ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ
Team Udayavani, Jan 30, 2022, 7:21 AM IST
ಮೇಷ:
ಮಾತೃ ಸಮಾನರಿಂದ, ಸ್ತ್ರೀಯರಿಂದ ಸುಖ. ಗೃಹೋಪಕರಣಗಳಲ್ಲಿ ವೃದ್ಧಿ. ದೂರದ ಮಿತ್ರರ ಸಮಾಗಮ. ಆಹಾರ ಸೇವನೆಯಲ್ಲಿ ಮಿತವಿರಲಿ. ಹಿಂದೆ ಮಾಡಿದ ಸತ್ಕಾರ್ಯದಿಂದ ಶ್ಲಾಘನೆ. ದೇವತಾ ಸನ್ನಿದಾನ ದರ್ಶನದಿಂದ ತೃಪ್ತಿ.
ವೃಷಭ:
ಕಾರ್ಯ ಕ್ಷೇತ್ರದಲ್ಲಿ ಅತೀ ಶ್ರಮ ವಹಿಸಿ ಗುರಿ ಸಾಧನೆ. ಮಾನಸಿಕ ಗೊಂದಲ ವಿದ್ದರೂ ಕಿರಿಯರಿಂದ ಸಹಾಯ ಒದಗುವುದು. ಆತುರದ ನಿರ್ಣಯ ಬೇಡ. ಸಣ್ಣ ಪ್ರಯಾಣದಿಂದ ಲಾಭ. ಮನೆಯಲ್ಲಿ ಸಂಭ್ರಮದ ವಾತಾವರಣ.
ಮಿಥುನ:
ಧನಾಗಮ ವೃದ್ಧಿ. ಸಮಯಕ್ಕೆ ಸರಿಯಾಗಿ ಸಹಾಯ ಒದಗುವುದು. ಉತ್ತಮ ವ್ಯಕ್ತಿಗಳ ಒಡನಾಟ. ಪರವೂರ ಕಾರ್ಯದಲ್ಲಿ ಜಯ. ಉತ್ತಮ ಬದಲಾವಣೆ ಲಾಭದ ವಿಚಾರದಲ್ಲಿ ತೃಪ್ತಿ ಇರಲಿ. ಆರೋಗ್ಯ ವೃದ್ಧಿ.
ಕಟಕ:
ಸಾಹಸದಿಂದ ದಿನ ಆರಂಭ. ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ. ಉತ್ತಮ ಆಲೋಚನೆ. ಮಿತ್ರರ ಸಹಾಯದಿಂದ ಜಯ. ಹಿಂದೆ ಶತ್ರುಗಳಾದವರಿಂದ ಸಂಧಾನ ಪ್ರಸ್ತಾಪ. ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ.
ಸಿಂಹ:
ಉನ್ನತ ಸ್ಥಾನಮಾನ ಕಾರ್ಯ ಸಾಧನೆಗೆ ಆರ್ಥಿಕ ವ್ಯಯ. ಮಾತಿನಲ್ಲಿ ಸಹನೆ ಅಗತ್ಯ. ನಿರೀಕ್ಷಿತ ಸಹಾಯ ಲಭಿಸದು. ವಿರೋಧಿಗಳಿಗೆ ಅವಕಾಶ ನೀಡಬೇಡಿ. ನಿಮ್ಮ ಆಲೋಚನೆಯೊಂದಿಗೆ ನಡೆಯಿರಿ. ಅನ್ಯರ ಸಹಾಯ ಬೇಡ.
ಕನ್ಯಾ:
ಅನಿರೀಕ್ಷಿತ ಸ್ಥಾನಮಾನ ಗೌರವ ಸಿಗುವ ದಿನ. ಉದ್ಯೋಗದಲ್ಲಿ ತೃಪ್ತಿ. ಧನ ಲಾಭವಿದ್ದರೂ ಖರ್ಚಿನ ಹಿಡಿತವಿರಲಿ. ನೂತನ ವ್ಯವಹಾರದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆ ಇರಲಿ. ಹಿರಿಯರ ಆಶೀರ್ವಾದದಿಂದ ಅಭಿವೃದ್ಧಿ.
ತುಲಾ:
ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲವೆಂದು ಬೇಸರ ಬೇಡ. ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟವಾಗುವ ಸಾಧ್ಯತೆ. ದೂರ ಪ್ರದೇಶದ ಕೆಲಸ ಕಾರ್ಯಗಳಲ್ಲಿ ತೃಪ್ತಿ ಸಮಾಧಾನ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ.
ವೃಶ್ಚಿಕ:
ದೇವತಾ ಸ್ಥಳ ಸಂದರ್ಶನ. ದೂರ ಪ್ರಯಾಣ. ಗುರುಹಿರಿಯರ ಆಶೀರ್ವಾದ. ನೂತನ ಮಿತ್ರರ ಭೇಟಿ. ಮನೆಯಲ್ಲಿ ಸಂತಸದ ವಾತಾವರಣ. ಜಲೋತ್ಪನ್ನ ವ್ಯವಹಾರದಲ್ಲಿ ಅಭಿವೃದ್ಧಿ. ಮಕ್ಕಳ ವಿಷಯದಲ್ಲಿ ಸಂತಸ.
ಧನು:
ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ವಿಘ್ನ ಪರಿಹಾರ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಹಿಡಿತವಿರಲಿ. ದಾಂಪತ್ಯ ಸುಖ ಪ್ರೋತ್ಸಾಹ. ಮಿತ್ರರಿಂದ ಲಾಭ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ.
ಮಕರ:
ಕೆಲಸ ಕಾರ್ಯಗಳಲ್ಲಿ ಪಾಲುದಾರಿಕಾ ವ್ಯವಹಾರದಲ್ಲಿ ಲಾಭ. ಹಿರಿಯರ ಮನಸ್ಸನ್ನು ನೋಯಿಸಿದಿರಿ. ಸಣ್ಣ ಪ್ರಯಾಣದಿಂದ ಲಾಭ. ಆರೋಗ್ಯ ಸುಧಾರಣೆ. ದೇವತಾ ಕಾರ್ಯದಲ್ಲಿ ಭಾಗಿಯಾದ ತೃಪ್ತಿ.
ಕುಂಭ:
ಶೀತ ಕಫ ಬಾಧೆ ಇದ್ದರೂ ಆರೋಗ್ಯ ಸುಧಾರಿಸುವುದು. ಧನ ಲಾಭದ ಕೊರತೆ ಇರದು. ಅನ್ಯರ ಸಂಪರ್ಕ ಸಹಾಯದ ನಿರೀಕ್ಷೆ ಸಲ್ಲದು. ಮನೆಯಲ್ಲಿ ಶಾಂತಿ ಸಮಾಧಾನಕ್ಕೆ ಆದ್ಯತೆ ನೀಡಿ. ಕಾರ್ಯ ಕ್ಷೇತ್ರದಲ್ಲಿ ಏಕಾಗ್ರತೆ ಅಗತ್ಯ.
ಮೀನ:
ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ಗೌಪತ್ಯಯಿಂದ ಲಾಭ. ಸಂದರ್ಭಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶಿಸಿ. ದೂರದ ವ್ಯವಹಾರದಲ್ಲಿ ಲಾಭ. ದಾಂಪತ್ಯ ಸುಖ ಉತ್ತಮ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಗುರುಹಿರಿಯರ ಉತ್ತಮ ಮಾರ್ಗದರ್ಶನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು