ಅದಿವಾಸಿ ಮಕ್ಕಳ ನೆರವಿಗೆ ನಿಂತ ಮಹಿಳಾ ಕಾನ್ಸಟೇಬಲ್ “ಮುಂಬೈಯ ಮದರ್ ತೆರೇಸಾ”
ಇಡೀ ಕುಟುಂಬವನ್ನೇ ಕಳೆದುಕೊಂಡ ಕೆಲ ವ್ಯಕ್ತಿಗಳಿಗೆ ಮುಂದಿನ ದಾರಿ ಕಾಣದ್ದಷ್ಟು ದುಃಖ ಆವರಿಸಿಕೊಂಡಿರಬಹುದು.
ಸುಹಾನ್ ಶೇಕ್
ಇವರೆಲ್ಲದರ ಸಂಕಷ್ಟದ ನಡುವೆಯೂ ಕೆಲವೊಂದು ವಿಚಾರಗಳು , ಕೋವಿಡ್ ಸಮಯದಲ್ಲಿ ಆಶದಾಯಕವಾಗಿದೆ. ಯಾರೂ ಇಲ್ಲದವರಿಗೂ ನಾವಿದ್ದೇವೆ ಎನ್ನುವ ಆಸರೆಯನ್ನು ಎಷ್ಟೋ ಜನರು ಮುಂದೆ ಬಂದು ಸಹಾಯ ಮಾಡುತ್ತಿದ್ದಾರೆ. ಕಷ್ಟದಲ್ಲಿರುವ ಜನರಿಗೆ ಹಸಿವು ನೀಗಿಸುವ ಜನರು, ಆರ್ಥಿಕವಾಗಿ ಕುಗ್ಗಿರುವ ಕುಟುಂಬಕ್ಕೆ ನೆರವು, ಕೋವಿಡ್ ನಿಂದ ಎಲ್ಲರನ್ನೂ ಕಳೆದುಕೊಂಡು ದಿಕ್ಕೇ ತೋಚದ ಹರೆಯದ ಮಕ್ಕಳಲ್ಲಿ ಉತ್ಸಾಹವನ್ನು ಕಾಣಿಸುವ ಜನರು ನಿಜಕ್ಕೂ ಮಹಾನ್. ಇಂಥ ಮಹಾನ್ ಜನರಲ್ಲಿ, ಕೋವಿಡ್ ವಾರಿಯರ್ಸ್ ರಲ್ಲಿ ಒಬ್ಬರು ರೆಹಾನಾ ಶೇಕ್ ಭಗವಾನ್.