ಪೈಲಟ್ ಮೇಲೆ ಬೆಕ್ಕಿನ ದಾಳಿ….ವಿಮಾನ ತುರ್ತು ಭೂಸ್ಪರ್ಶ!
ಪರಿಸ್ಥಿತಿ ಕೈಮೀರುವ ಮುನ್ನವೆ ಅನಿವಾರ್ಯವಾಗಿ ವಿಮಾನವನ್ನು ವಾಪಸ್ ಖಾರ್ಟೌಮ್ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
Team Udayavani, Mar 1, 2021, 6:38 PM IST
ಸುಡಾನ್ : ತಾಂತ್ರಿಕ ದೋಷ ಇಲ್ಲವೆ, ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾದಂತಹ ಕೆಲವು ಸಂದರ್ಭಗಳಲ್ಲಿ ವಿಮಾನಗಳು ತುರ್ತು ಭೂಸ್ಪರ್ಶ ಮಾಡಿರುವ ಘಟನೆಗಳು ಸಾಕಷ್ಟು ನಡೆದಿವೆ. ಆದರೆ, ಸುಡಾನ್ನಲ್ಲಿ ಪುಟ್ಟ ಬೆಕ್ಕೊಂದು ಆಗಸದಲ್ಲಿ ಹಾರುತ್ತಿದ್ದ ವಿಮಾನ ಭೂಮಿಗೆ ಇಳಿಯುವಂತೆ ಮಾಡಿದೆ.
ಹೌದು, ತುಂಬಾ ಕುತೂಹಲ ಮೂಡಿಸುವ ಈ ಪ್ರಸಂಗ ನಡೆದಿರುವುದು ಸುಡಾನ್ ದೇಶದ ಖಾರ್ಟೌಮ್ ನಲ್ಲಿ. ಪ್ರಯಾಣಿಕರನ್ನು ಹೊತ್ತು ಖಾರ್ಟೌಮ್ನಿಂದ ಪ್ರಯಾಣ ಬೆಳೆಸಿದ ವಿಮಾನ, ಅರ್ಧಗಂಟೆಯಲ್ಲಿ ಅದೇ ನಿಲ್ದಾಣಕ್ಕೆ ಹಿಂದುರಿಗಿ ಲ್ಯಾಂಡ್ ಆಗಿದೆ. ವಿಮಾನದ ಈ ತುರ್ತು ಲ್ಯಾಂಡಿಂಗ್ ಗೆ ಕಾರಣವಾಗಿದ್ದು ಒಂದು ಬೆಕ್ಕು ಎಂಬ ವಿಚಾರ ಅಧಿಕಾರಿಗಳಿಗೆ ಹಾಗೂ ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿದೆ.
ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ?
ಈ ವಿಮಾನ ಟೆಕ್ ಆಫ್ ಆಗಿ ಅರ್ಧ ಗಂಟೆಯಾಗಿತ್ತು. ಈ ವೇಳೆ ಕಾಕ್ಪಿಟ್ ಪ್ರವೇಶಿಸಿದ ಬೆಕ್ಕು ಪೈಲಟ್ ಮೇಲೆ ದಾಳಿ ನಡೆಸಿದೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಬೆಕ್ಕನ್ನು ಹಿಡಿಯಲು ವಿಮಾನದ ಸಿಬ್ಬಂದಿ ವಿಫಲರಾಗಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನವೆ ಅನಿವಾರ್ಯವಾಗಿ ವಿಮಾನವನ್ನು ವಾಪಸ್ ಖಾರ್ಟೌಮ್ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
ಬೆಕ್ಕು ಹೇಗೆ ಬಂತು ?
ಇನ್ನು ವಿಮಾನದ ಪ್ರಯಾಣಕ್ಕೆ ಅಡ್ಡಿ ಪಡಿಸಿದ ಈ ಬೆಕ್ಕು ಯಾರದು ? ಅದು ಕಾಕ್ಪಿಟ್ ಪ್ರವೇಶಿಸಿದ್ದು ಹೇಗೆ ಎಂಬುದಕ್ಕೆ ಸರಿಯಾದ ಉತ್ತರ ಸಿಕ್ಕಿಲ್ಲ. ಅದು ಪ್ರಯಾಣಿಕರಿಗೆ ಸೇರಿದ ಬೆಕ್ಕು ಎನ್ನಲಾಗುತ್ತಿದೆ. ಈ ಕುರಿತು ತನಿಖೆ ನಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ