ಭಾರತೀಯ ವಿಮಾನಗಳ ಹಾರಾಟಕ್ಕೆ ಮೇ 30ರ ತನಕ ಪಾಕ್ ವಾಯು ಕ್ಷೇತ್ರ ಬಂದ್
Team Udayavani, May 15, 2019, 7:19 PM IST
ಲಾಹೋರ್ : ಭಾರತದಲ್ಲಿನ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಇಸ್ಲಾಮಾಬಾದ್ ಕಾಯುತ್ತಿರುವುದರಿಂದ ಮೇ 30ರ ವರೆಗೆ ತನ್ನ ವಾಯು ಕ್ಷೇತ್ರವನ್ನು ಭಾರತೀಯ ವಿಮಾನಗಳ ಹಾರಾಟಕ್ಕೆ ತೆರೆಯದಿರಲು ಪಾಕಿಸ್ಥಾನ ಇಂದು ಬುಧವಾರ ನಿರ್ಧರಿಸಿದೆ.
ಕಳೆದ ಫೆ.26ರಂದು ಭಾರತೀಯ ವಾಯು ಪಡೆಯು ಬಾಲಾಕೋಟ್ ನಲ್ಲಿನ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಬಳಿಕದಲ್ಲಿ ಪಾಕಿಸ್ಥಾನ ವಾಯು ಕ್ಷೇತ್ರವನ್ನು ಭಾರತೀಯ ವಿಮಾನಗಳ ಹಾರಾಟಕ್ಕೆ ಮುಚ್ಚಿತ್ತು.
ಆದರೂ ಕಳೆದ ಮಾರ್ಚ್ 27ರಂದು ಪಾಕಿಸ್ಥಾನ, ಹೊಸದಿಲ್ಲಿ, ಬ್ಯಾಂಕಾಕ್ ಮತ್ತು ಕೌಲಾಲಂಪುರ ಹೊರತುಪಡಿಸಿ ಉಳಿದೆಲ್ಲ ವಿಮಾನ ಹಾರಾಟಗಳಿಗೆ ತನ್ನ ವಾಯು ಕ್ಷೇತ್ರವನ್ನು ತೆರೆದಿತ್ತು.
ಪಾಕ್ ರಕ್ಷಣಾ ಇಲಾಖೆಯ ಉನ್ನತಾಧಿಕಾರಿ ಹೇಳಿರುವ ಪ್ರಕಾರ ಇಂದು ಬುಧವಾರ ಪಾಕ್ ಸರಕಾರ ಭಾರತೀಯ ವಿಮಾನಗಳ ಹಾರಾಟಕ್ಕೆ ತನ್ನ ವಾಯು ಕ್ಷೇತ್ರವನ್ನು ತೆರೆಯುವುದನ್ನು ಪುನರ್ ಪರಿಶೀಲಿಸುವ ಸಭೆ ನಡೆಸಿತ್ತು. ಆದರೆ ಭಾರತದಲ್ಲಿನ ಲೋಕಸಭಾ ಚುನಾವಣೆ ಫಲಿತಾಂಶಗಳು ಸದ್ಯವೇ ಹೊರಬರಲಿರುವ ಕಾರಣ ಮೇ 30ರ ತನಕ ತನ್ನ ವಾಯು ಕ್ಷೇತ್ರವನ್ನು ಮಚ್ಚಿಡಲು ಅದು ನಿರ್ಧರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ