ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ
Team Udayavani, Jan 26, 2022, 7:15 AM IST
ಮೇಷ:
ಚುರುಕು ಬುದ್ಧಿ ಇದ್ದರೂ ಸ್ವಾಭಿಮಾನ ಶಾಂತ ಸ್ವಭಾವದಿಂದ ಕೂಡಿದ ಕಾರ್ಯ ವೈಖರಿ. ಸಫಲತೆ ರಾಜಕೀಯ ವಿಚಾರದಲ್ಲಿ ಬೇಸರವಿದ್ದರೂ ಸ್ಥಾನಮಾನ ಪ್ರಾಪ್ತಿ. ಮಕ್ಕಳ ವಿಚಾರದಲ್ಲಿ ಹಿರಿಯರಿಗೆ ಶ್ರಮ.
ವೃಷಭ:
ಗೃಹೋಪಕರಣ ವಸ್ತು ಸಂಗ್ರಹ. ಧನಾರ್ಜನೆಗೆ ಕೊರತೆ ಇರದು. ದಾನಧರ್ಮದಿಂದ ತೃಪ್ತಿ. ಮಕ್ಕಳಿಂದ ಸುಖ. ಮಿತ್ರರು, ಸಹೋದರ ಸಹೋದರಿಯರೊಂದಿಗೆ ವೈಮನಸ್ಸಿಗೆ ಅವಕಾಶ ನೀಡದಿರಿ.
ಮಿಥುನ:
ಉತ್ತಮ ಜನರ ಒಡನಾಟದಿಂದ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ತೃಪ್ತಿ. ಪ್ರಯಾಣದಿಂದ ನಿರೀಕ್ಷಿತ ಕಾರ್ಯ ಸಾಧನೆ.
ಕಟಕ:
ದೇವತಾ ಕಾರ್ಯದಿಂದ ಶ್ರದ್ಧೆ ಭಕ್ತಿ ಪೂರ್ವಕ ನಿಮ್ಮನ್ನು ತೊಡಗಿಸಿಕೊಂಡು ಸಂತೋಷ ಪಡುವ ಸಮಯ. ಸರಕಾರಿ ಕಾರ್ಯ ಕ್ಷೇತ್ರದಲ್ಲಿ ಪ್ರಗತಿ. ವಾತ, ಕಫ ಸಂಬಂಧ ದೋಷ ಬರದಂತೆ ಜಾಗ್ರತರಾಗಿರಿ.
ಸಿಂಹ:
ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ಮೇಲಧಿಕಾರಿಗಳ ಗಮನಕ್ಕೆ ಒಳಗಾಗುವಿರಿ. ಸರಿಯಾಗಿ ವಿವೇಕತೆ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಉತ್ತಮ ಪ್ರಗತಿ ನಿಮ್ಮದಾಗಿಸಿಕೊಳ್ಳಿ.
ಕನ್ಯಾ:
ಅನ್ಯರ ಸಹಾಯವನ್ನು ಅಪೇಕ್ಷಿಸದೆ ಸ್ವಂತ ಪ್ರಯತ್ನದಿಂದ ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ತೃಪ್ತಿ. ಉತ್ತಮ ಧನಾಗಮನವಿದ್ದರೂ ಖರ್ಚಿನ ಬಗ್ಗೆ ನಿಗಾ ವಹಿಸಿ.
ತುಲಾ:
ಉತ್ತಮ ಆಲೋಚನೆಯಿಂದಲೂ ರಂಜಿಸುವ ಗುಣದಿಂದಲೂ ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಅನಿರೀಕ್ಷಿತ ಧನಾಗಮ, ಕೀರ್ತಿ ಸ್ಥಾನ ಲಾಭ. ಆತ್ಮವಿಶ್ವಾಸದಿಂದ ಕೂಡಿದ ಕಾಲ. ಮನೆಯಲ್ಲಿ ಸಂತಸದ ವಾತಾವರಣ.
ವೃಶ್ಚಿಕ:
ಕೆಲವು ಸಮಯದಿಂದ ವಹಿಸಿ ಕೊಂಡು ಬಂದ ಕ್ಲೇಷಗಳಿಗೆ ಮುಕ್ತಿ. ಪೂರ್ವ ನಿರ್ಧಾರಿತ ಯೋಜನೆಗಳು ಸಫಲಗೊಂಡು ಸಂಭ್ರಮಿಸುವ ಕಾಲ. ನಾಯಕತ್ವ ಗುಣದಿಂದ ನಿರೀಕ್ಷಿತ ಸಾಧನೆ. ಧನ ಲಾಭ.
ಧನು:
ಗುರುಹಿರಿಯರೊಂದಿಗೆ ವೈಮನಸ್ಸಿಗೆ ಅವಕಾಶ ನೀಡದಿರಿ. ಮಾನಸಿಕ ಗೊಂದಲಕ್ಕೆ ಒಳಗಾಗದೇ ತಾಳ್ಮೆ, ವಿವೇಕ, ಉದಾರಿತನದಿಂದ ಕಾರ್ಯ ಸಾಧನೆಗೆ ವಿಪುಲ ಅವಕಾಶ. ದೂರ ಪ್ರಯಾಣ ದಲ್ಲಿ ವಿಳಂಬ.
ಮಕರ:
ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಸ್ಥಿತಿ ಆರೋಗ್ಯಕ್ಕೋಸ್ಕರ ಯೋಗ, ವ್ಯಾಯಾಮ ಮನೋರಂಜನೆ ಕಡೆ ಗಮನಹರಿಸಿ. ಮಾತೃ ಪಿತೃ ಸಮಾನರ ಆರೋಗ್ಯದ ಕಡೆ ಗಮನ ಹರಿಸಿ. ನೂತನ ಮಿತ್ರರ ಭೇಟಿ.
ಕುಂಭ:
ಹೆಚ್ಚಿನ ಸ್ಥಾನ, ಧನಾರ್ಜನೆಗೋಸ್ಕರ ಪ್ರಯಾಣ. ಉದ್ಯೋಗ ಬದಲಾವಣೆಯ ಆಲೋಚನೆ. ಗುರುಹಿರಿಯರಿಗೆ, ಮೇಲಧಿಕಾರಿಗಳಿಗೆ ತೊಂದರೆ ಕೊಡದೆ ಪ್ರಮಾಣಿಕತೆಯಿಂದ ನಿಷ್ಠೆಯಿಂದ ವ್ಯವಹರಿಸಿ ಅಭಿವೃದ್ಧಿ ಸಾಧಿಸಿರಿ.
ಮೀನ:
ಗೌಪತ್ಯೆಯ ವ್ಯವಹಾರದಿಂದ ಲಾಭ. ಪಾಲುದಾರಿಕಾ ವ್ಯವಹಾರದಲ್ಲಿ ವಾದ ವಿವಾದಕ್ಕೆ ಅವಕಾಶ ನೀಡದೇ ಪರಸ್ಪರ ಪ್ರೋತ್ಸಾಹದಿಂದ ಅಭಿವೃದ್ಧಿ. ಸಾಲಗಾರರ ಭಯವಿದ್ದರೂ ಆರ್ಥಿಕ ವಿಚಾರದಲ್ಲಿ ಸಣ್ಣ ಪ್ರಮಾಣದ ಉಳಿತಾಯ ಸಾಧಿಸುವಿರಿ. ಆರೋಗ್ಯ ವಿಚಾರದಲ್ಲಿ ಗಮನವಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!