ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣವೃಂದಾವನ ವಾರ್ಷಿಕೋತ್ಸವ: ಭಾಗವಹಿಸಿ, ಹರಸಿದ ಪುತ್ತಿಗೆಶ್ರೀ
Team Udayavani, Nov 20, 2023, 2:57 PM IST
ಅಮೇರಿಕ: ಇಲ್ಲಿನ ಹೂಸ್ಟನ್ ಮಹಾನಗರದ ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣ ವೃಂದಾವನದ 12ನೇ ವಾರ್ಷಿಕೋತ್ಸವದಲ್ಲಿ ಪುತ್ತಿಗೆ ಶ್ರೀಪಾದರು ಪಾಲ್ಗೊಂಡರು.
ಶ್ರೀಪಾದರು ವಿಶ್ವಾದ್ಯಂತ ಸಂಚರಿಸಿ ಸನಾತನ ಹಿಂದೂ ಧರ್ಮ ಪ್ರಚಾರದ ಜೊತೆಗೆ ಶ್ರೀಕೃಷ್ಣ ಭಕ್ತಿ ಪ್ರಸಾರಕ್ಕಾಗಿ ಅಲ್ಲಲ್ಲಿ ಸ್ಥಾಪಿಸಿರುವ ಶ್ರೀಮಠಗಳಲ್ಲಿ ಹೂಸ್ಟನ್ ನಲ್ಲಿರುವ ಮಠ 4ನೇ ಮಠವಾಗಿ 2011 ರಲ್ಲಿ ಸ್ಥಾಪನೆಯಾಗಿದೆ.
ತತ್ಸಂಬಂಧವಾಗಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಸಂದರ್ಭದಲ್ಲಿ ಮುಂಜಾನೆ ಶ್ರೀಕೃಷ್ಣದೇವರಿಗೆ 108 ಪ್ರಸನ್ನ ಕಲಶಾಭಿಷೇಕ ಪೂಜೆ ನಡೆಯಿತು.
ಬಳಿಕ ನೆರೆದ ಭಕ್ತರಿಗೆ ಮುದ್ರಾಧಾರಣೆ ನಡೆಯಿತು. ಸಾಯಂಕಾಲ ಗೋಧೂಳಿ ಲಗ್ನದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ ನಡೆಯಿತು.
ಉಡುಪಿ ಮೂಲದ ಭಕ್ತರು ಹುಲಿವೇಷಧಾರಿಗಳಾಗಿ ಹುಲಿವೇಷ ಕುಣಿತದೊಂದಿಗೆ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು .ಶ್ರೀಪಾದರು ರಾತ್ರಿ ಪೂಜೆ ಬಳಿಕ ತುಳಸೀ ಪೂಜೆ ನೆರವೇರಿಸಿದರು.
ಕಾರ್ತಿಕ ಮಾಸದ ಸಂದರ್ಭದಲ್ಲಿ ಭಕ್ತರಿಂದ ನಡೆದ ತುಳಸೀ ಸಂಕೀರ್ತನೆ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ಪ್ರತಿರೂಪದಂತೆ ಅತ್ಯಂತ ಶೋಭಾಯಮಾನವಾಗಿತ್ತು.
ಪೂಜ್ಯ ಶ್ರೀಪಾದರು ಎಲ್ಲರನ್ನು ಹರಸಿ ತಮ್ಮ ಚತುರ್ಥ ಪರ್ಯಾಯಕ್ಕೆ ಆಮಂತ್ರಿಸಿದರು. ಎಲ್ಲರಿಗೂ ಭಗವದ್ಗೀತೆ ಬರೆಯುವ ದೀಕ್ಷೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ