ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ
ಯಾದಗಿರಿಯಾದ ಕಾರಣ ರೈಲಿನಲ್ಲಿ ಪ್ರಯಾಣಿಸುವುದು ಕಷ್ಟವಾದರೂ ಒಂದು ಬಾರಿ ರೈಲಿನಲ್ಲಿ ಹೋಗಿದ್ದರು.
Team Udayavani
-ಮಟಪಾಡಿ ಕುಮಾರಸ್ವಾಮಿ
ಸಮ್ಮಾನದ ದಿನ ತಿಮ್ಮಯ್ಯನವರಿಗೆ ಅಧಿಕಾರ ಹಸ್ತಾಂತರಿಸಿ ನಿವೃತ್ತರಾದ ಚನ್ನ ರಾಯಪ್ಪನ ವರು ಹಿಂದೆ ಆದ ಘಟನೆಯನ್ನು ವಿವರಿಸಿದರು: ಒಮ್ಮೆ ಇನ್ಸ್ಪೆಕ್ಟರ್ ಬಂದಿದ್ದರು. ಮಧ್ಯಾಹ್ನ ಚೆನ್ನರಾಯಪ್ಪರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ತಿಮ್ಮಯ್ಯ ಮನೆಗೆ ಹೊರಡಲು ಅನುವಾದರು. ಶಾಸ್ತ್ರಿ ಗಳು "ಏ ಬಾರಪ್ಪ, ಸಾಹೇಬ್ರು ಇದಾರೆ, ಎಲ್ಲ ಊಟ ಮಾಡಿ ಒಟ್ಟಿಗೆ ಹೋದ್ರೆ ಆಯ್ತು' ಎಂದರು. ತಿಮ್ಮಯ್ಯ ವಿನಯವಾಗಿ ತಿರಸ್ಕರಿಸಿದರು. ಸ್ವಲ್ಪ ಸಿಟ್ಟಿನಲ್ಲಿ "ಏನಪ್ಪ ನೀನು? ಸಾಹೇಬ್ರು ಬಂದಿದ್ದಾರೆ. ಜೊತೆಗೆ ಗೌಡ್ರಿದ್ದಾರೆ. ಎಲ್ರೂ ಸೇರಿ ಊಟ ಮಾಡೋಣ ಅಂದ್ರೆ ಬರಲ್ಲಾಂತೀಯ? ಸಾಹೇಬ್ರಿಗೆ ಗೌರವ ಕೊಡಕ್ಕಾದ್ರೂ ಬಾ' ಎಂದರು...