ಆರ್‌ಸಿಇಪಿ ಒಪ್ಪಂದ 2020ಕ್ಕೆ ಮುಂದೂಡಿಕೆ?

ಕೊನೆ ಕ್ಷಣದಲ್ಲಿ ಭಾರತದಿಂದ ಹಲವು ಬೇಡಿಕೆ, ಸ್ಪಷ್ಟೀಕರಣ ಕೇಳಿಕೆ

Team Udayavani, Nov 3, 2019, 8:32 PM IST

delay

ಬ್ಯಾಂಕಾಕ್‌: ದೇಶಾದ್ಯಂತ ಉದ್ದಿಮೆ, ಕೃಷಿ ವಲಯದ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಇದರೊಂದಿಗೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ 2020ಕ್ಕೆ ಮುಂದೂಡುವ ಸಾಧ್ಯತೆಗಳು ಇದೀಗ ದಟ್ಟವಾಗಿವೆ.

ಚೀನ ಸರಕುಗಳು ದಂಡಿಯಾಗಿ ಭಾರತದ ಮಾರುಕಟ್ಟೆಗೆ ಬೀಳುವುದರೊಂದಿಗೆ ಇಲ್ಲಿನ ಸಣ್ಣ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂಬ ಹಿನ್ನೆಲೆಯಲ್ಲಿ ಭಾರತ ಕೆಲವೊಂದು ಹೊಸ ಬೇಡಿಕೆಗಳನ್ನು ಮುಂದಿಟ್ಟಿದ್ದು ಒಪ್ಪಂದ ಪ್ರಕ್ರಿಯೆ ಮುಂದೆ ಹೋಗಲಿದೆ ಎನ್ನಲಾಗಿದೆ.

ಭಾರತದ ಆತಂಕ
ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಆಸಿಯಾನ್‌ ದೇಶಗಳ ಸಮ್ಮೇಳನದಲ್ಲಿ ಆರ್‌ಸಿಇಪಿ ಕುರಿತು 10 ದೇಶಗಳು ಬಹುತೇಕ ಅಂತಿಮ ಒಪ್ಪಂದಕ್ಕೆ ಬರಲಿವೆ ಎಂದು ಹೇಳಲಾಗಿತ್ತು. ಆದರೆ ಭಾರತ ಕೆಲವೊಂದು ಪ್ರಶ್ನೆಗಳನ್ನು, ಬೇಡಿಕೆಗಳನ್ನು ಕೊನೆ ಕ್ಷಣದಲ್ಲಿ ಇಟ್ಟಿದ್ದರಿಂದ ಒಪ್ಪಂದ ಮುಂದಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.

ಒಪ್ಪಂದದ ಎಲ್ಲ 20 ಅಧ್ಯಾಯಗಳು ಪೂರ್ಣಗೊಂಡಿವೆ. ಆದರೆ, ಒಂದು ದೇಶ ಮಾತ್ರ ನಿರ್ಧಾರಕ್ಕೆ ಬರಬೇಕಿದೆ. ಅದು ಭಾರತವೆಂದು ನಂಬಲಾಗಿದೆ ಎಂದು ಒಪ್ಪಂದದ ಬಗ್ಗೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಆಸಿಯಾನ್‌ ರಾಷ್ಟ್ರದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೇರವಾಗಿ ಆರ್‌ಸಿಇಪಿ ಒಪ್ಪಂದವನ್ನು ಪ್ರಸ್ತಾವಿಸದಿದ್ದರೂ, ಎಲ್ಲ ದೇಶಗಳ ಮಾರುಕಟ್ಟೆಗಳ ಸಂಪರ್ಕ ಅರ್ಥವತ್ತಾಗಿ, ಸಮಾಂತರವಾಗಿರಬೇಕು ಎಂಬರ್ಥದ ಮಾತುಗಳನ್ನು ಆಡಿದ್ದರು. ಆದಾಗ್ಯೂ ಈ ವರ್ಷದೊಳಗೆ ಒಪ್ಪಂದದ ವಿಚಾರಗಳ ಬಗ್ಗೆ ನಾವು ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಥೈಲೆಂಡ್‌ ಪ್ರಧಾನಿ ಹೇಳಿದ್ದಾರೆ.

ತೆರಿಗೆ ವಿನಾಯ್ತಿ ಲಾಭಕ್ಕೆ ಚೀನ ಹವಣಿಕೆ
ಭಾರತದಿಂದ ನ್ಯೂಜಿಲೆಂಡ್‌ವರೆಗೆ 16 ದೇಶಗಳು ಆರ್‌ಸಿಇಪಿ ಒಪ್ಪಂದದಲ್ಲಿವೆ. ಪಾಶ್ವಿ‌ಮಾತ್ಯ ರಾಷ್ಟ್ರಗಳ ಹೊರತಾದ ಮಾರಾಟ ಒಪ್ಪಂದ ಇದಾಗಿದ್ದು ಜಗತ್ತಿನ ಅರ್ಧದಷ್ಟು ಜನಸಂಖ್ಯೆಯನ್ನು ಒಳಗೊಳ್ಳುತ್ತದೆ. ಚೀನ-ಅಮೆರಿಕ ವ್ಯಾಪಾರ ಯುದ್ಧದಿಂದ ಹೆಚ್ಚಿನ ಸಮಸ್ಯೆಗಳಾಗುವುದನ್ನು ತಪ್ಪಿಸಲು ಈ ಒಪ್ಪಂದ ಪೂರಕವಾಗಲಿದೆ ಎಂದು ಹೇಳಲಾಗಿತ್ತು. ಈ ಒಪ್ಪಂದದಲ್ಲಿ ಚೀನ ನಿರ್ಣಾಯಕ ಸ್ಥಾನವನ್ನು ಹೊಂದಿದೆ. ಜತೆಗೆ ಒಪ್ಪಂದ ಅನ್ವಯ ದೇಶಗಳ ನಡುವೆ ಶೇ.90ರಷ್ಟು ತೆರಿಗೆ ವಿನಾಯಿತಿಯಲ್ಲಿ ಸರಕು ಮಾರಾಟ ನಡೆಯಲಿದೆ.

ಸದ್ಯ ಚೀನದ ಸರಕುಗಳ ಮೇಲೆ ಶೇ.70-80ರಷ್ಟು ತೆರಿಗೆ ಇದೆ. ಇನ್ನು ಆರ್‌ಸಿಇಪಿ ಒಪ್ಪಂದಕ್ಕೆ ಚೀನ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದು, ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳಿಗೆ ತನ್ನ ಸರಕಗಳನ್ನು ಬೇಕಾದಷ್ಟು ರಫ್ತುಮಾಡುವ ಉತ್ಸಾಹದಲ್ಲಿದೆ. ಇದರಿಂದ ತನ್ನ ಆರ್ಥಿಕತೆ ಇನ್ನಷ್ಟು ಬಲಿಷ್ಠವಾಗಬಹುದು ಎಂಬ ಲೆಕ್ಕಾಚಾರವನ್ನು ಅದು ಹೊಂದಿದೆ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.