Udupi Paryaya 2024:ದಸರಾದಂತೆ ಕಂಗೊಳಿಸಲಿದೆ ಪುತ್ತಿಗೆ ಪರ್ಯಾಯ;ಸೆಲ್ಫಿ ಪ್ರಿಯರಿಗೆ ಹಬ್ಬ!
Team Udayavani, Jan 12, 2024, 4:53 PM IST
ಉಡುಪಿ: ಪುತ್ತಿಗೆ ಪರ್ಯಾಯಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ನಗರದ ಅಂದ-ಚೆಂದವೂ ಹೆಚ್ಚಳವಾಗತೊಡಗಿದೆ. ಈಗಾಗಲೇ ರಸ್ತೆ ಸಹಿತ ಒಳಚರಂಡಿ ಕಾಮಗಾರಿಗಳು ಭರದಿಂದ ನಡೆಯುತ್ತಿರುವಂತೆಯೇ ಕಾಪುವಿನಿಂದ ಶ್ರೀಕೃಷ್ಣ ಮಠ ಹಾಗೂ ಉಡುಪಿ ನಗರದ ಸುತ್ತಮುತ್ತಲೂ ವಿದ್ಯುತ್ ದೀಪಾಲಂಕಾರ ಹಾಗೂ ಕೇಸರಿ ಬಾವುಟಗಳು ರಾರಾಜಿಸತೊಡಗಿದೆ.
ಪರ್ಯಾಯ ಪೀಠಾರೂಢರಾಗುವ ಸ್ವಾಮೀಜಿ ಯವರು ಮುಂಜಾವ ತೀರ್ಥಸ್ನಾನ ಮಾಡಿ ಬರುವ ಕಾಪುವಿನ ದಂಡತೀರ್ಥದಿಂದ ಕಿನ್ನಿಮೂಲ್ಕಿವರೆಗೆ, ಕರಾವಳಿ ಬೈಪಾಸ್ನಿಂದ ಮಣಿಪಾಲದವರೆಗೆ, ಕಲ್ಸಂಕದಿಂದ ಅಂಬಾಗಿಲು ಮಾರ್ಗ ಸಹಿತ ನಗರದ ಒಳರಸ್ತೆಗಳಿಗೂ ಲೈಟಿಂಗ್, ಧ್ವಜಗಳ ಅಲಂಕಾರ ಮಾಡಲಾಗಿದೆ.
ಬಣ್ಣಗಳಿಂದ ಕಂಗೊಳಿಸಲಿದೆ ಉಡುಪಿ ಮಂಗಳೂರು ದಸರಾದಲ್ಲಿ ನಗರದ ಲೈಟಿಂಗ್ಗೇ ಪ್ರಮುಖ ಆಕರ್ಷಣೆಯಾಗಿದೆ. ಆ ಸೌಭಾಗ್ಯ ಈ ಬಾರಿ ಉಡುಪಿ ಜನತೆಗೂ ಒಲಿದುಬರಲಿದೆ. ಕೃಷ್ಣಾಪುರದ ಗಜಾನನ ಎಲೆಕ್ಟ್ರಿಕಲ್ಸ್ ಸಂಸ್ಥೆಯವರಿಗೆ ಇದರ ನಿರ್ವಹಣೆ ನೀಡಲಾಗಿದ್ದು ಈಗಾಗಲೇ ಬಹುತೇಕ ಕಡೆ ಲೈಟಿಂಗ್ಗಳನ್ನು ಅಳವಡಿಕೆ ಮಾಡಲಾಗಿದೆ. 9 ವ್ಯಾಟ್ ವಾರ್ಮ್ ಲೈಟ್ಗಳು, ಮೆಗಾ ಫೋಕಸ್ ಲೈಟ್ಗಳು, 20ರಿಂದ 25 ಬೃಹತ್ ಗಾತ್ರದ ಜನರೇಟ್ ಗಳು ಸಹಿತ ವಿವಿಧ ಬಗೆಯ ಆಲಂಕಾರಿಕ ಲೈಟ್ ಗಳನ್ನು ಬಳಕೆ ಮಾಡಲಾಗಿದೆ. ಈ ಬಾರಿ ಉಡುಪಿ ನಗರ ಬಣ್ಣ-ಬಣ್ಣಗಳಿಂದ ಕಂಗೊಳಿಸಲಿದೆ ಎನ್ನುತ್ತಾರೆ ಗಜಾನನ ಎಲೆಕ್ಟ್ರಿಕಲ್ಸ್ನ ಪ್ರಕಾಶ್ ರಾವ್.
ರಾರಾಜಿಸುತ್ತಿವೆ ಕೇಸರಿ ಬಾವುಟ
ವಿದ್ಯುತ್ ಕಂಬಗಳು, ನಗರದ ವೃತ್ತಗಳಿಗೆ ಕೇಸರಿ ಬಾವುಟಗಳ ಮೂಲಕ ಶೃಂಗಾರ ಮಾಡಲಾಗಿದೆ. ಜ. 17 ಹಾಗೂ ಜ.18ಕ್ಕೆ ಪರ್ಯಾಯೋತ್ಸವ ಸಂಭ್ರಮ ನಡೆಯಲಿದ್ದರೂ ನಗರದಲ್ಲಿ ಈಗಲೇ ಹಬ್ಬದ ವಾತಾವರಣ ಉಂಟಾಗಿದೆ. ವಿವಿಧೆಡೆಗಳಿಂದ ಆಗಮಿಸುತ್ತಿರುವ ಭಕ್ತರು ಕೂಡ ನಗರಾಲಂಕಾರಕ್ಕೆ ಮಾರು ಹೋಗಿದ್ದಾರೆ. ಬಸ್, ರೈಲು ಹಾಗೂ ಟೂರಿಸ್ಟ್ ವಾಹನಗಳ ಮೂಲಕ ದಿನನಿತ್ಯ ಶ್ರೀಕೃಷ್ಣ ಮಠಕ್ಕೆ ಆಗಮಿಸುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ.
ರಥಬೀದಿಯೊಳಗೆ 10 ಲಕ್ಷ + ಬಲ್ಬ್ ಗಳು!
ನಗರದ ಹೊರಭಾಗದಂತೆ ರಥಬೀದಿಯೊಳಗೂ ವಿದ್ಯುದ್ದೀಪಗಳು ಕಣ್ಸೆಳೆಯುತ್ತಿವೆ. ಈಗಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ಕೈಬೀಸಿ ಕರೆಯುತ್ತಿರುವ ಶ್ರೀಕೃಷ್ಣ ಮಠ ರಾತ್ರಿ ವೇಳೆ ವಿಭಿನ್ನ ಬೆಳಕಿನ ಚಿತ್ತಾರ ಮತ್ತಷ್ಟು ಪುಳಕ ನೀಡುತ್ತವೆ.
ರಥಬೀದಿ ಒಳಭಾಗ, ಶ್ರೀಕೃಷ್ಣ ಮಠ, ರಾಜಾಂಗಣ, ಪರ್ಯಾಯ ಶ್ರೀ ಪುತ್ತಿಗೆ ಮಠ, ಪೆಂಡಲ್ಗಳು, ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನಗಳಿಗೆ ಈಗಾಗಲೇ ಲೈಟಿಂಗ್ ಅಲಂಕಾರ ಮಾಡಲಾಗಿದೆ. ಪರ್ಯಾಯೋತ್ಸವದ ದಿನ ಎಲ್ಲ ನಗರಾಲಂಕಾರದ ಲೈಟ್ಗಳನ್ನು ಹಾಕಲಾಗಿದ್ದು, ಇನ್ನು ಜ.14ರ ಬಳಿಕ ರಾತ್ರಿ ವೇಳೆ ಲೈಟ್ಗಳನ್ನು ಆನ್ ಮಾಡಲಾಗುತ್ತದೆ.
ರಥಬೀದಿಯ ಒಳಭಾಗದಲ್ಲಿ 50ರಿಂದ 100ರಷ್ಟು ಆಲಂಕಾರಿಕ ಗೂಡುದೀಪಗಳು, ಬೃಹತ್ ಗಾತ್ರದ ಸುಮಾರು 3ರಿಂದ 4 ಸಾವಿರ ಬಲ್ಬ್ಗಳು, ವಿವಿಧ ವಿನ್ಯಾಸದ ಮಿನಿಯೇಚರ್ಗಳು, ರಾಕೆಟ್ ರೀತಿಯ ಮಿನಿಯೇಚರ್ಗಳು ರಥಬೀದಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರಥಬೀದಿಯ ಲೈಟಿಂಗ್ ವ್ಯವಸ್ಥೆಯನ್ನು ಉಡುಪಿಯ ಮಂಜುನಾಥ ಎಲೆಕ್ಟ್ರಿಕಲ್ಸ್ ಅವರಿಗೆ ನೀಡಲಾಗಿದ್ದು, ಈಗಾಗಲೇ ಬಹುತೇಕ ಎಲ್ಲ ಕಡೆ ಲೈಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಸಣ್ಣಪುಟ್ಟ ಕೆಲಸ ಕಾರ್ಯಗಳಷ್ಟೇ ಬಾಕಿ ಉಳಿದಿದೆ.
ಸೆಲ್ಫಿ ಪ್ರಿಯರಿಗೆ ಹಬ್ಬ!
ಬಣ್ಣಬಣ್ಣದ ಲೈಟಿಂಗ್ಗಳನ್ನು ಕಂಡಾಗ ಫೋಟೋ, ಸೆಲ್ಫಿ ತೆಗೆಸಿಕೊಳ್ಳದವರಿಲ್ಲ. ಅಂತಹವರಿಗೆ ಈ ಬಾರಿಯ ಪರ್ಯಾಯದಲ್ಲಿ
ಮತ್ತಷ್ಟು ಅವಕಾಶ ಸಿಗಲಿದೆ. ರಥಬೀದಿಯೊಳಗೆ ಹೊಕ್ಕಾಗ ಹಾಗೂ ಹೊರಭಾಗದಲ್ಲಿರುವ ಲೈಟಿಂಗ್ಗಳಿಗೆ ಮಾರುಹೋಗದವರಿಲ್ಲ. ಜತೆಗೆ ದಂಡತೀರ್ಥದಿಂದ ಕಿನ್ನಿಮೂಲ್ಕಿಯವರೆಗೆ ಲೈಟಿಂಗ್ ಅಳವಡಿಕೆ ಮಾಡಿರುವುದು ಈ ಬಾರಿಯ ಪರ್ಯಾಯದ ವಿಶೇಷತೆ. ಒಟ್ಟಿನಲ್ಲಿ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಸಂಪೂರ್ಣ ಸಜ್ಜುಗೊಂಡಿದ್ದು, ವಿವಿಧ
ವಿಶೇಷತೆಗಳ ಮೂಲಕ ಗಮನಸೆಳೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ
Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ
Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್