ಗುರುಪುರ: ಮನೆ ಮೇಲೆ ಗುಡ್ಡ ಕುಸಿತ : ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಸಾವು
ಮಂಗಳೂರು: ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ರವಿವಾರ ಮಂಗಳೂರು ಹೊರವಲಯದ ಗುರುಪುರ ಗ್ರಾ.ಪಂ. ವ್ಯಾಪ್ತಿಯ ಮಠದ ಗುಡ್ಡೆ (ಬಂಗ್ಲೆ ಗುಡ್ಡೆ )ಯಲ್ಲಿ ಸಂಭವಿಸಿದೆ. ಗುರುಪುರ ತಾರಿಕರಿಯ ನಿವಾಸಿ ಶರೀಫ್- ಶಾಹಿದಾ ದಂಪತಿಯ ಪುತ್ರ ಸರ್ಫಾನ್ (16) ಮತ್ತು ಪುತ್ರಿ ಸಹಲಾ (10) ಮೃತಪಟ್ಟವರು. ಶಾಹಿದಾ (36) ಗಾಯಗೊಂಡಿದ್ದಾರೆ. 10ಕ್ಕೂ ಅಧಿಕ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮಣ್ಣು ಕುಸಿತದಿಂದಾಗಿ ಮಹಮ್ಮದ್ ಮತ್ತು ಅಶ್ರಫ್ ಅವರ ಮನೆಗಳು ಸಂಪೂರ್ಣ ನೆಲಸಮಗೊಂಡಿದ್ದು ನಾಲ್ಕಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಎರಡು ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮ ಮಹಮ್ಮದ್ ಅವರ ಮನೆ ಪಕ್ಕದ ಗುಡ್ಡ ರವಿವಾರ ಮಧ್ಯಾಹ್ನ ಕುಸಿಯಲಾರಂಭಿಸಿತು. ಈ ವೇಳೆ ಮಕ್ಕಳು ಸಹಿತ 11 ಮಂದಿ ಮನೆಯಲ್ಲಿದ್ದರು. ತತ್ಕ್ಷಣ ಹೊರಗೋಡಿ ಬಂದು ಒಬ್ಬರನ್ನೊಬ್ಬರು ರಕ್ಷಿಸಲು ಯತ್ನಿಸಿದರು. ಅಷ್ಟರಲ್ಲಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದರು. ಅರ್ಧ ತಾಸಿನ ಬಳಿಕ ಮತ್ತೆ ಗುಡ್ಡ ಕುಸಿದು ಅಶ್ರಫ್ ಅವರ ಮನೆಯೂ ನೆಲಸಮಗೊಂಡಿತು. ಆದರೆ ಅಶ್ರಫ್ ಮನೆಯವರು ಅಷ್ಟರಲ್ಲೇ ತೆರಳಿದ್ದರಿಂದ ಪಾರಾದರು.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?