ಲಂಡನ್ನ ಸಾರ್ವಜನಿಕ ಸಾರಿಗೆ ಸಂಸ್ಥೆ (ಟಿಎಫ್ಎಲ್) ಓಲಾದ ಟ್ಯಾಕ್ಸಿ ಸೇವಾ ಲೈಸನ್ಸ್ ನವೀಕರಣ ಮಾಡಲು ನಿರಾಕರಿಸಿದೆ. ಇಲಾಖೆಯ ತೀರ್ಮಾನದ ವಿರುದ್ಧ ಓಲಾ, ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದೆ.
ಆದೇಶ ಹೊರ ಬಂದ21 ದಿನಗಳೊಳಗಾಗಿ ನ್ಯಾಯಾಲಯ ದಲ್ಲಿ ಮನವಿ ಸಲ್ಲಿಸಲು ಅವಕಾಶವಿದೆ. ಈ ಬಗ್ಗೆ ಪ್ರತಿಕ್ರಿಯಿಸಿ ರುವ ಟಿಎಫ್ಎಲ್ ನಿರ್ದೇಶಕಿ ಹೆಲೆನ್ ಚಾಪ್ಟನ್, “ಲಂಡನ್ನಲ್ಲಿ ಓಲಾ ಕಂಪನಿಯಲ್ಲಿರುವ ಸುಮಾರು 1000ಕ್ಕೂ ಹೆಚ್ಚು ವಾಹನಗಳು ಹಾಗೂ ಹಲವಾರು ಚಾಲಕರು ಪರವಾನಗಿಯನ್ನೇ ಹೊಂದಿಲ್ಲದಿರುವುದು ತನಿಖೆಯಿಂದ ತಿಳಿದುಬಂದಿದ್ದು, ಆ ಹಿನ್ನೆಲೆಯಲ್ಲಿ ಲೈಸನ್ಸ್ ನವೀಕರಣ ನಿರಾಕರಿಸಲಾಗಿದೆ” ಎಂದಿದ್ದಾರೆ.
ಇಮ್ರಾನ್ಖಾನ್ಗೆ ವಿಪಕ್ಷಗಳ ಹೊಸ ಸವಾಲು
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಪದಚ್ಯುತಿಯ ಗುರಿಯೊಂದಿಗೆ ಅಖಂಡವಾಗಿ ಒಗ್ಗೂಡಿರುವ ಆ ದೇಶದ 11 ವಿಪಕ್ಷಗಳು ತಮ್ಮ ಒಕ್ಕೂಟದ ಮುಖ್ಯಸ್ಥರನ್ನಾಗಿ ಪಾಕಿಸ್ತಾನ ಖ್ಯಾತ ಧರ್ಮಗುರು ಮೌಲಾನಾ ಫಝಲುರ್ ರೆಹಮಾನ್ ಅವರನ್ನು ನೇಮಿಸಿವೆ.
ಇಮ್ರಾನ್ರವರ ಅತ್ಯಂತ ಪರಿಣಾಮಕಾರಿ ಎದುರಾಳಿ ಎಂದೇ ಪರಿಗಣಿಸಲ್ಪಟ್ಟಿರುವ ರೆಹಮಾನ್,ಕಳೆದ ವರ್ಷ ಇಮ್ರಾನ್ ಸರ್ಕಾರದ ವಿರುದ್ಧ ಆಜಾದಿ
ಮಾರ್ಚ್ಹೆಸರಿನಲ್ಲಿ ಕರಾಚಿಯಿಂದಇಸ್ಲಾಮಾಬಾದ್ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದಾರೆ.
ಅಪಾರ ಜನಸ್ತೋಮದೊಂದಿಗೆ ಸಾಗಿದ್ದ ಈ ಪಾದಯಾತ್ರೆ ಯನ್ನು ಇಮ್ರಾನ್ ಸರ್ಕಾರ ಹತ್ತಿಕ್ಕುವಲ್ಲಿ ಸಫಲವಾಗಿ ತ್ತಾದರೂ, ಆ ವಿದ್ಯಮಾನ ಪಾಕಿಸ್ತಾನದ ರಾಜಕೀಯ ರಂಗದಲ್ಲಿ ರೆಹಮಾನ್ರವರ ಪ್ರಭಾವವನ್ನು ಅಗಾಧ ವಾಗಿ ಹೆಚ್ಚಿಸಿತ್ತು. ಆ ಹಿನ್ನೆಲೆಯಲ್ಲಿ, ವಿಪಕ್ಷಗಳ ಒಕ್ಕೂಟ ರೆಹಮಾನ್ರವರನ್ನೇ ತಂದು ತಮ್ಮ ಮುಖ್ಯಸ್ಥರನ್ನಾಗಿ ಸಿವೆ. ಅಲ್ಲದೆ, ಇಮ್ರಾನ್ ಪದಚ್ಯುತಿಗೆ ಠಾರಾವನ್ನೂ ಮಂಡಿಸಿವೆ. ಇದು ಇಮ್ರಾನ್ ಸರ್ಕಾರಕ್ಕೆ ಎದುರಾಗಿ ರುವ ಅತಿ ದೊಡ್ಡ ಸವಾಲು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…