ಹೆಲಿಕಾಪ್ಟರ್ ಪತನ: ಉಕ್ರೇನ್ ಸಚಿವ, ಮೂವರು ಮಕ್ಕಳು ಸೇರಿದಂತೆ 18 ಮಂದಿ ದುರಂತ ಅಂತ್ಯ
ರಷ್ಯಾ ಸೇನಾಪಡೆ ಈ ಮೊದಲು ನಡೆಸಿದ್ದ ಯುದ್ಧದ ಸನ್ನಿವೇಶದಂತಿತ್ತು ಎಂದು ವರದಿ ತಿಳಿಸಿದೆ.
Team Udayavani, Jan 18, 2023, 4:45 PM IST
ಕೀವ್(ಉಕ್ರೇನ್): ಉಕ್ರೈನ್ ಆಂತರಿಕ ಸಚಿವ ಹಾಗೂ ಮೂವರು ಮಕ್ಕಳು ಸೇರಿದಂತೆ 18 ಮಂದಿ ಉಕ್ರೇನ್ ನ ಹೊರವಲಯದ ಕೀವ್ ನಲ್ಲಿರುವ ಶಿಶುವಿಹಾರದ ಬಳಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ದುರಂತ ಅಂತ್ಯಕಂಡಿರುವ ಘಟನೆ ಬುಧವಾರ (ಜನವರಿ 18) ನಡೆದಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್ ತುಳಿಯುತ್ತಿದ್ದಾರೆ : ಸಿದ್ದರಾಮಯ್ಯ
ಹೆಲಿಕಾಪ್ಟರ್ ಶಿಶುವಿಹಾರ ಮತ್ತು ಬ್ರೋವರೈನಲ್ಲಿರುವ ರೆಸಿಡೆನ್ಸಿಯಲ್ ಕಟ್ಟಡದ ಸಮೀಪ ಪತನಗೊಂಡಿತ್ತು. ಬ್ರೋವರೈ ರಾಜಧಾನಿ ಕೀವ್ ಸಮೀಪದ ಪಟ್ಟಣವಾಗಿದೆ. ಇಂದು ಸಂಭವಿಸಿದ ದುರಂತ ಉಕ್ರೇನ್ ನಲ್ಲಿ ರಷ್ಯಾ ಸೇನಾಪಡೆ ಈ ಮೊದಲು ನಡೆಸಿದ್ದ ಯುದ್ಧದ ಸನ್ನಿವೇಶದಂತಿತ್ತು ಎಂದು ವರದಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬೀಭತ್ಸ ದುರಂತದ ದೃಶ್ಯಗಳ ತುಣುಕು ಹರಿದಾಡುತ್ತಿದ್ದು, ಸುಟ್ಟು ಹೋದ ಶವಗಳು, ಹೆಲಿಕಾಪ್ಟರ್ ನ ಅವಶೇಷಗಳು ಒಟ್ಟು ಸೇರಿ ಕಸದ ರಾಶಿಯಂತೆ ಕಟ್ಟಡದ ಸಮೀಪ ಬಿದ್ದಿದ್ದು, ಕಾರುಗಳು ಜಖಂಗೊಂಡಿರುವ ದೃಶ್ಯ ವಿಡಿಯೋದಲ್ಲಿರುವುದಾಗಿ ವರದಿ ವಿವರಿಸಿದೆ.
🇺🇦🚁🔥A kindergarten destroyed as a result of a helicopter crash pic.twitter.com/WZx2Bk5ArN
— AZ 🛰🌏🌍🌎 (@AZgeopolitics) January 18, 2023
ಹೆಲಿಕಾಪ್ಟರ್ ದುರಂತದಲ್ಲಿ ಉಕ್ರೇನ್ ಆಂತರಿಕ ಸಚಿವ ಡೆನೈಸ್ ಮೊನಾಸ್ಟ್ರೈಸ್ಕೈ ಕೊನೆಯುಸಿರೆಳೆದಿದ್ದು, ಒಟ್ಟು 18 ಜನರು ವಿಧಿವಶರಾಗಿದ್ದಾರೆ. ಘಟನೆಯಲ್ಲಿ 15 ಮಕ್ಕಳು ಸೇರಿದಂತೆ 25 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾ ತಂಡ ಕಾರ್ಯನಿರ್ವಹಿಸುತ್ತಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು