ಲಸಿಕೆ ಸಮಾಚಾರ
Team Udayavani, Jan 17, 2021, 1:58 AM IST
ನಮಗೆ ಕೊವ್ಯಾಕ್ಸಿನ್ ಬೇಡ: ವೈದ್ಯರ ಅಪಸ್ವರ :
ಲಸಿಕೆ ಆರಂಭದ ದಿನವೇ ಅಪಸ್ವರವೂ ಕೇಳಿಬಂತು. ದಿಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯರು “ನಮಗೆ ಕೊವ್ಯಾಕ್ಸಿನ್ ಬೇಡ. ಕೊವಿಶೀಲ್ಡ್ ಕೊಡಿ’ ಎಂಬ ಬೇಡಿಕೆಯ ಪತ್ರವನ್ನು ಮೇಲಧಿಕಾರಿಗಳಿಗೆ ರವಾನಿಸಿದ್ದಾರೆ. “ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಇನ್ನೂ ಪ್ರಯೋಗ ಹಂತದಲ್ಲಿದೆ. ಟ್ರಯಲ್ ವೇಳೆ ಇದನ್ನು ಸಾಕಷ್ಟು ಸಂಖ್ಯೆಯ ಪ್ರತಿನಿಧಿಗಳಿಗೆ ನೀಡಿಲ್ಲ. ಹೀಗಾಗಿ ಕೊವಿಶೀಲ್ಡನ್ನೇ ನಮಗೆ ನೀಡಿ’ ಎಂದು ಮನವಿ ಮಾಡಿದ್ದಾರೆ.
ನಾರ್ವೆಯಲ್ಲಿ ಫೈಜರ್ ಎಡವಟ್ಟು: 23 ಸಾವು! :
ನಾರ್ವೆಯಲ್ಲಿ ಫೈಜರ್ ಲಸಿಕೆ ಭಾರೀ ಎಡವಟ್ಟು ಸೃಷ್ಟಿಸುತ್ತಿದೆ. “ಫೈಜರ್ನ ಅಡ್ಡಪರಿಣಾಮದಿಂದಾಗಿ ರಾಷ್ಟ್ರದಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ’ ಎಂದು ಸರಕಾರ ಘೋಷಿಸಿದೆ. ಮೊದಲ ಡೋಸ್ ಪಡೆದಿದ್ದ ಇವರಲ್ಲಿ ಬಹುತೇಕರು ವಯಸ್ಸಾದವರು ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದವರೇ ಇದ್ದರು. ಮರಣೋತ್ತರ ಪರೀಕ್ಷೆ ಬಳಿಕ ಇವರಲ್ಲಿ 13 ಮಂದಿಗೆ ಒಂದೇ ರೀತಿಯ ಅಡ್ಡಪರಿಣಾಮಗಳು ದೃಢಪಟ್ಟಿವೆ. ಇನ್ನೊಂದೆಡೆ ನಾರ್ವೆಯಲ್ಲಿ ಫೈಜರ್ ಪಡೆದಿದ್ದ 21 ಮಹಿಳೆ ಮತ್ತು 8 ಪುರುಷರಿಗೆ ಶುಕ್ರವಾರ ಗಂಭೀರ ಅಡ್ಡಪರಿಣಾಮಗಳು ಶುರುವಾಗಿವೆ. ಇಷ್ಟಿದ್ದರೂ ಫೈಜರ್ ಸಂಸ್ಥೆ ಮಾತ್ರ, “ಇದುವರೆಗಿನ ಘಟನೆಗಳ ಸಂಖ್ಯೆ ಅಷ್ಟೇನೂ ಆತಂಕಕಾರಿಯಾಗಿಲ್ಲ. ತಲೆಕೆಡಿಸಿಕೊಳ್ಳಬೇಡಿ’ ಅಂತಲೇ ರಾಗ ಎಳೆದಿದೆ. ಡಿಸೆಂಬರ್ನಿಂದ ಇದುವರೆಗೆ 30 ಸಾವಿರಕ್ಕಿಂತ ಅಧಿಕ ಮಂದಿಗೆ ಫೈಜರ್ ನೀಡಲಾಗಿದೆ.
ಅಡ್ಡಪರಿಣಾಮ ಬೀರಿದರೆ ಪರಿಹಾರ :
ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಗಂಭೀರ ಅಡ್ಡಪರಿಣಾಮವೇನಾದರೂ ಉಂಟಾದರೆ, ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭಾರತ್ ಬಯೋಟೆಕ್ ಶನಿವಾರ ಘೋಷಿಸಿದೆ. ಪ್ರತಿಕೂಲ ಪರಿಣಾಮ ಕುರಿತು 7 ದಿನಗಳ ಒಳಗಾಗಿ ಮಾಹಿತಿ ನೀಡಲೆಂದು ಅರ್ಜಿಯೊಂದನ್ನೂ ನೀಡಿರುತ್ತೇವೆ ಎಂದು ಸಂಸ್ಥೆ ತಿಳಿಸಿದೆ.
ಪ್ರತಿಯೊಬ್ಬ ಭಾರತೀಯನಿಗೂ ಇದೊಂದು ಹೆಮ್ಮೆಯ ಕ್ಷಣ. ದಾಖಲೆ ಅವಧಿಯಲ್ಲಿ ಕ್ಷಿಪ್ರ ವೇಗದಲ್ಲಿ ಲಸಿಕೆ ಅಭಿವೃದ್ಧಿಪಡಿಸಿದ ಎಲ್ಲ ವಿಜ್ಞಾನಿಗಳನ್ನೂ ಅಭಿನಂದಿಸುತ್ತೇನೆ.-ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಈ ಲಸಿಕೆ ಅಭಿಯಾನವು ಸ್ವಾವಲಂಬಿ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇದೊಂದು ಐತಿಹಾಸಿಕ ಮೈಲುಗಲ್ಲು. –ಅಮಿತ್ ಶಾ, ಕೇಂದ್ರ ಗೃಹ ಸಚಿವ
ಮುಂದಿನ 100 ದಿನಗಳೊಳಗಾಗಿ ಎಲ್ಲ ದೇಶಗಳಲ್ಲೂ ಲಸಿಕೆ ಹಂಚಿಕೆ ಆರಂಭವಾಗಲಿ ಎಂದು ಆಶಿಸುತ್ತೇನೆ. ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕ ರಿಸ್ಕ್ ಹೊಂದಿರುವವರನ್ನು ಮೊದಲಿಗೆ ರಕ್ಷಿಸಬೇಕಿದೆ.-ಟೆಡ್ರೋಸ್ ಘೆಬ್ರೆಯೇಸಸ್, ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ