ಜಗತ್ತಿನ ನೇತೃತ್ವ ವಹಿಸಲು ಅಮೆರಿಕ ಮತ್ತೆ ಸಿದ್ಧ: ಬೈಡೆನ್
Team Udayavani, Nov 26, 2020, 1:58 AM IST
ವಾಷಿಂಗ್ಟನ್/ಟೆಹರಾನ್: ಜಗತ್ತಿನ ನಾಯಕತ್ವ ವಹಿಸಲು ಅಮೆರಿಕ ಸಿದ್ಧವಿದೆ ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. “ಅಮೆರಿಕ ಈಸ್ ಬ್ಯಾಕ್’ ಎಂದು ಹೇಳಿರುವ ಅವರು ತಮ್ಮ ನೇತೃತ್ವದ ಸರಕಾರ ಮತ್ತೆ ಜಗತ್ತಿನ ನಾಯಕತ್ವ ವಹಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರ ಹೊಂದಿರುವ ನಿರ್ಧಾರಗಳಲ್ಲಿ ಆಮೂಲಾಗ್ರ ಬದಲಾವಣೆಯಾಗುತ್ತದೆ ಎಂದು ಮತ್ತೂಮ್ಮೆ ಬೈಡೆನ್ ಸುಳಿವು ನೀಡಿದ್ದಾರೆ.
ಡೆಲವೇರ್ನಲ್ಲಿ ಮಾತನಾಡಿದ ಅವರು, ನಮ್ಮ ವೈರಿಗಳಿಂದ ಎದುರಾ ಗುವ ಸವಾಲು ಎದುರಿಸಲು ಸಿದ್ಧರಿ ದ್ದೇವೆ. ಜತೆಗೆ ಮಿತ್ರರನ್ನೂ ತಿರಸ್ಕರಿಸಲು ಸಿದ್ಧರಾಗಿಲ್ಲ. ಜತೆಗೆ ನಮ್ಮ ಮೌಲ್ಯಗಳನ್ನು ಎತ್ತಿ ಹಿಡಿಯಲೂ ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ. ಜಗತ್ತಿನ ಹಲವು ನಾಯಕರು ಇದನ್ನೇ ಬಯಸುತ್ತಿದ್ದಾರೆ. ಫೆಸಿಫಿಕ್ನಿಂದ ಅಟ್ಲಾಂಟಿಕ್ ವರೆಗೆ ಮತ್ತು ಜಗತ್ತಿನಾದ್ಯಂತ ಇದೇ ಅಭಿಪ್ರಾ ಯವಿದೆ ಎಂದು ಬೈಡೆನ್ ಪ್ರತಿಪಾದಿ ಸಿದರು. ಇದೇ ಕಾರ್ಯಕ್ರಮದಲ್ಲಿ ತಮ್ಮ ನೇತೃತ್ವದ ಸಚಿವ ಸಂಪುಟದಲ್ಲಿ ಅಧಿಕಾರ ನಡೆಸಲಿರುವ ಆರು ಮಂದಿಯನ್ನೂ ಅವರು ಪರಿಚಯಿಸಿದರು. ಇಂಥ ಸಂಕಷ್ಟಮಯ ಸಂದರ್ಭದಲ್ಲಿ ಆಡಳಿತದ ಹೊಸ ತಂಡದ ಜತೆಗೆ ಭೇಟಿಯಾಗುವುದು ಮಹತ್ವ ಪಡೆದಿದೆ ಎಂದರು ಬೈಡೆನ್. ಮೈತ್ರಿ ರಾಷ್ಟ್ರಗಳ ಜತೆಗೆ ಹೊಸ ತಂಡದ ಜತೆಗೆ ಕೆಲಸ ಮಾಡುವ ವೇಳೆ ನಾನು ಹೊಂದಿರುವ ನಂಬುಗೆಯಂತೆ ಕೆಲಸ ಮಾಡಲಿದ್ದಾರೆ ಎಂಬ ನಂಬುಗೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಕೊನೆಗೂ ಕ್ಸಿ ಅಭಿನಂದನೆ
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ಗೆ ಚೀನ ಅಧ್ಯಕ್ಷ ಜೋ ಬೈಡೆನ್ ಬುಧವಾರ ಅಭಿನಂದನೆ ಸಲ್ಲಿಸಿದ್ದಾರೆ. ಎರಡೂ ದೇಶಗಳ ನಡುವೆ ಮುಂದಿನ ದಿನಗಳಲ್ಲಿ ಸಂಘರ್ಷ ರಹಿತ ವಾತಾವರಣದಲ್ಲಿ ಬಾಂಧವ್ಯ ಇರುವಂತಾಗಲಿ ಎಂದು ಹಾರೈಸಿದ್ದಾರೆ. ಇದರಿಂದಾಗಿ ಎರಡೂ ದೇಶಗಳ ಜನರಿಗೆ ಅನುಕೂಲವಾಗಿಯೂ ಪರಿಣಮಿಸಲಿದೆ. ಚೀನ ಉಪಾಧ್ಯಕ್ಷ ವಾಂಗ್ ಕ್ವಿಶಾನ್ ಕೂಡ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರಿಗೆ ಅಭಿನಂದನೆಯ ಸಂದೇಶ ನೀಡಿದ್ದಾರೆ.
ರೊಹಾನಿಗೆ ವಿಶ್ವಾಸ:
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಇದ್ದ ಇರಾನ್ ಬಗೆಗಿನ ಅಮೆರಿಕದ ನಿಲುವನ್ನು ಬೈಡೆನ್ ಮುಂದುವರಿಸಲಿದ್ದಾರೆ ಎಂದು ಅಲ್ಲಿನ ಅಧ್ಯಕ್ಷ ಹಸನ್ ರೊಹಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2017 ಜ.20ರಿಂದ ಮೊದಲು ಅಂದರೆ ಬರಾಕ್ ಒಬಾಮ ಅವಧಿಯಲ್ಲಿ ಜಾರಿಯಾಗಿದ್ದ ಪರಮಾಣು ಒಪ್ಪಂದ ಮತ್ತೆ ಜಾರಿಯಾದರೆ ಎಲ್ಲಾ ಸಮಸ್ಯೆಗಳೂ ಬಗೆ ಹರಿಯುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ