ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!
Team Udayavani, Apr 23, 2021, 7:41 AM IST
23-04-2021
ಮೇಷ: ಕಾರ್ಯಕ್ಷೇತ್ರದಲ್ಲಿ ನಿಮ್ಮ ವಿರೋಧಿಗಳು ನಿವಾರಣೆಯಾದರೂ ಭಯಭೀತಿಯು ನಿಮಗೆ ಇದ್ದೇ ಇರುವುದು. ಆರ್ಥಿಕವಾಗಿ ನಿಮ್ಮಲ್ಲಿ ಹೇರಳ ಧನ ಸಂಪತ್ತಿದ್ದರೂ ತಾತ್ಕಾಲಿಕವಾಗಿ ಕಳವಳವಾದೀತು. ಧೈರ್ಯದಿಂದ ಮುನ್ನಡೆಯಿರಿ.
ವೃಷಭ: ಉದರಕ್ಕೆ ಸಂಬಂಧಿಸಿದ ಅನಾರೋಗ್ಯವು ಕಂಡುಬರುವುದು. ನೌಕರ ವರ್ಗದವರಿಗೆ ಮುಂಭಡ್ತಿಯ ಯೋಗವು ಕಂಡುಬರುವುದು. ನೌಕರ ವರ್ಗದವರಿಗೆ ಅಸಾಧ್ಯವಾದ ಕಷ್ಟಗಳು ಕಂಡುಬಂದರೂ ಸುಧಾರಿಸಬಹುದು.
ಮಿಥುನ: ಶುಭಮಂಗಲ ಕಾರ್ಯಗಳು ಅಡೆತಡೆಗಳಿಂದಲೇ ಜರಗುವುವು. ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಮುಂದುವರಿದಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. ಮಧ್ಯಸ್ಥಿಕೆ, ಪಂಚಾತಿಕೆಗಳಿಂದ ದೂರವಿರುವುದು.
ಕರ್ಕ: ಅಸೂಯಪರವಾದ ಜನರಿಂದ ದೂರವಿದ್ದಷ್ಟು ಉತ್ತಮ. ಗೃಹದಲ್ಲಿ ಆಗಾಗ ಪತಿ, ಪತ್ನಿಯೊಳಗೆ ವಾದ- ವಿವಾದಗಳು ಸೃಷ್ಟಿಯಾದೀತು. ಮೌನವಾಗಿದ್ದರೆ ಉತ್ತಮ. ಮನೆಯ ಸದಸ್ಯರಿಗೆ ದೇಹಾರೋಗ್ಯದಲ್ಲಿ ಏರುಪೇರಾದೀತು.
ಸಿಂಹ: ಸರಕಾರಿ ಕೆಲಸ ಕಾರ್ಯಗಳು ಸುಗಮವಾಗಿ ಜರಗಲಿವೆ. ಉದ್ಯೋಗದಲ್ಲಿ ಮುಂಭಡ್ತಿಯ ಅವಕಾಶವು ಕಂಡುಬರುವುದು. ಮನೆಯಲ್ಲಿ ಹಿರಿಯ ವ್ಯಕ್ತಿಗಳಿಗೆ ಅನಾರೋಗ್ಯ ಕಂಡು ಬಂದೀತು. ಅಧಿಕಾರಿಗಳಿಂದ ಕಿರುಕುಳವಿದ್ದೀತು.
ಕನ್ಯಾ: ಆರ್ಥಿಕರಂಗದಲ್ಲಿ ಅಭಿವೃದ್ಧಿ ಕಂಡುಬಂದೀತು. ಹಂತಹಂತವಾಗಿ ಆತಂಕಗಳು ಹಗುರವಾಗಲಿದೆ. ಋಣಬಾಧೆ ನಿವಾರಣೆಯಿಂದ ಸಮಾಧಾನವಾಗಲಿದೆ. ಕೌಟುಂಬಿಕ ವಾದ-ವಿವಾದಗಳಿಗೆ ಸಿಲುಕದಂತೆ ಇರಿ.
ತುಲಾ: ಆಗಾಗ ಪಿತ್ತ ಯಾ ಉಷ್ಣ ಪ್ರಕೋಪದಿಂದ ಶರೀರದಲ್ಲಿ ಬಾಧೆ ಕಾಣಿಸಬಹುದು. ಅವಿವಾಹಿತರಿಗೆ ಯೋಗ್ಯ ವೈವಾಹಿಕ ಪ್ರಸ್ತಾಪಗಳು ಕೂಡಿಬರಲಿದೆ. ಕಟ್ಟಡ ಕಾಮಗಾರಿ ಕೆಲಸಗಾರರಿಗೆ ಒಳ್ಳೆಯ ಲಾಭಾಂಶವಿರುತ್ತದೆ.
ವೃಶ್ಚಿಕ: ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚಲಿದ್ದು ಕೆಳವರ್ಗದವರಿಗೆ ಹಿಂಸೆ ತಂದೀತು. ಆಕಸ್ಮಿಕವಾಗಿ ಧನ ಸಂಪತ್ತು ಕೈಗೆ ಬಂದೀತು. ಸರಕಾರೀ ಕೆಲಸ ಕಾರ್ಯಗಳಿಗಾಗಿ ಹಲವು ಖರ್ಚುಗಳು ಬಂದು ತಲೆ ಕೆಡಲಿದೆ.
ಧನು: ಆಗಾಗ ತಾಪತ್ರಯಗಳು ಹೆಚ್ಚಾಗಲಿದ್ದು ಆತಂಕ ತಂದೀತು. ಮನೆಯ ಸದಸ್ಯರಿಗೆ ಶೀತ, ಕಫಬಾಧೆ ಕಂಡುಬರಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯದ ಚಿಂತನೆ ನಡೆಯಲಿದೆ. ಅತಿಥಿಗಳ ಆಗಮನದಿಂದ ಖರ್ಚು ಇದೆ.
ಮಕರ: ಮನೆಯಲ್ಲಿ ಮಕ್ಕಳ ಆಗಮನದಿಂದ ಸಂತಸ ಕಂಡುಬರುವುದು. ತೀರ್ಥಕ್ಷೇತ್ರ ಯಾ ಪ್ರವಾಸಗಳಿಗೆ ಹೋಗುವ ಮನಸ್ಸಾಗಲಿದೆ. ಕುಂಬಾರ, ಬೇಸಾಯದ ಕೆಲಸಗಾರರಿಗೆ ಸ್ವಲ್ಪ ಆಲೋಚನೆ ಮಾಡಿ ಮುನ್ನಡೆಯಬೇಕಾದೀತು.
ಕುಂಭ: ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಹಾಗೂ ಅಪಮಾನ ಪ್ರಸಂಗ ಎದುರಾಗಲಿರುವುದರಿಂದ ಆದಷ್ಟು ಜಾಗ್ರತೆ ಮಾಡತಕ್ಕದ್ದು . ನರಸಂಬಂಧಿ ಅನಾರೋಗ್ಯವು ಕಾಡಲಿದೆ. ವೈದ್ಯರ ಸಂದರ್ಶನದ ಅವಶ್ಯಕತೆ ಇದೆ.
ಮೀನ: ಪ್ರತಿಷ್ಠಿತ ಸ್ಥಾನಮಾನಕ್ಕಾಗಿ ಪ್ರತಿಸ್ಪರ್ಧಿಗಳ ಕಾಟ ಕಂಡುಬರುವುದು. ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಕಂಡುಬಂದು ತಲೆ ಕೆಡಲಿದೆ. ಕ್ರೀಡಾಳುಗಳಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಆರೋಗ್ಯ ಅಭಿವೃದ್ಧಿ ಇದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್