ವುಹಾನ್ ಕೋವಿಡ್ 19: ಚೀನಾ ಹೇಳಿದ್ದು ಕೇವಲ ಅರ್ಧ ಸತ್ಯ-ಭಯಾನಕ ಸತ್ಯ ಬಿಚ್ಚಿಟ್ಟ ವರದಿ!

ವರದಿಯ ಪ್ರಕಾರ, ಸುಮಾರು 3,500 ಜನರಿಗೆ ಪ್ರತಿದಿನ ಬೂದಿಯ ಮಡಕೆಯನ್ನು ಸಂತ್ರಸ್ತರ ಕುಟುಂಬಕ್ಕೆ ಸರ್ಕಾರ ನೀಡಿತ್ತು.

Team Udayavani, Mar 30, 2020, 7:32 PM IST

ವುಹಾನ್ ಕೋವಿಡ್ 19: ಚೀನಾ ಹೇಳಿದ್ದು ಕೇವಲ ಅರ್ಧ ಸತ್ಯ-ಭಯಾನಕ ಸತ್ಯ ಬಿಚ್ಚಿಟ್ಟ ವರದಿ

Representative Image

ಬೀಜಿಂಗ್: ಮಾರಣಾಂತಿಕ ಕೋವಿಡ್ 19 ವೈರಸ್ ತವರು ಎಂದೇ ಕುಖ್ಯಾತಿ ಪಡೆದ ಚೀನಾದಲ್ಲಿ ಈ ಮಹಾಮಾರಿಗೆ ಸಾವನ್ನಪ್ಪಿದ್ದವರ ಸಂಖ್ಯೆ 3000, 4000 ಎಂದು ಸರ್ಕಾರ ಹೇಳಿತ್ತು. ಆದರೆ ಇದು ಸತ್ಯವಾದ ಅಂಕಿಅಂಶ ಅಲ್ಲ ಎಂಬುದು ಚೀನಾದ ಸ್ಥಳೀಯರ ವಾದವಾಗಿದೆ ಎಂದು ದ ಸನ್ ಪತ್ರಿಕೆ ವರದಿ ಮಾಡಿದೆ.

ಚೀನಾದ ವುಹಾನ್ ನಲ್ಲಿ ಮಾರಕ ಕೋವಿಡ್ 19 ವೈರಸ್ ಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 42 ಸಾವಿರ ಎಂದು ಅಂದಾಜಿಸಲಾಗಿದೆ. ಸ್ಥಳೀಯರ ವಾದ ಸರಣಿ ಹೀಗಿದೆ…ದಿನಂಪ್ರತಿ 500 ಯೂರಾನ್ಸ್ (ಅಂತ್ಯ ಸಂಸ್ಕಾರ ನೆರವೇರಿಸಲು ನೀಡುವ ಬೂದಿ) ಅನ್ನು ಸರಬರಾಜು ಮಾಡಲಾಗಿತ್ತು. ಹುಬೈ ಪ್ರಾಂತ್ಯದಲ್ಲಿ ಏಳು ದಿನಗಳ ಕಾಲವೂ 500 ಯೂರಾನ್ಸ್ ಹಂಚಲಾಗಿತ್ತು ಎಂದು ತಿಳಿಸಿದ್ದಾರೆ.

ವರದಿಯ ಪ್ರಕಾರ, ಸುಮಾರು 3,500 ಜನರಿಗೆ ಪ್ರತಿದಿನ ಬೂದಿಯ ಮಡಕೆಯನ್ನು ಸಂತ್ರಸ್ತರ ಕುಟುಂಬಕ್ಕೆ ಸರ್ಕಾರ ನೀಡಿತ್ತು. ಇದರ ಅರ್ಥ 42ಸಾವಿರ ಯೂರಾನ್ಸ್ ಹನ್ನೆರಡು ದಿನಗಳಲ್ಲಿ ವಿತರಿಸಲಾಗಿದೆ ಎಂದು ದ ಮೇಲ್ ಆನ್ ಲೈನ್ ವರದಿ ವಿವರಿಸಿದೆ.

ವುಹಾನ್ ನಲ್ಲಿ ವಾಸವಾಗಿರುವವರು ಹೇಳುವ ಪ್ರಕಾರ ಕೋವಿಡ್ 19 ಅತೀ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ ಜನರು ಭಯಭೀತರಾಗುತ್ತಾರೆ ಎಂದು ಸತ್ಯಾಂಶ ಬಿಚ್ಚಿಟ್ಟಿಲ್ಲ ಎಂದು ದೂರಿದ್ದಾರೆ. ಸರ್ಕಾರ ನಿಧಾನಕ್ಕೆ ನಿಜವಾದ ಅಂಕಿಅಂಶವನ್ನು ಬಿಡುಗಡೆ ಮಾಡಬಹುದು. ನಂತರ ಜನರು ಕೂಡಾ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ ಎಂದು ವ್ಯಕ್ತಿಯೊಬ್ಬರು ಪತ್ರಿಕೆ ತಿಳಿಸಿದ್ದಾರೆ.

ಹುಬೈ ಪ್ರಾಂತ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ 28 ಸಾವಿರ ಜನರ ಶವ ಸಂಸ್ಕಾರ ನಡೆಸಲಾಗಿದೆ ಎಂದು ಒಂದು ಮೂಲ ತಿಳಿಸಿದೆ ಎಂದು ವರದಿ ವಿವರಿಸಿದೆ. ಕೋವಿಡ್ 19 ವೈರಸ್ ದಾಳಿಗೆ ತುತ್ತಾಗಿದ್ದ ವುಹಾನ್ ನಿಂದ ಸಾವಿರಾರು ಯೂರಾನ್ಸ್ ಅನ್ನು ಚೀನಾ ಸತ್ಯ ಹೊರ ಜಗತ್ತಿಗೆ ತಿಳಿಯಲಿದೆ ಎಂಬ ಭಯದಿಂದ ರಹಸ್ಯವಾಗಿ ಸಾಗಿಸಿರುವುದಾಗಿ ಸನ್ ಆನ್ ಲೈನ್ ಈ ಹಿಂದೆ ವರದಿಯೊಂದನ್ನು ಪ್ರಕಟಿಸಿತ್ತು.

ಚೀನಾ ಮೂಲದ ಕೈಕ್ಸಿನ್ ಮಾಧ್ಯಮದ ವರದಿಯಂತೆ ಅಂತ್ಯಸಂಸ್ಕಾರ ನಡೆಸುವ ಮನೆಗಳಿಗೆ ಲಾರಿಗಳಲ್ಲಿ ಯೂರಾನ್ಸ್ ಅನ್ನು ತುಂಬಿ ಕಳುಹಿಸುತ್ತಿರುವ ಫೋಟೊವನ್ನು ಪ್ರಕಟಿಸಿರುವುದಾಗಿ ಹೇಳಿದೆ. ಎರಡು ದಿನಗಳಲ್ಲಿ ,2500 ಯೂರಾನ್ಸ್ ಎಂದು ವರದಿ ಮಾಡಿದ್ದು, ಮತ್ತೊಂದು ಫೋಟೋದಲ್ಲಿ ರಹಸ್ಯವಾಗಿ 3,500 ಯೂರಾನ್ಸ್ ತುಂಬಿಸಿರುವು ಫೋಟೊವನ್ನು ಪ್ರಕಟಿಸಿತ್ತು ಎಂದು ವಿವರಿಸಿದೆ.

ಮಾರಕ ವೈರಸ್ ನಿಂದ ವುಹಾನ್ ಮತ್ತು ಹುಬೈ ಪ್ರಾಂತ್ಯ ಅಕ್ಷರಶಃ ನಲುಗಿ ಹೋಗಿದ್ದವು. ಆದರೆ ಹೊರಗೆ ಜಗತ್ತಿಗೆ ಭಯಾನಕ ವಿವರಗಳು ಬಯಲಾಗಿಲ್ಲವಾಗಿತ್ತು. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಮಾಧ್ಯಮಗಳಿಗೆ, ಸತ್ಯ ಹೇಳುವ ವೈದ್ಯರಿಗೆ ಎಲ್ಲರಿಗೂ ಚೀನಾ ಸರ್ಕಾರ ನಿರ್ಬಂಧ ವಿಧಿಸಿಬಿಟ್ಟಿತ್ತು.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.